ಮೂಲಸೌಕರ್ಯ ನೀಡದ ನಗರಸಭೆ


Team Udayavani, Jun 18, 2019, 1:15 PM IST

tk-tdy-2..

12ನೇ ವಾರ್ಡ್‌ಗೆ ಸೇರಿದ್ದ ಹಳೆಪಾಳ್ಯದ ಕೆಂಚರಾಯನಗರವು (ಕಳ್ಕೆರೆ)ಗೆ ಮೂಲಸೌಕರ್ಯ ನೀಡುತ್ತಿಲ್ಲ ಎಂದು ಆರೋಪಿಸಿ ನಗರಸಭೆ ಮುಂದೆ ಪ್ರತಿಭಟನೆ ನಡೆಸಿದ ನಿವಾಸಿಗಳು.

ತಿಪಟೂರು: ಹಲವಾರು ವರ್ಷದಿಂದ ನಗರಸಭೆಯ 12ನೇ ವಾರ್ಡ್‌ಗೆ ಸೇರಿದ್ದ ಹಳೆಪಾಳ್ಯದ ಕೆಂಚರಾಯ ನಗರವು (ಕಳ್ಕೆರೆ) ಈಗ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ ಎಂದು ಕಾರಣ ಹೇಳಿ ವಾರ್ಡ್‌ಗೆ ಮೂಲಸೌಕರ್ಯ ನೀಡುತ್ತಿಲ್ಲ ಎಂದು ವಾರ್ಡ್‌ನ 50ಕ್ಕೂ ಹೆಚ್ಚು ನಿವಾಸಿಗಳು ನಗರಸಭೆ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ವಾರ್ಡ್‌ಗೆ ನೀರಿಲ್ಲ: ಈ ವೇಳೆ ಮಾತನಾಡಿದ ನಿವಾಸಿ ನಾರಾಯಣ್‌, ಕಳೆದ 2 ತಿಂಗಳಿನಿಂದಲೂ ನಮ್ಮ ವಾರ್ಡ್‌ಗೆ ನೀರು ಸಿಗುತ್ತಿಲ್ಲ. ಚರಂಡಿಗಳಲ್ಲಿ ನೀರು ಶೇಖರಣೆಯಾಗಿ ಗಬ್ಬು ನಾರುತ್ತಿದ್ದು, ಮಹಿಳೆಯರು, ಮಕ್ಕಳು, ವಯಸ್ಸಾದವರು ಕಾಯಿಲೆಗಳಿಗೆ ತುತ್ತಾಗುತ್ತಿ ದ್ದಾರೆ. ಬೀದಿದೀಪ ವ್ಯವಸ್ಥೆ ಇಲ್ಲ. ಬೋರ್‌ವೆಲ್ನಲ್ಲಿ ನೀರಿದ್ದರೂ, ಹೆಚ್ಚುವರಿ ಪೈಪ್‌ ಬಿಡದ ಕಾರಣ ನೀರು ಸಿಗುತ್ತಿಲ್ಲ. 2 ಕಿಮೀ ದೂರದ ಅಣ್ಣಾಪುರ, ಹಳೇ ಪಾಳ್ಯದಿಂದ ನೀರು ತರಬೇಕಾಗಿದೆ. ನಗರದಿಂದ ಹೊರ ಹೋಗುತ್ತಿರುವ ಕಸ ಸಂಗ್ರಹಣಾ ಘಟಕ ನಮ್ಮ ವಾರ್ಡ್‌ಗೆ ಸಮೀಪವಿದ್ದು, ಇದರಿಂದ ನಿತ್ಯವೂ ದುರ್ನಾತ ಬೀರುತ್ತಿದೆ. ಕಲುಷಿತ ಗಾಳಿಯಿಂದ ನಮಗೆ ನಿತ್ಯವೂ ಕಿರಿಕಿರಿ ಉಂಟಾಗುತ್ತಿದೆ.

