ಸೇವೆಗಳು ಆನ್‌ಲೈನ್‌: ಎಆರ್‌ಟಿಒ ದೇವಿಕಾ


Team Udayavani, Apr 2, 2022, 1:50 PM IST

ಸೇವೆಗಳು ಆನ್‌ಲೈನ್‌: ಎಆರ್‌ಟಿಒ ದೇವಿಕಾ

ಮಧುಗಿರಿ: ಸಾರಿಗೆ ಇಲಾಖೆಯಲ್ಲಿ ಜನಪರವಾದ ಯೋಜನೆಗಳು ಆರಂಭವಾಗಿದ್ದು, ಸಾರ್ವಜನಿಕರ 30 ಸೇವೆಗಳನ್ನು ಆನ್‌ಲೈನ್‌ ಮೂಲಕ ನೀಡಲು ಇಲಾಖೆ ಮುಂದಾಗಿದೆ ಎಂದು ಎಆರ್‌ಟಿಒ ದೇವಿಕಾ ತಿಳಿಸಿದ್ದಾರೆ.

ಪಟ್ಟಣದ ತಮ್ಮ ಕಚೇರಿಯಲ್ಲಿ ಬಸ್‌, ಕ್ಯಾಬ್‌ ಹಾಗೂ ಆಟೋ ಚಾಲಕರು, ಮಾಲೀಕರ ಸಭೆ ಕರೆದು ಮಾತನಾಡಿದ ಅವರು, ಕಳೆದ ತಿಂಗಳು 4 ಸೇವೆಗಳನ್ನು ಆನ್‌ಲೈನ್‌ ಮಾಡಿದ್ದು, ಹಳೆಯ ಯೋಜನೆಯಲ್ಲಿ 30 ಸೇವೆಗಳನ್ನು ಇಲಾಖೆ ಜನಪರವಾಗಿಸಿದೆ ಎಂದರು.

ಬಸ್‌ ಮೇಲೆ ಪ್ರಯಾಣಿಕರ ಸಾಗಾಟ ಮಾಡುವುದು ನಡೆದಿದ್ದು, ಚಾವಣಿ ತೆರವುಗೊಳಿಸಬೇಕೆಂದು ಮಾಲೀಕರಿಗೆ ಸೂಚಿಸಿದರು. ಆಟೋಗಳಲ್ಲಿಯೂ ಕೂಡ ಹೆಚ್ಚಿನ ಜನರನ್ನು ಸಾಗಣೆ ಮಾಡುವುದು ನಿಲ್ಲಿಸಬೇಕು ಎಂದರು.

ಇಲಾಖೆಯಿಂದ ಅನ್ಯಾಯ: ಖಾಸಗಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಶಂಕರನಾರಾಯಣ್‌ ಮಾತನಾಡಿ, ಸರ್ಕಾರದ ನಿಯಮ ಪಾಲಿಸಿ ಟ್ಯಾಕ್ಸ್‌ ಕಟ್ಟೋರು ನಾವು. ನಮಗೆ ಸಾರಿಗೆ ಇಲಾಖೆಯಿಂದ ಅನ್ಯಾಯವಾಗುತ್ತಿದೆ. ಸಮಯದ ಪರ್ಮಿಟ್‌ ಇಲ್ಲದಿದ್ದರೂ ಖಾಸಗಿ ವಾಹನದ ಜೊತೆ ಪೈಪೋಟಿಗೆ ಇಳಿಯುತ್ತಾರೆ. ಸಮಯದ ಹೊಂದಾಣಿಕೆಯ ಬಗ್ಗೆ ಅರಿವಿಲ್ಲದೆ ಸಾರಿಗೆ ಡಿಪೋ ಅಧಿಕಾರಿಗಳ ಎಡವಟ್ಟಿ ನಿಂದ 2 ಬಸ್‌ಗಳು ಇಲ್ಲದ ಕಾರಣ ಒಂದೇ ಬಸ್‌ ಬಂದಾಗ ಪಾವಗಡದ ಘಟನೆ ನಡೆದಿದೆ ಎಂದರು.

