ವಿಜಯನಗರದಂತೆ ಮಧುಗಿರಿಯೂ ಜಿಲ್ಲೆಯಾಗಲೇಬೇಕು

ಸರ್ಕಾರಕ್ಕೆ ಶಾಸಕ ವೀರಭದ್ರಯ್ಯ ಒತ್ತಾಯ ಜಿಲ್ಲಾಕೇಂದ್ರದಿಂದ ನಿರುದ್ಯೋಗ ಸಮಸ್ಯೆ ನಿವಾರಣೆ

Team Udayavani, Dec 16, 2020, 5:37 PM IST

ವಿಜಯನಗರದಂತೆ ಮಧುಗಿರಿಯೂ ಜಿಲ್ಲೆಯಾಗಲೇಬೇಕು

ಮಧುಗಿರಿ: ರಾಜ್ಯದಲ್ಲಿ ವಿಜಯನಗರ ಜಿಲ್ಲೆಯಾದಂತೆ ಮಧುಗಿರಿಯೂ ಜಿಲ್ಲೆಯಾಗಬೇಕೆಂಬ ಕೂಗು ಹೆಚ್ಚಾಗಿದ್ದು,ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ಸಹ ಸರ್ಕಾರಕ್ಕೆ ಅಂಕಿ ಅಂಶಗಳ ಸಮೇತ ಮಧುಗಿರಿ ಜಿಲ್ಲೆಗಾಗಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಶಾಸಕರು ಉದಯವಾಣಿಗೆ ನೀಡಿರುವ ವಿಶೇಷ ಸಂದರ್ಶನ.

ಮಧುಗಿರಿಜಿಲ್ಲೆಯಾಗಲು ಅರ್ಹತೆಯಿದೆಯಾ?

ಖಂಡಿತಾ, ಮಹಾರಾಜರ-ಬ್ರಿಟಿಷರ ಕಾಲದಿಂದಲೂ ಉಪವಿಭಾಗವಿದ್ದು, ಮಾಸ್ತಿ ವೆಂಕಟೇಶ ಅಯ್ಯಾಂಗಾರ್‌ ಎಸಿ ಆಗಿದ್ದರು. ಇಂತಹಇತಿಹಾಸವುಳ್ಳ ಮಧುಗಿರಿ 4 ತಾಲೂಕುಗಳ ನ್ನೊಳಗೊಂಡ ಶೈಕ್ಷಣಿಕ ಉಪವಿಭಾಗದಲ್ಲಿ ಎಲ್ಲ ಇಲಾಖೆಗಳಿವೆ. ಶೈಕ್ಷಣಿಕ ಜಿಲ್ಲೆಯಾದರೂ ಆರ್ಥಿಕವಾಗಿಹಿಂದುಳಿದಿದ್ದು ಅಭಿವೃದ್ಧಿಗಾಗಿ ಕಂದಾಯ ಜಿಲ್ಲೆ ಆಗಲೇ ಬೇಕು.

ಮಧುಗಿರಿ ತಾಲೂಕುಯಾಕೆ ಜಿಲ್ಲೆಯಾಗಬೇಕು ?

4 ತಾಲೂಕುಗಳು ತೀವ್ರ ಬರಗಾಲದಿಂದ ಸಂಕಷ್ಟದಲ್ಲಿದ್ದು, ಪ್ರಮುಖ ಉದ್ಯೋಗ ಕೃಷಿಯಾಗಿದೆ. ಅಂತರ್ಜಲ ಕುಸಿದಿದ್ದು, ಉದ್ಯೋಗ ಅರಸಿ ಜನರುಗುಳೆ ಹೋಗಿದ್ದಾರೆ. ಜಿಲ್ಲೆಯಾದರೆ ಹೆಚ್ಚುವರಿಯಾಗಿ ಬರುವ ನೀರಾವರಿ ಯೋಜನೆಗಳು ಹಾಗೂ ಕೈಗಾರಿಕೆ ಗಳಿಂದಾಗಿ ಜನತೆ ಸ್ವಾವಲಂಭಿ ಬದುಕುಕಾಣಲಿದೆ.

 ಮಧುಗಿರಿ ಜಿಲ್ಲೆಯಾದರೆ ಮೂಲಭೂತ ಸೌಕರ್ಯ ಕೊರತೆಯಿದೆಯಾ?

ಪೊಲೀಸ್‌ ಎಸ್ಪಿ ಕಚೇರಿ ಹಾಗೂ ಡೀಸಿ ಕಚೇರಿ ಹೊರತುಪಡಿಸಿಎಲ್ಲ ಇಲಾಖೆಗಳ ಉಪವಿಭಾಗವಿದೆ.ಜಿಲ್ಲೆಯಾಗಿಘೋಷಣೆಯಾದರೆ ಸರ್ಕಾರಿ ಕಚೇರಿಗಳಿಗೆ ಕೊರತೆಯಿಲ್ಲ. ಆದರೆ ನೀರಾವರಿ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೆ ಮಾತ್ರ ಪೂರಕ ಅನುದಾನ ಒದಗಿಸಬೇಕಾಗುತ್ತದೆ.

ಜಿಲ್ಲಾಕೇಂದ್ರದಿಂದಕೃಷಿ-ಕೈಗಾರಿಕೆಗಳಿಗೇನುಲಾಭ?

