ಎಮಿಷನ್‌, ಇನ್ಶೂರೆನ್ಸ್‌ಗೆ ವಾಹನ ಸವಾರರ ಕ್ಯೂ


Team Udayavani, Sep 14, 2019, 2:21 PM IST

tk-tdy-1

ತುಮಕೂರು: ನೂತನ ಮೋಟಾರ್‌ ಕಾನೂನು ಜಾರಿಯಾದ ಬಳಿಕ ಸಂಚಾರ ನಿಯಮಗಳು ಬಿಗಿ ಯಾಗಿದ್ದು, ಟ್ರಾಫಿಕ್‌ ಪೊಲೀಸರು ಕಾರ್ಯಪ್ರವೃತ್ತ ರಾಗಿರುವುದರಿಂದ ಎಮಿಷನ್‌, ಇನ್ಶೂರೆನ್ಸ್‌, ಆರ್‌ಟಿಒ ಕಚೇರಿಗಳಲ್ಲಿ ವಾಹನ ಸವಾರರ ಕ್ಯೂ ಹನುಮನ ಬಾಲದಂತೆ ಬೆಳೆಯುತ್ತಿದೆ. ಹೊಸ ನಿಯಮ ಬಂದ ಮೇಲೆ 18 ಲಕ್ಷ ರೂ.ವವರೆಗೆ ದಂಡ ವಸೂಲಿಯಾಗಿದೆ. ಗುರುವಾರ ಒಂದೇ ದಿನಕ್ಕೆ 4.94 ಲಕ್ಷ ರೂ. ದಂಡ ವಸೂಲಿಯಾಗಿದೆ.

ವಾಹನದ ದಾಖಲೆ ಸರಿಯಿಲ್ಲದಿದ್ದರೆ, ಇನ್ನಿತರ ಕಾರಣಗಳಿಗೆ ಪೊಲೀಸರು ದುಬಾರಿ ದಂಡ ವಿಧಿಸುತ್ತಿ ರುವುದರಿಂದ ಎಚ್ಚೆತ್ತಿರುವ ವಾಹನ ಸವಾರರು ಪಕ್ಕಾ ದಾಖಲೆ ಪಡೆಯಲು ಕಚೇರಿಗಳತ್ತ ಧಾವಿಸುತ್ತಿದ್ದಾರೆ. ಜಿಲ್ಲೆಯಲ್ಲಿರುವ ನಾಲ್ಕು ಎಮಿಷನ್‌ ಸರ್ಟಿಫಿಕೇಟ್ ಪಡೆಯುವ ಕೇಂದ್ರಗಳಲ್ಲಿ ಸವಾರರ ಉದ್ದನೆಯ ಸಾಲು ಸಾಮಾನ್ಯವಾಗಿದೆ. ತುಮಕೂರು ಜಿಲ್ಲೆಯಲ್ಲಿ ಲಕ್ಷಾಂತರ ವಾಹನಗಳಿದ್ದು, ಕೇವಲ ನಾಲ್ಕು ಮಾಲಿನ್ಯ ತಪಾಸಣಾ ಕೇಂದ್ರಗಳಿವೆ. ಒಂದೇ ಬಾರಿ ಎಲ್ಲಾ ವಾಹನ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೂತನ ಸಂಚಾರಿ ನಿಯಮ ಜಾರಿಯಾದ ಮೇಲೆ ಜಿಲ್ಲೆಯಲ್ಲಿ ದುಬಾರಿ ದಂಡಕ್ಕೆ ಹೆದರಿ ವಾಹನ ಸವಾರರು ದಾಖಲಾತಿಗೆ ಪರದಾಡುವಂತಾಗಿದೆ.

ದಂಡಕ್ಕೆ ಹೆದರಿಕೆ: ವಿಮೆ, ಮಾಲಿನ್ಯ ತಪಾಸಣೆ ಪ್ರಮಾಣ ಪತ್ರ, ಚಾಲನಾ ಪರವಾನಗಿಗೆ ಮುಗಿ ಬೀಳುತ್ತಿದ್ದಾರೆ. ದಾಖಲೆ ಇಲ್ಲದವರು ಪೊಲೀಸರ ಕಣ್ಣು ತಪ್ಪಿಸಿ ಸಂಚರಿಸುತ್ತಿದ್ದಾರೆ. ನೂತನ ಸಂಚಾರಿ ನಿಯಮದ ಅನುಷ್ಠಾನಕ್ಕೂ ಮುನ್ನ ನಗರದಲ್ಲಿ ಸಂಚಾರಿ ನಿಯಮ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿತ್ತು. ಹೆಲ್ಮೆಟ್ ಇಲ್ಲದೆ, ಸೀಟ್ ಬೆಲ್r ಹಾಕದೆ, ಸಿಗ್ನಲ್ ಜಂಪ್‌ ಮಾಡಿಕೊಂಡು ಸಂಚರಿಸುವವರ ಸಂಖ್ಯೆ ಹೆಚ್ಚಿತ್ತು. ಪೊಲೀಸರ ಕೈಗೆ ಸಿಕ್ಕರೆ ನೂರು, ಇನ್ನೂರು ದಂಡ ಕಟ್ಟಿದ ರಾಯ್ತು ಎಂಬಂತಿದ್ದ ಸವಾರರು ನೂತನ ನಿಯಮ ದಿಂದ ಸಾವಿರಾರು ರೂ. ದಂಡಕ್ಕೆ ಪತರುಗುಟ್ಟಿದ್ದಾರೆ.