ಗ್ರಾಮೀಣಕ್ಕೆ ಸಂಚಾರ ಇಲ್ಲ: ಗ್ರಾಮಾಂತರ ಸಾರಿಗೆ ಎಂಬ ಹೆಸರಿದ್ದರೂ ಯಾರೂ ಗ್ರಾಮೀಣ ಭಾಗದಲ್ಲಿ ಬಸ್‌ ಓಡಿಸಲ್ಲ. ಉಪವಿಭಾಗದ ಶೇ.80 ಹಳ್ಳಿಗಳಿಗೆ ಈಗಲೂ ಸಾರಿಗೆ ಬಸ್‌ ಸಂಚಾರವಿಲ್ಲ. ಯಾವುದೇ ಅಪಘಾತವಾದರೂ ಖಾಸಗಿ ಬಸ್‌ಗಳ ಮೇಲೆ ಬರೆ ಎಳೆಯುವುದು ಸರಿಯಲ್ಲ. ವಿದ್ಯಾರ್ಥಿಗಳಿಗೆ ಸಂಸ್ಥೆ ಪಾಸ್‌ ಕೊಟ್ಟು ಬಸ್‌ ಬಿಡುತ್ತಿಲ್ಲ. ಬಂದರೆ ಖಾಸಗಿ ಬಸ್‌ ಸಮಯಕ್ಕೆ ಬರುತ್ತಾರೆ. ಆಗ ಎಲ್ಲರಿಗೂ ನಷ್ಟವಾಗಲಿದ್ದು, ಈ ಬಗ್ಗೆಯೂ ಡಿಪೋ ಅಧಿಕಾರಿಗಳಿಗೆ ತಿಳಿ ಹೇಳಬೇಕು ಎಂದರು.

 30 ಸೇವೆಗಳು ಆನ್‌ಲೈನ್‌: ಸಾರಥಿ ಸೇವೆಯಲ್ಲಿ ಎಲ್‌ಎಲ್‌ಆರ್‌ ಅಸಲಿ ಮತ್ತು ನಕಲು ಪತ್ರ, ಹೆಸರು ಮತ್ತು ವಿಳಾಸ ಬದಲಾವಣೆ, ಕಂಡಕ್ಟರ್‌ ಪರವಾನಿಗಿ, ಹೆಸರು, ವಿಳಾಸ ಬದಲಾವಣೆ ಮತ್ತು ನಕಲು ಪತ್ರ, ಅಂತಾರಾಷ್ಟ್ರೀಯ ಕಲಿಕಾ ಪತ್ರ.

ವಾಹನ್‌ ಸೇವೆಯಲ್ಲಿ: ಹೊಸ ವಾಹನ ನೋಂದಣಿ, ಮಾಲೀಕತ್ವ, ವಿಳಾಸ ವರ್ಗಾವಣೆ, ನಕಲು ಪತ್ರ, ಕಂತಿನ ಕರಾರು, ಮುಂದುವರಿಕೆ, ತಾತ್ಕಾಲಿಕ ನೋಂದಣಿ, ಎನ್‌ಒಸಿ, ಸಿಸಿ ಹಾಗೂ ಬಿ ವರದಿ, ಕ್ಯಾಬ್‌, ಆಟೋ, ಸರಕು ಸಾಗಣೆ ವಾಹನ ಪರ್ಮಿಟ್‌, ಎಲ್ಲ ತರದ ನವೀಕರಣ, ನಕಲಿ ಪರ್ಮಿಟ್‌, ಪರ್ಮಿಟ್‌ ರದ್ಧತಿ ಸೇರಿದಂತೆ ಒಟ್ಟು 30 ಸೇವೆಗಳನ್ನು ಆನ್‌ಲೈನಲ್ಲಿ ಕುಳಿತು ಪಡೆಯಬಹುದು.

ಈ ಸಂದರ್ಭದಲ್ಲಿ ಖಾಸಗಿ ಬಸ್‌ ಮಾಲೀಕರಾದ ಮಂಜುನಾಥ್‌, ಚೌಡಪ್ಪ, ಮಂಜಣ್ಣ, ಪ್ರಸನ್ನಪ್ಪ, ಸಲೀಂ ಹಾಗೂ ಆಟೋ, ಕ್ಯಾಬ್‌ ಮಾಲೀಕರು, ಚಾಲಕರು ಎಆರ್‌ಟಿಒ ಕಚೇರಿ ವ್ಯವಸ್ಥಾಪಕ ಜಯಣ್ಣ, ರಾಜಣ್ಣ ಇದ್ದರು.

ಟಾಪ್ ನ್ಯೂಸ್

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

1-aaaa

2019 ರಲ್ಲಿ ಸೋತಿದ್ದಕ್ಕೆ ವ್ಯಥೆಯಿಲ್ಲ, ಈ ಬಾರಿ ಸೋಮಣ್ಣ ಗೆಲ್ಲಬೇಕು: ಎಚ್.ಡಿ.ದೇವೇಗೌಡ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.