ಪ್ರಭಾವಿಗಳಿಂದ ಜಮೀನು ಸ್ವಾಧೀನ ಸೈನಿಕರ ಕುಟುಂಬಗಳಿಗೆ ಅನ್ಯಾಯ : ಡಾ.ಶಿವಣ್ಣ ಆರೋಪ
ಭೂ ಮಂಜೂರಾತಿ ವಿಳಂಬ : ಮಾಜಿ ಸೈನಿಕರ ಪ್ರತಿಭಟನೆ
Team Udayavani, May 11, 2022, 7:13 PM IST
ಕುಣಿಗಲ್ : ಸೈನಿಕರಿಗೆ ಹಾಗೂ ಮಾಜಿ ಸೈನಿಕರಿಗೆ ಜಮೀನು ಮಂಜೂರು ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ತಾಲೂಕು ಆಡಳಿತದ ಕ್ರಮವನ್ನು ಖಂಡಿಸಿ ತಾಲೂಕು ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಸೈನಿಕರಿಗೆ ವ್ಯವಸಾಯ ಉದ್ದೇಶಗಳಿಗಾಗಿ ಭೂ ಮಂಜೂರಾತಿಯ ನಿಯಮಗಳ ಅಡಿಯಲ್ಲಿ ಅರ್ಜಿ ಸಲ್ಲಿಸಿ ಮೂರು ವರ್ಷ ಕಳೆದರೂ ಈವರೆಗೂ ಅರ್ಜಿ ವಿಲೇವರಿ ಮಾಡದೇ ಸಬೂಬು ಹೇಳುತ್ತಿದೆ ಎಂದು ಆರೋಪಿಸಿ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ.ಎನ್.ಕೆ.ಶಿವಣ್ಣ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಆಡಳಿತ ವಿರುದ್ದ ದಿಕ್ಕಾರ ಕೂಗಿದರು. ಪ್ರತಿಭಟನೆಗೆ ಪಿಕಾರ್ಡ್ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಸ್.ಬಲರಾಮ್, ಮುಖಂಡ ಹೆಚ್.ಡಿ.ರಾಜೇಶ್ಗೌಡ ಸಾಥ್ ನೀಡಿದರು.
ರಾಜ್ಯಾಧ್ಯಕ್ಷ ಶಿವಣ್ಣ ಮಾತನಾಡಿ ತಾಲೂಕಿನ ಸೈನಿಕರು ಹಾಗೂ ಮಾಜಿ ಸೈನಿಕರು ಭೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿರುತ್ತಾರೆ, ಅನಗತ್ಯ ವಿಳಂಬ ಮಾಡದೇ ನಿಗಧಿತ ಅವಧಿಯಲ್ಲಿ ಜೇಷ್ಠತೆಯ ಆಧಾರದ ಮೇಲೆ ಕ್ರಮಕೈಗೊಂಡು ಮೂರು ತಿಂಗಳ ಒಳಗೆ ಅರ್ಜಿ ವಿಲೇವಾರಿ ಮಾಡುವಂತೆ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು 24-06-2021 ರಂದು ಸುತ್ತೋಲೆ ಹೊರಡಿಸಿ ಎರಡು ಮೂರು ವರ್ಷಗಳಾದರೂ ಈವರೆಗೂ ಈ ಸಂಬಂಧ ತಾಲೂಕು ಆಡಳಿತ ಕ್ರಮಕೈಗೊಂಡು ಅರ್ಜಿಗಳು ವಿಲೇವಾರಿ ಮಾಡದೇ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಇಡಿಯಿಂದ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಬಂಧನ, 20 ಕೋಟಿ ರೂ. ಜಪ್ತಿ!
ಪ್ರಭಾವಿಗಳ ಒತ್ತಡ : ಈ ಹಿಂದೆ ತಾಲೂಕಿನ ಮಾದಪ್ಪನಹಳ್ಳಿ ಗ್ರಾಮದ ಸರ್ವೆ ನಂಬರ್ 23/5 ರಲ್ಲಿ ಸುಮಾರು ಐದು ಜನ ಮಾಜಿ ಸೈನಿಕರಿಗೆ ಭೂ ಮಂಜೂರಾಗಿದ್ದು ಈ ಜಮೀನನ್ನು ಸ್ಥಳೀಯ ಪ್ರಭಾವಿಗಳು ಸ್ವಾಧೀನ ಪಡಿಸಿಕೊಂಡು ಮಾಜಿ ಸೈನಿಕರ ಕುಟುಂಬಗಳಿಗೆ ಅನ್ಯಾಯ ಮಾಡಿದ್ದಾರೆ, ಈ ಸಂಬಂಧ ಮಾಜಿ ಸೈನಿಕನ ಪತ್ನಿ ವಿಜಯ ಕುಮಾರಿ ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ಬಿಡಿಸಿಕೊಡುವಂತೆ ಆನೇಕ ಭಾರಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು, ಇದರ ಬಗ್ಗೆ ಕ್ರಮಕೈಗೊಳ್ಳುವಲ್ಲಿ ತಹಶೀಲ್ದಾರ್ ವಿಫಲಗೊಂಡಿದ್ದಾರೆ ಎಂದು ಶಿವಣ್ಣ ಕಿಡಿಕಾರಿದರು.
