ಪಶು ಆಹಾರ ಮಳಿಗೆಯಲ್ಲಿ ಕಳವು
Team Udayavani, Sep 2, 2019, 4:40 PM IST
ಕುಣಿಗಲ್ ಭಕ್ತರಹಳ್ಳಿ ಗ್ರಾಮದ ಎನ್.ಎನ್.ಎಂಟರ್ಪ್ರೖಸಸ್ ಪಶು ಆಹಾರ ಮಳಿಗೆ ಛಾವಣಿ ಮುರಿದಿರುವ ಕಳ್ಳರು.
ಕುಣಿಗಲ್: ರಾಜ್ಯ ಹೆದ್ದಾರಿ 33ರ ಭಕ್ತರಹಳ್ಳಿಯಲ್ಲಿ ಅಂಗಡಿಯ ಛಾವಣಿ ಸೀಟು ತೆಗೆದು ಒಳನುಗ್ಗಿರುವ ಕಳ್ಳರು 8 ಲಕ್ಷ ರೂ. ಮೌಲ್ಯದ ವಸ್ತು ಕಳವು ಮಾಡಿದ್ದಾರೆ.
ಎನ್ಎನ್ ಎಂಟರ್ಪ್ರ್ತ್ರೖಸಸ್ ಪಶು ಆಹಾರ ಮಳಿಗೆಯಲ್ಲಿ ಶನಿವಾರ ರಾತ್ರಿ ಮಧ್ಯರಾತ್ರಿ ಕಳ್ಳರು ಮಳಿಗೆ ಛಾವಣಿ ಒಡೆದು ಒಳ ಪ್ರವೇಶಿಸಿ ಸಿ.ಸಿ ಕ್ಯಾಮರಾ, ಕಂಪ್ಯೂಟರ್, ಯುಪಿಎಸ್ ಹಾಗೂ 600 ಚೀಲ ಬೂಸಾ ಕಳವು ಮಾಡಿ ಪರಾರಿಯಾಗಿದ್ದಾರೆ. ಕುಣಿಗಲ್ ಠಾಣೆಗೆ ದೂರು ನೀಡಲಾಗಿದೆ.
ಎರಡನೇ ಬಾರಿ ಕಳ್ಳತನ: ಒಂದು ವರ್ಷದ ಹಿಂದೆ ಅಪರಿಚಿತರು ಕೆಲಸದವರ ಗಮನ ಬೇರೆಡೆ ಸೆಳೆದು ಕ್ಯಾಶ್ ಕೌಂಟರ್ನಿಂದ ಸುಮಾರು 2.20 ಲಕ್ಷ ರೂ. ಕಳವು ಮಾಡಿದ್ದರು ಎಂದು ಅಂಗಡಿ ಮಾಲೀಕ ಎಸ್.ಸಿ.ನಟರಾಜ ಹೇಳಿದರು.
ದೇವಾಲಯಕ್ಕೂ ಕನ್ನ: ಹಳೆಯ ರಾಷ್ಟ್ರೀಯ ಹೆದ್ದಾರಿ 48ರ ಪಟ್ಟಣದ ಕೆ.ಆರ್.ಎಸ್ ಅಗ್ರಹಾರದ ಗಣಪತಿ ದೇವಾಲಯಕ್ಕೆ ಅಳವಡಿಸಿದ್ದ ಸಿ.ಸಿ. ಕ್ಯಾಮರಾ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಕಳ್ಳರು ದೇವಾಲಯದ ಕಬ್ಬಿಣದ ಬಾಗಿಲಿನ ಬೀಗ ಒಡೆದು ಬೀರು ಜಾಲಾಡಿದ್ದಾರೆ. ಏನೂ ಸಿಗದ ಕಾರಣ ಪಕ್ಕದಲ್ಲೇ ಇದ್ದ ಹುಂಡಿಯಲ್ಲಿದ್ದ ಒಂದು ಲಕ್ಷಕ್ಕೂ ಅಧಿಕ ಹಣ ದೋಚಿ ದ್ದಾರೆ. ಈ ಸಂಬಂಧ ಪಟ್ಟಣದ ಠಾಣೆಗೆ ದೇವಾಲಯದ ಮುಖ್ಯಸ್ಥರು ದೂರು ನೀಡಿದ್ದಾರೆ.
ಪೊಲೀಸರ ವೈಫಲ್ಯ: ಪೊಲೀಸರ ಗಸ್ತು ವೈಫಲ್ಯದಿಂದ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ಗಳು ಹೆಚ್ಚಾಗಿದೆ. ಕಳೆದ ತಿಂಗಳು ಠಾಣೆಗೆ ಕೂದಲೆಳೆ ಅಂತರದಲ್ಲಿರುವ ಪಂಚವಟಿ ಆಂಜನೇಯಸ್ವಾಮಿ ದೇವಾಲಯ ಬೀಗ ಮುರಿದು ಎರಡು ಹುಂಡಿ ದೋಚ ಲಾಗಿತ್ತು. ಪಟ್ಟಣದ ಮುಖ್ಯ ಅಂಚೆ ಕಚೇರಿ ಹಾಗೂ ಸುಧಾ ಪ್ರಸ್ ಅಂಗಡಿ ಬೀಗ ಮುರಿದ ಕಳ್ಳರು ಸಾವಿ ರಾರು ರೂ. ನಗದು ದೋಚಿದ್ದರು. ಆಲ್ಕೆರೆ, ಗವಿಮಠ ಸೇರಿ ಮೊದಲಾದ ಗ್ರಾಮ ಗಳಲ್ಲಿನ ದೇವಾಲಯಗಳ ಬೀಗ ಮುರಿದ ದುಷ್ಕರ್ಮಿಗಳು ಹಲವು ವಸ್ತು ಕಳವು ಮಾಡಿದ್ದರು. ಇದಕ್ಕೆಲ್ಲಾ ಪೊಲೀಸರ ಕಾರ್ಯವೈಖರಿ ಕಾರಣ ವೆಂಬುದು ಜನರ ಆರೋಪ. ಕೂಡಲೇ ಪೊಲೀಸ್ ಇಲಾಖೆ ಈ ಸಂಬಂಧ ಕ್ರಮ ಕೈಗೊಂಡು ರಾತ್ರಿ ಗಸ್ತು ಬಿಗಿ ಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