ಜಿಲ್ಲಾ ಕೇಂದ್ರವಾದೊಡನೆ ಅನೇಕ ಅನುದಾನ ಹರಿದು ಬರಲಿದೆ. ನೀರಾವರಿ ಯೋಜನೆ ಹಾಗೂಕೈಗಾರಿಕೆಗಳ ಸ್ಥಾಪನೆಗೆ ಮುಂದಾಲಿದ್ದು, ಕೃಷಿಯಲ್ಲೂಉದ್ಯೋಗ, ಮಾರುಕಟ್ಟೆ ವಿಸ್ತರಣೆಯಾಗಲಿದ್ದು,ಕೈಗಾರಿಕಾ ವಲಯದ ಅನುಷ್ಠಾನ ಹಾಗೂ ಎತ್ತಿನಹೊಳೆಯಿಂದ ಅಂತರ್ಜಲ ವೃದ್ಧಿಸಿ ಕೃಷಿಹಾಗೂ ಕೃಷಿಯೇತರ ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಲಿದೆ.

 ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಸರ್ಕಾರದ ಸ್ಪಂದನೆ ಹೇಗಿದೆ ?

ಎಚ್ ಡಿಕೆ ಅವಧಿಯಲ್ಲಿ ತಂದ ಕಾಮಗಾರಿಗಳು ಮಾತ್ರ ನಡೆಯುತ್ತಿದ್ದು, ಸರ್ಕಾರಬದಲಾದ ಮೇಲೆಮಧುಗಿರಿಯ ಮೇಲೆ ಮಲತಾಯಿ ಧೋರಣೆ ತಾಳಲಾಗಿದೆ. ಒಳ್ಳೆಯ ಬೆಳವಣಿಗೆಯಲ್ಲ. ಸಮ್ಮಿಶ್ರ ಸರ್ಕಾರದ ಅನು ದಾನವನ್ನೂ ತಡೆಹಿಡಿದಿದ್ದು, ಕನಿಷ್ಠ ಅನುದಾನವನ್ನೂ ಸಹ ನೀಡದೆ ಅಭಿವೃದ್ಧಿಗೆ ಅಡ್ಡಗಾಲು ಹಾಕಲಾಗುತ್ತಿದೆ. ಈ ಬಗ್ಗೆ ಸದನದಲ್ಲಿ ಹೋರಾಟ ಮಾಡುವೆ.

ಯುಜಿಡಿ ಕಾಮಗಾರಿ ನಡೆಯುತ್ತಿದ್ದು, ಹೇಮಾವತಿಯಿಂದಹೆಚ್ಚುವರಿ ನೀರಿಗೆಯಾವ ಕ್ರಮಕೈಗೊಂಡಿದ್ದೀರಾ ?

ವರ್ಷಕ್ಕೆ 3 ಬಾರಿ ಸಿದ್ದಾಪುರ ಕೆರೆಗೆ ನೀರು ತಂದ ಶಾಸಕ ನಾನು. ಇದು ಇತಿಹಾಸವಾಗಿದ್ದು ಯಾರ ಮೇಲೂ ಗೂಬೆ ಕೂರಿಸಲ್ಲ. ಯುಜಿಡಿ ಅನುಷ್ಠಾನಕ್ಕೆ ಬೇಕಾಗುವ ಅಗತ್ಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು.

ಜಿಲ್ಲಾ ಕ್ಷೇತ್ರದ ಪ್ರಮುಖ ಸಂಪತ್ತು ಏನು?

ಮಧುಗಿರಿಯಲ್ಲಿವಿಶ್ವದ 2ನೇ ದೊಡ್ಡ ಏಕಶಿಲಾಬೆಟ್ಟವಿದ್ದು, ರಾಜರು,ಬ್ರಿಟಿಷರು ಆಳಿದ ಕೋಟೆ ಕೊತ್ತಲಗಳು ಅನಾವರಣ ಗೊಂಡಿವೆ. ಅಪರೂಪದ ಕೃಷ್ಣಮೃಗ ಅರಣ್ಯ ಧಾಮ, ಕರಡಿವನ್ಯಧಾಮ,ಮಹಾಪುರುಷರು ಕಟ್ಟಿದ ಪ್ರಸಿದ್ಧ ಹರಿಹರರಸಂಗಮದ ದೇಗುಲ. ಗೊರವನಹಳ್ಳಿಯಲಕ್ಷ್ಮೀ ದೇಗುಲ,ಸಿದ್ದರಬೆಟ್ಟ,ಮಿಡಿಗೇಶಿಹಾಗೂ ಪಾವಗಡದಬೆಟ್ಟಗಳು ಇತಿಹಾಸವನ್ನು ಸಾರುತ್ತವೆಹಾಗೂ ನೀರಾವರಿ ಯೋಜನೆ ಜಾರಿಯಾದರೆ ಬಂಗಾರ ಬೆಳೆಯುವಂತ ಮಣ್ಣು ಈ ಕ್ಷೇತ್ರದ ಬಹುಮುಖ್ಯ ಸಂಪತ್ತು. ಇದರಂತೆ ಪ್ರವಾಸಿ ತಾಣವಾದರೆ ಉದ್ಯೋಗ ಸೃಷ್ಟಿಯಾಗಲಿದೆ.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.