ಸಬೂಬು : ತಾಲೂಕು ಭೂ ಮಂಜೂರಾತಿ ವಿಭಾಗದ ದಾಖಲೆಯಂತೆ ಜಮೀನಿಗಾಗಿ ಸುಮಾರು 90 ಸೈನಿಕ ಹಾಗೂ ಮಾಜಿ ಸೈನಿಕರು ಅರ್ಜಿ ಸಲ್ಲಿಸಿದ್ದಾರೆ, ಈ ಪೈಕಿ ಕೇವಲ 10 ಜನರಿಗೆ ಮಾತ್ರ ಜಮೀನು ಮಂಜೂರಾಗಿದೆ, ಉಳಿದ ಫಲಾನುಭವಿಗಳ ದಾಖಲೆಗಳು ಸಮರ್ಪಕವಾಗಿ ಇಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ, ತಮ್ಮ ಜೀವನದ ಅಂಗು ತೊರೆದು ದೇಶದ ರಕ್ಷಣೆಯಲ್ಲಿ ಸೇವೆ ಸಲ್ಲಿಸಿದ ಸೈನಿಕರಿಗೆ ಸತಾಯಿಸುವ ಅಧಿಕಾರಿಗಳು ಸಾಮಾನ್ಯ ಜನರಿ ಗತಿಏನು ಎಂದು ಪ್ರಶ್ನಿಸಿದರು.
ಆಸ್ತಿಗಾಗಿ ನಖಲಿ ದಾಖಲೆ ಸೃಷ್ಠಿ : ಮಾಜಿ ಸೈನಿಕ ಪತ್ನಿ ಲೋಲಾಕ್ಷಮ್ಮ ಮಾತನಾಡಿ ತಾಲೂಕಿನ ಕಸಬಾ ಹೋಬಳಿ ಕೂತಾರಹಳ್ಳಿ ಗ್ರಾಮದಲ್ಲಿ ಪಿತ್ರಾರ್ಜಿತವಾಗಿ ದಾನವಾಗಿ ಬಂದಿರುವ 28 ಗುಂಟೆ ಜಮೀನನ್ನು ಶಿವರಾಮ ಎಂಬುವವನು ನಖಲಿ ದಾಖಲೆಗಳನ್ನು ಸೃಷ್ಠಿಸಿ, ಪೌತಿವಾರಸುದಾರರ ಮೇರೆಗೆ ಇನ್ನು ಬಧುಕಿರುವ ನನ್ನನು ಮೃತಪಟ್ಟಿದ್ದಾಳೆ ಎಂದು ನಖಲಿ ದಾಖಲೆ ಸೃಷ್ಠಿಸಿ ಆಸ್ತೆಯನ್ನೆಲ್ಲಾ ಶಿವರಾಮನ ಹೆಸರಿಗೆ ಮಾಡಿಕೊಂಡಿದ್ದಾನೆ, ಹೀಗಾಗಿ ನ್ಯಾಯ ದೊರಕಿಸಿಕೊಡುವಂತೆ ತಹಶೀಲ್ದಾರ್ ಅವರನ್ನು ಆಗ್ರಪಡಿಸಿದರು, ತಹಶೀಲ್ದಾರ್ ಮಹಬಲೇಶ್ವರ ಮಾತನಾಡಿ ಸರ್ಕಾರ ನಿಯಮದ ಪ್ರಕಾರ ಸರ್ಕಾರಿ ಖಾಲಿ ಜಮೀನನ್ನು ಗುರುತಿಸಿ ಶೇ 10 ಸೈನಿಕರಿಗೆ ಮೀಸಲಿಟ್ಟು ಹಂಚಿಕೆ ಮಾಡಲು ಕ್ರಮಕೈಗೊಳ್ಳಲಾಗುವುದು, ಕೆಲವೋಂದು ದಾಖಲೆಗಳು ನನ್ನ ಅವಧಿಯಲ್ಲಿ ಆಗಿರುವುದಲ್ಲ, ಹಿಂದೆ ಏನಾದರೂ ತಪ್ಪಾಗಿದ್ದರೇ ಅದನ್ನು ಸರಿಪಡಿಸಿ ನ್ಯಾಯದೊರಕಿಸಿಕೊಡುವುದ್ದಾಗಿ ಭರವಸೆ ನೀಡಿದರು, ಭರವಸೆ ಹಿನ್ನಲೆಯಲ್ಲಿ ಸೈನಿಕರು ಪ್ರತಿಭಟನೆಯನ್ನು ಕೈ ಬಿಟ್ಟರು.
ಪ್ರತಿಭಟನೆಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಎ.ಆರ್.ರಮೇಶ್, ಕಾರ್ಯದರ್ಶಿ ನಾಗರಾಜು, ನಿವೃತ್ತ ಸೈನಿಕರಾದ ಮರಿಗೌಡ, ರಾಮ್ರಾವ್, ಸಂತೋಷ್, ಜಯಣ್ಣ, ಮೋಹನ್ರಾವ್, ವೇಣು, ವಾಸು, ಪ್ರಕಾಶ್ ಹಾಗೂ ಮೈಸೂರು, ಮಂಡ್ಯ, ನಾಗಮಂಗಲ, ಹಾಸನ, ತುಮಕೂರು ಮೊದಲಾದ ಜಿಲ್ಲೆಗಳಿಂದ ಮಾಜಿ ಸೈನಿಕರು ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