ಬೀಜ ಮಸೂದೆ ಜಾರಿಗೆ ವಿರೋಧ
Team Udayavani, Feb 14, 2020, 3:02 PM IST
ಸಾಂಧರ್ಬಿಕ ಚಿತ್ರ
ತಿಪಟೂರು: ಹಲವು ಬಿಕ್ಕಟ್ಟುಗಳಿಂದ ನರಳುತ್ತಿರುವ ಕೃಷಿ ಕ್ಷೇತ್ರವನ್ನು ಮತ್ತಷ್ಟು ಅಪಾಯಕ್ಕೆ ದೂಡುವ ಕೃಷಿ ವಿನಾಶಕಾರಿ ಬೀಜ ಮಸೂದೆ ಜಾರಿಗೆ ಮುಂದಾಗು ತ್ತಿರುವುದು ಖಂಡನೀಯ ಎಂದು ತುಮಕೂರಿನ ಸಹಜ ಬೇಸಾಯ ಶಾಲೆಯ ಡಾ.ಮಂಜುನಾಥ್ ತಿಳಿಸಿದರು.
ನಗರದ ಎಪಿಎಂಸಿಯ ರೈತ ಭವನದಲ್ಲಿ ಸಹಜ ಬೇಸಾಯ ಶಾಲೆ, ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ್ಯ ರೈತ ಸಂಘ, ಅಖೀಲ ಭಾರತ ಕಿಸಾನ್ ಸಭಾ ಮತ್ತು ಆಸಕ್ತ ಪ್ರಜ್ಞಾವಂತ ನಾಗರಿಕರ ಸಹಯೋಗದಡಿ ಬೀಜ ಮಸೂದೆ-2019 ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿ, ನೂತನ ಕಾಯ್ದೆಯಡಿ ಬೀಜ ವಾಣಿಜ್ಯೀಕರಣ ಪ್ರೋತ್ಸಾಹಿಸಿ ಲಾಭಕೋರ ಬಹುರಾಷ್ಟ್ರೀಯ ಬೀಜ ಕಂಪನಿಗಳಿಗೆ ದುಬಾರಿ ಬೆಲೆ ನಿಗದಿಪಡಿಸಿ ಮಾರುವ ಹಕ್ಕು ನೀಡುವ ಬೀಜ ಮಸೂದೆ ಜಾರಿಗೊಳಿಸಲು ತಯಾರಿ ನಡೆಸಿ ರೈತರ ಹಕ್ಕು ಕಿತ್ತುಕೊಳ್ಳಲು ಮುಂದಾಗಿದೆ ಎಂದು ದೂರಿದರು.
ತುಮಕೂರಿನ ಆರ್ಡರ್ ಸಂಸ್ಥೆ ಯೋಜನಾ ನಿರ್ದೇಶಕ ಜಿ.ವಿ. ರಘು ಮಾತನಾಡಿ, ಬಹುರಾಷ್ಟ್ರೀಯ ಕಂಪನಿಗಳು ಪಾಶ್ಚಿಮಾತ್ಯ ಮಾದರಿ ಜಾರಿಗೆ ತಂದು ಇಳುವರಿ, ಗುಣಮಟ್ಟದಲ್ಲಿ ವ್ಯತ್ಯಯ ಉಂಟು ಮಾಡಿವೆ. ಇದರ ಜೊತೆಗೆ ಬೀಜ ಮಸೂದೆ ಜಾರಿಗೆ ತಂದರೆ ಮಾರಕವಾಗಲಿದೆ ಎಂದರು.
ತುಮಕೂರು ವಿಜ್ಞಾನ ಕೇಂದ್ರದ ಯತಿರಾಜ್, ಆರ್ಡರ್ ಸಂಸ್ಥೆಯ ಮಾಧವನ್, ರಾಜ್ಯ ರೈತ ಸಂಘದ ಕಾರ್ಯದರ್ಶಿ ಬೆನ್ನಾಯಕನಹಳ್ಳಿ ದೇವ ರಾಜು, ಪ್ರಾಂತೀಯ ರೈತ ಸಂಘದ ತಾಲೂಕು ಅಧ್ಯಕ್ಷ ಚನ್ನಬಸವಯ್ಯ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ
Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು
ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತೆಯರು
2019 ರಲ್ಲಿ ಸೋತಿದ್ದಕ್ಕೆ ವ್ಯಥೆಯಿಲ್ಲ, ಈ ಬಾರಿ ಸೋಮಣ್ಣ ಗೆಲ್ಲಬೇಕು: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