ಗೂಡು ಕಳೆದುಕೊಂಡ ಪಕ್ಷಿಗಳ ಆರ್ತನಾದ
Team Udayavani, Mar 6, 2021, 5:10 PM IST
ಚಿಕ್ಕನಾಯಕನಹಳ್ಳಿ: ಪಟ್ಟಣದ ಬಿ. ಎಚ್ ರಸ್ತೆಯಲ್ಲಿನ ಸಾಲು ಮರಗಳಲ್ಲಿ ಹಲವಾರು ದಶಕಗಳಿಂದ ಸಾವಿರಾರು ಪಕ್ಷಿಗಳು ಗೂಡು ಕಟ್ಟಿಕೊಂಡು ವಾಸಿಸುತ್ತಿದ್ದವು.ರಸ್ತೆ ಅಭಿವೃದ್ಧಿಗಾಗಿ ಮರಗಳಿಗೆ ಕೊಡಲಿ ಪೆಟ್ಟು ಬಿದ್ದಕಾರಣ ಗೂಡು ಕಳೆದುಕೊಂಡ ವಿವಿಧ ಜಾತಿಯ ಪಕ್ಷಿಗಳು ಗಾಸಿಯಾಗಿ ಬಾನಲ್ಲಿಹಾರಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ರಸ್ತೆ ಅಭಿವೃದ್ಧಿಯಾಗಬೇಕು ಎಂದರೆ ರಸ್ತೆಗಳಿಗೆ ಅಡ್ಡವಾಗಿರುವ ಮರಗಳನ್ನು ಕಡಿಯುವುದು ಅನಿವಾರ್ಯ. ಪಟ್ಟಣದಲ್ಲಿ ಹಾದು ಹೋಗುತ್ತಿರುವ 150 ಎ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ನೂರಾರು ಮರಗಳು ಧರೆಗುರುಳಿವೆ. ಶೆಟ್ಟಿಕೆರೆ ಗೇಟ್ , ತಾತಯ್ಯನ ಗೋರಿ ಹಾಗೂ ಖಾಸಗಿ ಬಸ್ನಿಲ್ದಾಣದ ಬಳಿ ಹಲವಾರು ದಶಕಗಳಿಂದ ಬೆಳೆದು ನಿಂತಿದ್ದ ಅರಳಿ ಹಾಗೂ ಬೇವಿನ ಮರಗಳನ್ನೂ ಕತ್ತರಿಸಲಾಗಿದೆ . ಈ ಮರಗಳಲ್ಲಿವಿವಿಧ ಜಾತಿಯ ನೂರಾರು ಪಕ್ಷಿಗಳು ವಾಸ ಮಾಡುತ್ತಿದ್ದವು ಈಗ ಅವುಗಳಿಗೆ ರಾತ್ರಿ ಕಳೆಯಲು ಜಾಗವಿಲ್ಲದಾಗಿದೆ.
ಆಹಾರ ಹುಡುಕಿಕೊಂಡು ಬರುವಷ್ಟರಲ್ಲಿ ಗೂಡು ನಾಪತ್ತೆ: ಸೂರ್ಯ ಹುಟ್ಟುವ ಮೊದಲೇ, ಗೂಡು ಬಿಟ್ಟು ತನಗೆ ಹಾಗೂ ತನ್ನ ಮರಿಗಳಿಗೆ ಆಹಾರವನ್ನು ಸಂಗ್ರಹಿಸಿಕೊಂಡು ಬರಲು ಹೋದ ಪಕ್ಷಿಗಳಿಗೆ ಸಂಜೆ ಬಂದು ನೋಡಿದರೆ. ದಶಕಗಳಿಂದ ವಾಸಕ್ಕೆ ಆಸರೆಯಾಗಿದ್ದ ಮರವೇ ಧರೆಗುರುಳಿಬಿದ್ದಿರುವುದನ್ನು ಕಂಡು ದಿಕ್ಕು ತೋಚದೆ ಮರ ಇದ್ದ ಜಾಗದಲ್ಲಿ ನೂರಾರು ಪಕ್ಷಿಗಳುರೆಕ್ಕೆ ಬಡೆದುಕೊಂಡು ಅಸಾಯಕಥೆ ವ್ಯಕ್ತಪಡಿಸಿದವು.
ನಗರ ಸೌಂದರ್ಯಕ್ಕೆ ಮರಗಳು ಅಗತ್ಯ :
ಪಟ್ಟಣಗಳಲ್ಲಿ ನೆರಳು ನೀಡುವ ಮರಗಳನ್ನು ಕಡೆಯುವ ಬದಲು ಅಧುನಿಕತೆಯನ್ನು ಬಳಸಿಕೊಂಡು ಮರಗಳನ್ನು ಉಳಿಸಿಕೊಂಡು ರಸ್ತೆ ಅಭಿವೃದ್ಧಿಗೆ ಪ್ರಯತ್ನ ಪಡಬೇಕಾಗಿದೆ. ಗಿಡ ನೆಟ್ಟ ಕೆಲ ದಿನಗಳಲ್ಲಿ ಮರವಾಗಿ ನೆರಳು ನೀಡುವುದಿಲ್ಲ ಒಂದು ಮರ ಬೆಳೆದು ದೊಡ್ಡದಾಗಲು ಹಲವಾರು ವರ್ಷಗಳೆ ಬೇಕು. ಇದು ಎಲ್ಲಾರಿಗೂ ತಿಳಿದಿರುವ ವಿಷಯ. ರಸ್ತೆಅಗಲಿಕರಣವಾದರೂ ಮರಗಳು ಧರೆಗೆ ಬಿದ್ದ ಜಾಗದಲ್ಲಿ ಮರವನ್ನು ಬೆಳೆಸಿ ಪಟ್ಟಣದ ಸೌಂದರ್ಯವನ್ನು ಅಭಿವೃದ್ಧಿಪಡಿಸಬೇಕು ಎಂಬುವುದು ಸಾರ್ವಜನಿಕರ ಹಾಗೂ ಪರಿಸರ ಪ್ರೇಮಿಗಳ ಮನವಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
ಆಕಸ್ಮಿಕ ಬೆಂಕಿಗೆ ಅಡಿಕೆ, ಬಾಳೆ ಗಿಡಗಳು ನಾಶ… ಅಗ್ನಿಶಾಮಕ ಸಿಬ್ಬಂದಿ ವಿರುದ್ಧ ಆಕ್ರೋಶ
Pray for Rain: ಮಳೆಗಾಗಿ ಮಕ್ಕಳ ಮದುವೆ, ಊರಿಗೆಲ್ಲಾ ಊಟ!
Kunigal; ಮನೆ ಮಾಲೀಕನ ಮೇಲೆ ಗುಂಡು ಹಾರಿಸಿ ಹಣ ದೋಚಿ ಪರಾರಿಯಾದ ದರೋಡೆಕೋರರು
ಸಂವಿಧಾನ ವಿರೋಧಿ ಹೇಳಿಕೆಯಿಂದ ಅನಂತ್ ಹೆಗಡೆಗೆ ಟಿಕೆಟ್ ತಪ್ಪಿದೆ: ಸೋಮಣ್ಣ
MUST WATCH
ಹೊಸ ಸೇರ್ಪಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್