ದಂಡಕ್ಕೆ ಹೆದರಿರುವ ಸವಾರರು ವಾಹನಗಳ ದಾಖಲೆ ಇಲ್ಲದೇ ವಾಹನ ರಸ್ತೆಗಿಳಿಸಲು ಹಿಂದು- ಮುಂದು ನೋಡುತ್ತಿದ್ದಾರೆ. ನಿಯಮ ಮೀರಿ ವಾಹನ ಚಲಾಯಿಸುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಒಂದು ದಾಖಲೆ ಇಲ್ಲದಿದ್ದರೂ ಸಾವಿರ ದಂಡ ವಿಧಿಸುತ್ತಿರುವುದಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತುಮಕೂರಿನಲ್ಲಿ ನಾಲ್ಕು, ಗುಬ್ಬಿ ಯಲ್ಲಿ ಒಂದು ಕೇಂದ್ರ ಸೇರಿ ಐದು ಕೇಂದ್ರಗಳಿವೆ. ನಿರಂತರವಾಗಿ ತಪಾಸಣೆ ನಡೆಸಿದರೂ ವಾಯು ಮಾಲಿನ್ಯ ತಪಾಸಣೆ ಮಾಡಿಸಿಕೊಳ್ಳುವ ವಾಹನ ಸವಾರರ ಸಂಖ್ಯೆ ಮಾತ್ರ ಇಳಿಮುಖವಾಗುತ್ತಿಲ್ಲ. ಒಂದು ಕೇಂದ್ರದಲ್ಲಿ ದಿನವೊಂದಕ್ಕೆ 300ರಿಂದ400 ವಾಹನಗಳು ಮಾಲಿನ್ಯ ತಪಾಸಣೆ ನಡೆಯುತ್ತದೆ.

ಸಾರಿಗೆ ಇಲಾಖೆಯಲ್ಲಿ ಜನಸಂದಣಿ:ಸಾವಿರ ದಂಡ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ದಾಖಲಾತಿ ಸರಿಪಡಿಸಿ ಕೊಳ್ಳಲು ಸಾರಿಗೆ ಇಲಾಖೆಗೆ ಬರುವವರ ಸಂಖ್ಯೆ ಹೆಚ್ಚಾಗಿದ್ದು, ಆರ್‌ಟಿಒ ಕಚೇರಿಯಲ್ಲೂ ಜನಸಂದಣಿ ಹೆಚ್ಚಿದೆ. ಪೊಲೀಸರು ಹಾಕುವ ದಂಡದ ಮೊತ್ತಕ್ಕೆ ಹೆದರಿರುವ ಸವಾರರು ಎಲ್ಎಲ್ಆರ್‌ ಹಾಗೂ ಡಿಎಲ್ ಮಾಡಿಸಲು ಮುಗಿಬೀಳುತ್ತಿದ್ದಾರೆ. ಎಲ್ಎಲ್ಆರ್‌ ಹಾಗೂ ಡಿಎಲ್ ಪರೀಕ್ಷೆಗೆ ಬರುತ್ತಿರು ವವರಿಗೆ ಒಂದು ತಿಂಗಳ ಕಾಲ ಬುಕ್ಕಿಂಗ್‌ ಆಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿರುವ ಕಾರಣ ಹೊಸಬರು ಎಲ್ಎಲ್ಆರ್‌, ಡಿಎಲ್ ಮಾಡಿಸಲು ಈಗ ಪರೀಕ್ಷೆಗೆ ಒಂದು ತಿಂಗಳು ಕಾಯಬೇಕಾಗಿದೆ. ಈ ಮೊದಲು ಖಾಲಿ ಹೊಡೆಯುತ್ತಿದ್ದ ತಂತ್ರಾಂಶ ಈಗ ಹೌಸ್‌ಫ‌ುಲ್ ಆಗಿದೆ. ಆರ್‌ಟಿಒ ಕಚೇರಿಯಲ್ಲಂತೂ ಜನದಟ್ಟಣೆ ಹೆಚ್ಚಾಗುತ್ತಿದೆ. ಇನ್ನೂ ವಿಮೆ ಇಲ್ಲದವರು ವಿಮೆ ಕಟ್ಟಲು ವಿಮಾ ಕಚೇರಿಗಳತ್ತ ಹೋಗುತ್ತಿದ್ದಾರೆ.

 

● ಚಿ.ನಿ. ಪುರುಷೋತ್ತಮ್‌

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.