ರಾಗಿ ಹಣ ರೈತರ ಕೈಗೆ ಸೇರಿಲ್ಲ
Team Udayavani, May 16, 2019, 12:26 PM IST
ತಿಪಟೂರು: ತಾಲೂಕಿನ ರೈತರು ಸರ್ಕಾರದ ರಾಗಿ ಖರೀದಿ ಕೇಂದ್ರಕ್ಕೆ ಸಾವಿರಾರು ಕ್ವಿಂಟಲ್ ರಾಗಿ ಮಾರಿದ್ದು, ಮಾರಾಟ ಮಾಡಿರುವ ರಾಗಿ ಹಣ ಮಾತ್ರ ಇನ್ನೂ ರೈತರ ಕೈಗೆ ಸೇರಿಲ್ಲ. ಆದ್ದ ರಿಂದ ನಮ್ಮ ರಾಗಿ ಮಾರಿರುವ ಹಣಕ್ಕೂ ಚುನಾ ವಣಾ ನೀತಿಸಂಹಿತೆ ಅಡ್ಡಿಯಾಗಬೇಕೆ ಎಂದು ರೈತರು ಜಿಲ್ಲಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 2019 ಜನವರಿ 12ರಿಂದ ಮಾರ್ಚ್ ಅಂತ್ಯದವರೆಗೂ ತಾಲೂಕಿನಲ್ಲಿ ನಫೆಡ್ನ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ಕ್ವಿಂಟಲ್ ರಾಗಿಗೆ 2970ರಂತೆ ಬೆಂಬಲ ಬೆಲೆಗೆ ಸಾವಿರಾರು ಕ್ವಿಂಟಲ್ ರಾಗಿ ಖರೀದಿ ಮಾಡಿ ದ್ದಾರೆ. ಸರ್ಕಾರಕ್ಕೆ ನಾವು ರಾಗಿ ಮಾರಾಟ ಮಾಡುವುದ ರಿಂದ ಬೇಗ ಹಣ ಸಿಕ್ಕಿ, ನಮ್ಮ ಕಷ್ಟ ಗಳಿಗೆ ಅನುಕೂಲವಾಗುತ್ತದೆ ಎಂಬ ಆಸೆಯಿಂದ ರೈತರು ಸಹ ಮಾರಾಟ ಮಾಡಿದ್ದಾರೆ. ಆದರೆ, ಹಣ ಮಾತ್ರ ಇನ್ನೂ ಸಿಕ್ಕಿಲ್ಲ.
ರಾಗಿ ಕೇಂದ್ರಕ್ಕೆ ರೈತರ ಅಲೆದಾಟ: ಮನೆ ಖರ್ಚು, ವಿದ್ಯಾಭ್ಯಾಸದ ಖರ್ಚು, ಮುಂಗಾರು ಹಂಗಾಮಿಗೆ ಗೊಬ್ಬರ-ಬಿತ್ತನೆ ಬೀಜಗಳ ಖರ್ಚಿಗೆ ಹಣ ಸಿಗುವುದು ಎಂಬ ಆಸೆಯಿಂದ ರೈತರು ರಾಗಿ ಮಾರಿ, ನಿತ್ಯವೂ ದುಡ್ಡು ಬಂತಾ ಎಂದು ರೈತರು ನಫೆಡ್ ಕೇಂದ್ರಕ್ಕೆ ಅಲೆದಾಡು ವಂತಾಗಿದೆ. ಒಂದು ದಿನ ರಾಗಿ ಖರೀದಿ ಕೇಂದ್ರಕ್ಕೆ ಒಬ್ಬ ರೈತ ಬಂದು ಹೋಗಲು ನೂರು ರೂ. ಬೇಕಾಗುತ್ತದೆ. ಹಾಗಾಗಿ ರೈತರು ಸಿಕ್ಕಿದಷ್ಟು ಬೆಲೆಗೆ ಖಾಸಗಿ ವ್ಯಾಪಾರಿಗಳಿಗೆ ಮಾರಿದ್ದರೆ ಕೈ ಮೇಲೆ ದುಡ್ಡು ಕೊಡುತ್ತಿದ್ದರು. ಆದರೆ, ಸರ್ಕಾರ ನಂಬಿ ರಾಗಿ ಮಾರಿ 3-4 ತಿಂಗಳು ಅಲೆಯ ಬೇಕಾಗಿರುವುದು ಯಾವ ನ್ಯಾಯ. ರೈತನಿಗೆ ಬೇರೆ ಆದಾಯ ಇಲ್ಲವಾಗಿದ್ದು, ಮಾರಿರುವ 8-10 ಕ್ವಿಂಟಲ್ ರಾಗಿಗೂ ಸರ್ಕಾರ ನಮ್ಮನ್ನು ಅಲೆದಾಡಿಸುತ್ತಿರುವುದು ನೋಡಿದರೆ ರೈತರ ಮೇಲೆ ಕಾಳಜಿಯೇ ಇಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
ಆಕಸ್ಮಿಕ ಬೆಂಕಿಗೆ ಅಡಿಕೆ, ಬಾಳೆ ಗಿಡಗಳು ನಾಶ… ಅಗ್ನಿಶಾಮಕ ಸಿಬ್ಬಂದಿ ವಿರುದ್ಧ ಆಕ್ರೋಶ
Pray for Rain: ಮಳೆಗಾಗಿ ಮಕ್ಕಳ ಮದುವೆ, ಊರಿಗೆಲ್ಲಾ ಊಟ!
Kunigal; ಮನೆ ಮಾಲೀಕನ ಮೇಲೆ ಗುಂಡು ಹಾರಿಸಿ ಹಣ ದೋಚಿ ಪರಾರಿಯಾದ ದರೋಡೆಕೋರರು
ಸಂವಿಧಾನ ವಿರೋಧಿ ಹೇಳಿಕೆಯಿಂದ ಅನಂತ್ ಹೆಗಡೆಗೆ ಟಿಕೆಟ್ ತಪ್ಪಿದೆ: ಸೋಮಣ್ಣ
MUST WATCH
ಹೊಸ ಸೇರ್ಪಡೆ
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು