ಹೋರಾಟದಿಂದ ಮಾತ್ರ ಕಾರ್ಮಿಕರಿಗೆ ಸೌಲಭ್ಯ ಲಭ್ಯ
Team Udayavani, May 20, 2019, 5:09 PM IST
ಪಾವಗಡ: ಹಲವು ಹೋರಾಟಗಳ ಫಲವಾಗಿ ಕಟ್ಟಡ ಕಾರ್ಮಿಕರಿಗೆ ಇಂದು ಸೌಲಭ್ಯಗಳು ದೊರಕುತ್ತಿವೆ ಎಂದುತುಮಕೂರು ಜಿಲ್ಲಾ ಕಾರ್ಮಿಕ ಸಂಘಟನೆ ಎಐಟಿಸಿ ಮುಖಂಡ ಗಿರೀಶ್ ಹೇಳಿದರು.
ಭಾನುವಾರ ತಾಲೂಕಿನ ವೆಂಕಟಾಪುರ ಗ್ರಾಮದ ಕನಕ ಭವನದಲ್ಲಿ ಕಟ್ಟಡಕಾರ್ಮಿಕರ ಸಂಘದಿಂದ ನಡೆದ ಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿದ ಅವರು ಮಾತನಾಡಿ, ಸೌಲಭ್ಯಗಳನ್ನು ಪಡೆಯಬೇಕಾದರೆ ಸಂಘಟಿತರಾಗ ಬೇಕು. ಸಂಘದಿಂದ ನಡೆಯುವ ಪ್ರತಿಯೊಂದು ಸಭೆಗೂ ಅಗಮಿಸಿ,
ಮಾಹಿತಿಯನ್ನು ಪಡೆದುಕೊಳ್ಳ ಬೇಕು ಎಂದು ಹೇಳಿದರು. ಮುಖಂಡ ಗೌಡ ರಂಗಪ್ಪ ಮಾತನಾಡಿ, ದುಡಿಯುವ ವರ್ಗಕ್ಕೆ ಎಐಟಿ ಯುಸಿ ನ್ಯಾಯ ಕಲ್ಪಿಸಿದೆ. ಸಂಘಟಿತರಾಗಿ ಹೋರಾಡಿದರೆ ಮಾತ್ರ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬಹುದು ಎಂದರು.
ಅಂಧ್ರದ ಅನಂತಪುರ ಜಿಲ್ಲೆಯ ಸಿಪಿಐ. ನಾಯಕ ಚಿಟ್ಲು ರುದ್ರಯ್ಯ ಮಾತನಾಡಿ, ಕಾರ್ಮಿಕರು ಎಂದರೆದೇಶದ ಸಂಪತ್ತು. ಆದರೆ, ಕಾರ್ಮಿಕರನ್ನು ಕಡೆಗಣಿಸುತ್ತಿದ್ದಾರೆ. ವಿಶ್ವ ಕಾರ್ಮಿಕರಲ್ಲಿ ಮಹಿಳೆಯರ ಪಾತ್ರ ಅಪಾರವಿದೆ ಎಂದು ತಿಳಿಸಿದರು. ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ಬಲ್ಲೇನಹಳ್ಳಿ ಶ್ರೀರಾಮಯ್ಯ,ಕಾರ್ಮಿಕ ಮುಖಂಡ ಗೌಡೇಟಿ ನಾಗರತ್ನಪ್ಪ, ಸಿಪಿಐ ಮುಖಂಡ ಅಶ್ವಥ್ ನಾರಾಯಣ, ಮುಖಂಡರಾದ ಕೃಷ್ಣ ಮೂರ್ತಿ, ತಿಪೇಸ್ವಾಮಿ, ರಾಮನಾಥ್,ಜಿ.ಎಚ್.ರಾಮಾಂಜಿ, ವೆಂಕಟರಮಣಪ್ಪ ಮತ್ತು ನೂರಾರು ಕಾರ್ಮಿಕರು ಭಾಗವಹಿಸಿದ್ದರು. ವೆಂಕಟಾ ಪುರ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಜಾಥಾ ನಡೆಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