ಸದೃಢವಾಗಿ ಪಕ್ಷ ಕಟ್ಟುವ ವಚನ ಸ್ವೀಕರಿಸಿ
Team Udayavani, Jun 1, 2020, 7:28 AM IST
ತುಮಕೂರು: ಜೂ.7 ರಂದು ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸುವ ದಿನ, ಕಾಂಗ್ರೆಸ್ ಕಾರ್ಯ ಕರ್ತರು ತಮ್ಮ ಗ್ರಾಪಂ, ವಾರ್ಡುಗಳಲ್ಲಿ ತಾವು ಪಕ್ಷವನ್ನು ಸದೃಢವಾಗಿ ಕಟ್ಟುವ ಪ್ರಮಾಣ ವಚನ ಪಡೆಯುವ ಮೂಲಕ ಕಾರ್ಯಕರ್ತರ ಹಬ್ಬವಾಗಿ ಆಚರಿಸುವಂತೆ ಪ್ರದೇಶ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರೊ.ರಾಧಾಕೃಷ್ಣ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿ ಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇರುವ ತಂತ್ರಜ್ಞಾನವನ್ನು ಬಳಸಿ ಕೊಂಡು, ಒಂದೊಂದು ಗ್ರಾಮ ಪಂಚಾಯಿತಿ ಯಲ್ಲಿ ಕನಿಷ್ಠ 100 ಜನ ಕಾಂಗ್ರೆಸ್ ಕಾರ್ಯಕರ್ತರು, ಜನಸಾಮಾನ್ಯರು ಕೆಪಿಸಿಸಿ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭವನ್ನು ವೀಕ್ಷಿಸುವ ಮೂಲಕ ಪಕ್ಷವನ್ನು ಸದೃಢವಾಗಿ ಕಟ್ಟುವ ಪ್ರತಿಜ್ಞೆ ಕೈಗೊಳ್ಳಬೇಕು ಎಂದರು.
ಮಾರಕವಾದ ಕಾಯ್ದೆಗಳು ಜಾರಿ: ನಮಗೆ ಅರಿವಿಲ್ಲದೆ ಕೊರೊನಾ ಎಂಬ ಮಹಾ ಮಾರಿಯ ನೆಪದಲ್ಲಿ ಸರ್ವಾಧಿಕಾರಿ ಆಡಳಿತಕ್ಕೆ ಒಳಪಡುತ್ತಿದ್ದೇವೆ. ಜನರ ಹಿತದೃಷ್ಟಿಯಿಂದ ಇದನ್ನು ವಿರೋಧಿಸುವಂತಹ ಸ್ಥಿತಿಯಲ್ಲಿಯೂ ನಾವಿಲ್ಲ. ಇದರ ಪರಿಣಾಮವಾಗಿ ದೇಶದ ಜಿಡಿಪಿ ಶೇ1.2ಕ್ಕೆ ಕುಸಿದಿದೆ. ಆರ್ಬಿಐ, ನೀತಿ ಆಯೋಗಗಳು ಎಚ್ಚರಿಕೆ ನೀಡಿದ್ದರೂ ಸಹ ಅದನ್ನು ಗಣನೆಗೆ ತೆಗೆದುಕೊಳ್ಳದೆ ಪ್ರಜಾಪ್ರಭು ತ್ವಕ್ಕೆ ಮಾರಕವಾದ ಕಾಯ್ದೆಗಳು ಜಾರಿಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕರ್ತರು ಕೆಲಸ ಮಾಡಿ: ದೇಶದೊಳಗೆ ವೀಸಾ ಪಡೆದು ತಿರುಗಾಡುವಂತಹ ದುಸ್ಥಿತಿ ಭಾರತದ ಜನರಿಗೆ ಬಂದೊದಗಿರುವುದು ದುರ ದೃಷ್ಟಕರ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಅದು ಈಡೇರಬೇಕೆಂದರೆ ಪಕ್ಷದ ಕಾರ್ಯ ಕರ್ತರು ತಾವೇ ಕೆಪಿಸಿಸಿ ಅಧ್ಯಕ್ಷರು ಎಂಬಂತೆ ಕೆಲಸ ಮಾಡಬೇಕಾಗಿದೆ ಎಂದು ನುಡಿದರು.
