ಸಿದ್ಧಗಂಗಾ ಕಿರಿಯ ಶ್ರೀ ಸ್ವಾಗತ
Team Udayavani, Mar 21, 2018, 11:25 AM IST
ತುಮಕೂರು: ಲಿಂಗಾಯತ – ವೀರಶೈವ ಲಿಂಗಾಯತಕ್ಕೆ ಅಲ್ಪಸಂಖ್ಯಾಕ ಸ್ಥಾನಕ್ಕಾಗಿ ಕೇಂದ್ರಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿರುವುದನ್ನು ಸಿದ್ಧಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ಸ್ವಾಗತಿಸಿದ್ದಾರೆ.
ಮಂಗಳವಾರ ಪತ್ರಕರ್ತರ ಜೊತೆ ಮತನಾಡಿದ ಅವರು, ಸರಕಾರ ಬಹಳ ದಿನಗಳ ಹೋರಾಟಕ್ಕೆ ಮನ್ನಣೆ ನೀಡಿ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡಿದೆ. ಎಲ್ಲರೂ ಒಪ್ಪಿ ಈ ನಿರ್ಣಯ ಕೈಗೊಂಡಿದ್ದಾರೆ. ಇದರಿಂದ ಶೈಕ್ಷಣಿಕವಾಗಿ ಹೆಚ್ಚು ಅನುಕೂಲವಾಗುತ್ತದೆ ಎಂದರು.
ಜಂಗಮರು ಮೇಲಿನಿಂದ ಉದುರಿಲ್ಲ: ಧಾರವಾಡದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಾಹಿತಿ ಪ್ರೊ| ಚಂದ್ರಶೇಖರ ಪಾಟೀಲ ಜಂಗಮರೆಂದರೆ ಮೇಲಿನಿಂದ ಉದುರಿದವರಲ್ಲ ಅಥವಾ ನೆಲದಿಂದ ಉದ್ಭವಿಸಿದವರೂ ಅಲ್ಲ. ಹೀಗಾಗಿ ವೀರಶೈವ ಮಠಾಧೀಶರು ಲಿಂಗಾಯತ ಧರ್ಮದ ಸತ್ಯವನ್ನು ಒಪ್ಪಿಕೊಂಡು ಲಿಂಗಾಯತದೊಳಗೆ ಬರಬೇಕು ಎಂದರು.