15 ವರ್ಷದಿಂದ ನಗರಸಭೆಗೆ ಕಂದಾಯ ಪಾವತಿ ಸುತ್ತಿದ್ದೇವೆ. ಆದರೆ ಈಗ ನಿಮ್ಮ ವಾರ್ಡ್‌ ನಗರಸಭೆಗೆ ಸೇರಿಲ್ಲ, ಹುಚ್ಚಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತದೆ. ನೀವು ಅಲ್ಲಿ ಸಮಸ್ಯೆ ಬಗೆಹರಿಸಿ ಕೊಳ್ಳಿ ಎಂದು ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಗ್ರಾಮ ಪಂಚಾಯಿತಿಯಲ್ಲಿ ವಿಚಾರಿಸಿ ದರೆ ನಮಗೆ ಇನ್ನು ಯಾವುದೇ ಮಾಹಿತಿ ಬಂದಿಲ್ಲ ಎನ್ನುತ್ತಾರೆ. ಇದರಿಂದ ನಮ್ಮ ವಾರ್ಡ್‌ನಲ್ಲಿ ಮೂಲ ಭೂತ ಸೌಕರ್ಯಗಳೇ ಇಲ್ಲದಂತಾಗಿದೆ. ಅಲ್ಲದೆ ಈ ಬಾರಿ ನಗರಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಮತದಾರರಿದ್ದರೂ, ಮತದಾನ ಮಾಡಲು ಅವಕಾಶ ನೀಡಿಲ್ಲ. ನಗರಸಭೆ ಅಧಿಕಾರಿಗಳು ನಮ್ಮ ವಾರ್ಡ್‌ ನಿರ್ಲಕ್ಷಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಕುಡಿಯಲು ನೀರಿಲ್ಲ: ವರಲಕ್ಷ್ಮಮ್ಮ ಮಾತನಾಡಿ, 120 ಮನೆಗಳಿರುವ ನಮ್ಮ ವಾರ್ಡ್‌ನಲ್ಲಿ ನಿತ್ಯ ಬಳಕೆಗೆ ಮತ್ತು ಕುಡಿಯಲು ನೀರಿಲ್ಲದಂತಾಗಿದೆ. ಉಳ್ಳವರು ಟ್ಯಾಂಕರ್‌ ಮೂಲಕ ನೀರು ಪೂರೈಸಿಕೊಳ್ಳುತ್ತಾರೆ. ನಾವು ಕೂಲಿ ಮಾಡುವ ಜನ 2 ಕಿ.ಮೀ ದೂರದಿಂದ ನೀರು ತರಬೇಕಿದೆ. ಅಧಿಕಾರಿಗಳು ನಮ್ಮನ್ನು ಕೀಳಾಗಿ ನೋಡುತ್ತಿದ್ದಾರೆ ಎಂದು ಹರಿಹಾಯ್ದರು.

ಸಮಸ್ಯೆ ಕೇಳುತ್ತಿಲ್ಲ: ಶಶಿಕುಮಾರ್‌ ಮಾತನಾಡಿ, ನಮ್ಮ ವಾರ್ಡ್‌ ಸಮಸ್ಯೆಗಳ ಆಗರವಾಗಿದೆ. ಅಧಿಕಾರಿಗಳು ನಮ್ಮ ಸಮಸ್ಯೆ ಕೇಳುತ್ತಿಲ್ಲ. ಬೆಳಗ್ಗೆಯಿಂದ ಕಾದು ಕುಳಿತರೂ ಸಮಸ್ಯೆಗೆ ಸ್ಪಂದಿಸದೆ ಪೊಲೀಸರನ್ನು ಕರೆಸು ವುದಾಗಿ ಹೇಳುತ್ತಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಕಸ ಸಂಗ್ರಹಣಾ ಘಟಕ ಸಮೀಪದಲ್ಲೆ ಇರುವುದರಿಂದ ನಾಯಿಗಳ ಹಾವಳಿ ಹೆಚ್ಚಾಗಿದೆ. ನಮ್ಮ ಮನೆಯ ಪತ್ರಗಳು ನಗರಸಭೆಯ ವ್ಯಾಪ್ತಿಯಲ್ಲಿವೆ ಆದರೆ ನಗರಸಭೆ ಅಧಿಕಾರಿಗಳು ಇದಕ್ಕೆ ಉತ್ತರ ನೀಡದೆ ಗ್ರಾಮ ಪಂಚಾಯಿತಿ ಮೇಲೆ ಆರೋಪಿಸುತ್ತಿದ್ದಾರೆ ಎಂದು ಕಿಡಿಕಾರಿದರು. ನಿವಾಸಿಗಳಾದ ಭಾಸ್ಕರ್‌, ದಯಾನಂದ್‌, ನಾಗರಾಜು, ರಮೇಶ್‌, ರಾಜು, ಗಂಗಾಧರಯ್ಯ, ನಾಗಮ್ಮ, ಧನಲಕ್ಷಿ ್ಮೕ, ಕಮಲಮ್ಮ, ಉಮಾದೇವಿ, ರಾಜಮ್ಮ, ಗಂಗಮ್ಮ ಮತ್ತಿತರರಿದ್ದರು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

1-aaaa

2019 ರಲ್ಲಿ ಸೋತಿದ್ದಕ್ಕೆ ವ್ಯಥೆಯಿಲ್ಲ, ಈ ಬಾರಿ ಸೋಮಣ್ಣ ಗೆಲ್ಲಬೇಕು: ಎಚ್.ಡಿ.ದೇವೇಗೌಡ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.