ಸಾರ್ವಜನಿಕರೊಂದಿಗೆ ಸಂವಾದ: ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ದೇಶದಲ್ಲಿ ಇಷ್ಟೊಂದು ವಲಸೆ ಕಾರ್ಮಿಕರಿದ್ದಾರೆಯೇ ಎಂದು ತಿಳಿದಿದ್ದೇ ಕೊರೊನಾದಿಂದ, ಲಾಕ್ಡೌನ್ ಮುಗಿಯ ದಿದ್ದರೆ ದೇಶ ಮತ್ತಷ್ಟು ಅಧೋಗತಿಗೆ ತಳ್ಳಲ್ಪ ಡುವುದರಲ್ಲಿ ಅನುಮಾನವಿಲ್ಲ. ಕೆಪಿಸಿಸಿ ಅಧ್ಯಕ್ಷ ಕೈಗೊಂಡಿರುವ ಅಧಿಕಾರ ವಿಕೇಂದ್ರೀ ಕರಣ ಚೆನ್ನಾಗಿದೆ. ಎಲ್ಲರೂ ಒಂದೆಡೆ ಸೇರುವ ಬದಲು ತಾವು ಎಲ್ಲಿರುತ್ತೀರೋ ಅಲ್ಲಿಯೇ ಕಾರ್ಯಕ್ರಮ ವೀಕ್ಷಿಸಿ, ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಯಶಸ್ವಿಗೊಳಿ ಸುವಂತೆ ಸಲಹೆ ನೀಡಿದರು.
ಯುವ ಜನರನ್ನು ಸೆಳೆಯಬೇಕು: ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಮಾಸ್ ಪಾರ್ಟಿಯನ್ನು ಕೇಡರ್ ಲೀಡರ್ ಶಿಫ್ ಪಾರ್ಟಿಯಾಗಿ ಬದಲಾಯಿಸಲು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹೊರಟ್ಟಿದ್ದಾರೆ. ಜೂನ್ 7ರಂದು ಯುವಜನರಲ್ಲಿ ಅದರಲ್ಲಿಯೂ ಗ್ರಾಮೀಣ ಯುವಜನರನ್ನು ತಂತ್ರಜ್ಞಾನದ ಮೂಲಕ ಸೆಳೆಯುವ ಮೂಲಕ ಅವರು ಪಕ್ಷದ ಆಸ್ತಿಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಸಂಯೋಜಕರಿಗೆ ಮಾಹಿತಿ: ಪಕ್ಷದ ಉಸ್ತು ವಾರಿಗಳು, ರಾಜ್ಯದ ಮೇಲ್ಮನೆ ಸದಸ್ಯರಾದ ವೇಣುಗೋಪಾಲ್ ಮತ್ತು ರಾಜಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಈಗಾ ಗಲೇ ಗ್ರಾಪಂ ಮತ್ತು ವಾರ್ಡು ಮಟ್ಟದಲ್ಲಿ ನೇಮಕಗೊಂಡಿರುವ ಸಂಯೋಜಕರಿಗೆ ಜೂನ್ 7ರಂದು ಕೆಪಿಸಿಸಿ ಅಧ್ಯಕ್ಷರು ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಕೈಗೊಳ್ಳಬೇಕಾಗಿ ರುವ ಕ್ರಮಗಳ ಕುರಿತು ವಿವರವಾದ ಮಾಹಿತಿ ನೀಡಿದರು.
ವಿಧಾನಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀ ನಾರಾಯಣ್, ಮಾಜಿ ಶಾಸಕರಾದ ಎಸ್. ರಫೀಕ್ ಅಹಮದ್, ಎಸ್. ಅಹಮದ್, ಆರ್.ನಾರಾಯಣ್, ಮುರಳೀಧರ ಹಾಲಪ್ಪ, ಅಪ್ತಾಬ್ ಅಹಮದ್, ಹೊನ್ನಗಿರಿಗೌಡ, ಎಚ್.ಸಿ.ಹನುಮಂತಯ್ಯ, ಸಿದ್ದಲಿಂಗೇಗೌಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ
CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು