10 ಸಾವಿರ ಮಂದಿಗೆ ಅಗತ್ಯ ಸಾಮಗ್ರಿ
Team Udayavani, Aug 11, 2019, 5:52 PM IST
ಪಾವಗಡ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತು ಸಿದ್ಧಪಡಿಸಿದ ಭಕ್ತರು, ಸ್ವಾಮಿ ಜಪನಂದಾಜೀ.
ಪಾವಗಡ: ಯಾವುದೇ ರಾಜ್ಯದಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ್ದಲ್ಲಿ ಪಟ್ಟಣದ ಶ್ರೀ ರಾಮಕೃಷ್ಣ ಸೇವಾಶ್ರಮ ಇನ್ಫೋಸಿಸ್ ನೆರವಿನೊಂದಿಗೆ ಸಹಾಯಹಸ್ತ ನೀಡ ಲಾಗುತ್ತಿದೆ ಎಂದು ಶ್ರೀ ರಾಮಕೃಷ್ಣ ಸೇವಾಶ್ರಮದ ಮುಖ್ಯಸ್ಥ ಜಪಾನಂದ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಪತಂಜಲಿ ನಗರದಲ್ಲಿರುವ ಶ್ರೀ ರಾಮಕೃಷ್ಣ ಸೇವಾಶ್ರಮದಲ್ಲಿ ಸಂತ್ರ ಸ್ತರಿಗೆ ಆಹಾರ, ಬಟ್ಟೆ ಮತ್ತಿತರ ವಸ್ತು ಸಿದ್ಧಪಡಿಸಿ ನಂತರ ಮಾತನಾಡಿದರು.
ಜನರಿಗೆ ಅಗತ್ಯ ಸಾಮಗ್ರಿಗಳನ್ನು ಇನ್ಫೋಸಿಸ್ ಸಹ ಯೋಗದಲ್ಲಿ ಶ್ರೀ ರಾಮಕೃಷ್ಣ ಆಶ್ರಮ ನೀಡುತ್ತಿದೆ.ಮೊದಲನೇ ಹಂತದಲ್ಲಿ ರಾಯ ಚೂರಿನಲ್ಲಿ ಹತ್ತು ಸಾವಿರ ಜನತೆಗೆ ಬೇಕಾದ ಸಾಮಗ್ರಿ ವಿತರಣೆ ಮಾಡು ತ್ತಿದ್ದು, ಸುಧಾಮೂರ್ತಿ ಸಹಕಾರ ದಿಂದ ನೆರವು ನೀಡಲಾಗುತ್ತಿದೆ. ಜಮ ಖಂಡಿ, ರಾಯಚೂರು, ಗೋಕಾಕ್, ಬಾಗಲ ಕೋಟೆ, ಮತ್ತು ಬೆಳಗಾವಿ ಸಂತ್ರಸ್ತರಿಗೆ ನೆರವು ನೀಡಲಾಗುವುದೆಂದು ತಿಳಿಸಿದರು.