ಶಾಸಕ ನಾಗೇಶ್ ವರ್ತನೆಗೆ ಆಕ್ರೋಶ
Team Udayavani, Jul 8, 2020, 7:19 AM IST
ತಿಪಟೂರು: ಎಷ್ಟೇ ದೊಡ್ಡ ಜನಪ್ರತಿನಿಧಿಯಾದವರು ಮತ್ತೂಬ್ಬ ಜನಪ್ರತಿನಿಧಿ ಯೊಂದಿಗೆ ಸರಕಾರಿ ಕಾರ್ಯ ಕ್ರಮಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಜ್ಞಾನವನ್ನು ಶಾಸಕ ನಾಗೇಶ್ ಕಲಿತುಕೊಳ್ಳಬೇಕು ಎಂದು ಜೆಡಿಎಸ್ ತಾ. ಕಾರ್ಯಾಧ್ಯಕ್ಷ ಎಂ.ಎಸ್. ಶಿವಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ನಗರದ ವಿದ್ಯಾನಗರದಲ್ಲಿ ಕಾಮಗಾರಿ ವೇಳೆ ಶಾಸಕ ಬಿ.ಸಿ.ನಾಗೇಶ್ ನಗರಸಭಾ ಸದಸ್ಯ ಯೋಗೇಶ್ ಜೊತೆ ನಡೆದು ಕೊಂಡ ರೀತಿ ಸರಿಯಿಲ್ಲ. ಯಾವುದೇ ಸರಕಾರಿ ಅಭಿವೃದ್ಧಿ ಕಾಮಗಾರಿಗಳು, ಕೆಲಸಕಾರ್ಯಗಳು ಜನತೆಯ ತೆರಿಗೆ ಹಣದಿಂದ ಮಾತ್ರ ನಡೆಯುತ್ತಿರುತ್ತವೆ. ಸರ್ಕಾರಿ ಖಜಾನೆಯ ಹಣ ಸಾರ್ವ ಜನಿಕರಿಗೆ ಸೇರಿದ್ದು, ಪ್ರತಿಯೊಬ್ಬ ಪ್ರಜಾ ಪ್ರತಿನಿಧಿಗೂ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹಕ್ಕಿದೆ.
ಶಾಸಕರು, ಸಂಸದರು ಸಂಬಂಧಪಟ್ಟ ಜನಪ್ರತಿನಿಧಿಯ ಕ್ಷೇತ್ರದಲ್ಲಿ ಅಥವಾ ವಾರ್ಡ್ ನಲ್ಲಿ ಅಭಿವೃದ್ಧಿ ಕೆಲಸ ಮಾಡ ಬೇಕಾದರೆ ಸ್ಥಳೀಯ ಪ್ರತಿನಿಧಿಗೆ ತಿಳಿಸುವುದು ಸಂವಿ ಧಾನದ ನೀತಿಯಾಗಿದೆ. ಆದರೆ ಇಲ್ಲಿನ ಶಾಸಕರು 14ನೇ ವಾರ್ಡ್ನಲ್ಲಿ ಕಾಮಗಾರಿ ಪೂಜೆಗೆ ಸ್ಥಳೀಯ ನಗರಸಭಾ ಸದಸ್ಯ ವಿ. ಯೋಗೀಶ್ ಗಮನಕ್ಕೆ ತಾರದೇ, ಕರೆಯದೇ ಮಾಡಿರುವುದಲ್ಲದೇ ಇದನ್ನು ಪ್ರಶ್ನಿಸಿ ಯೋಗೀಶ್ ಮೇಲೆ ಅಮಾನವೀಯವಾಗಿ ನಡೆದು ಕೊಂಡಿರುವುದು ಸರಿಯಲ್ಲ.
ಶಾಸಕ ನಾಗೇಶ್ ಅವರ ಸ್ವಂತ ದುಡ್ಡಿನಿಂದ ರಸ್ತೆ ಕಾಮಗಾರಿ ಆರಂಭಿ ಸುವಂತೆ ದುರ್ವರ್ತನೆ ಮಾಡಿರು ವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ರೀತಿ ಶಾಸಕರ ವರ್ತನೆ ಮುಂದುವರಿದರೆ ಜೆಡಿಎಸ್ ನಿಂದ ಅವರ ವಿರುದ್ಧ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು
ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತೆಯರು
2019 ರಲ್ಲಿ ಸೋತಿದ್ದಕ್ಕೆ ವ್ಯಥೆಯಿಲ್ಲ, ಈ ಬಾರಿ ಸೋಮಣ್ಣ ಗೆಲ್ಲಬೇಕು: ಎಚ್.ಡಿ.ದೇವೇಗೌಡ
LS Polls: ಮಂಜುನಾಥನಿಗೂ ನನಗೂ ವಯಕ್ತಿಕ ಗಲಾಟೆ, ರಾಜಕೀಯವಲ್ಲ: ಬೋರೇಗೌಡ
Congress vs BJP+JDS :ಅಂಚೆಪಾಳ್ಯ, ನಡೆಮಾವಿನಪುರ ಘಟನೆಗೆ ಹೊಸ ತಿರುವು!!
MUST WATCH
ಹೊಸ ಸೇರ್ಪಡೆ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು