“ಮಕ್ಕಳ ನಡೆ ಅರಣ್ಯದ ಕಡೆ’ ಕಾರ್ಯಕ್ರಮ
Team Udayavani, Mar 27, 2021, 2:51 PM IST
ತಿಪಟೂರು: ತಾಲೂಕಿನ ನೊಣವಿನಕೆರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗದ ವತಿಯಿಂದ ವಿಶ್ವ ಜಲ ದಿನಾಚರಣೆ ಅಂಗವಾಗಿ ಮಕ್ಕಳ ನಡೆ ಅರಣ್ಯದ ಕಡೆ ಎಂಬ ವಿನೂತನ ಪರಿಸರ ಪಯಣ ಕಾರ್ಯಕ್ರಮ ನಡೆಯಿತು.
ಶಾಲೆಯ ಇಕೋ ಕ್ಲಬ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಹಾಗೂ ನೊಣವಿನಕೆರೆಲಯನ್ಸ್ ಕ್ಲಬ್ನ ಸಹಕಾರದೊಂದಿಗೆಸುಮಾರು 60 ವಿದ್ಯಾರ್ಥಿಗಳು, ಶಿಕ್ಷಕವೃಂದ, ಪರಿಸರ ಪ್ರೇಮಿ, ಪರಿಸರ ಚಿಂತಕಗುಂಗರಮಳೆ ಮುರಳೀಧರ್ರ ಮಾರ್ಗದರ್ಶನದಲ್ಲಿ ನಡೆಯಿತು. ಮಕ್ಕಳನ್ನು ಸಮೀಪದ ರಂಗನಹಳ್ಳಿಯ ಅರಣ್ಯಕ್ಕೆ ಕರೆದುಕೊಂಡು ಹೋಗಲಾಗಿತ್ತು. ಅರಣ್ಯದ ದಾರಿಯಲ್ಲಿ ಸಿಗುವ ಸಸ್ಯ, ಗಿಡ, ಮರ ಮತ್ತು ವಿವಿಧ ಸಸ್ಯ ಪ್ರಬೇಧ ಮತ್ತು ಔಷಧೀಯ ಸಸ್ಯಗಳಪ್ರಪಂಚವನ್ನು ಮಕ್ಕಳ ಮುಂದೆ ತೆರೆದಿಡಲಾಯಿತು.
ವಿಶೇಷವಾಗಿ ಸಿಳ್ಳೆ ಹೊಡೆಯುವ ಕಾಯಿ, ನಿಸರ್ಗದ ಪಾನೀಯ ಗುಲಗಂಜಿ ಸಸ್ಯದ ಎಲೆ ತಿನ್ನುತ್ತಾ ವಿವಿಧ ಎಲೆ,ಕಾಯಿ, ಗಿಡಗಳ ಉಪಯೋಗಗಳನ್ನುತಿಳಿದುಕೊಂಡರು. ಜೀವ ವೈವಿಧ್ಯತೆಗಳಕುತೂಹಲ ತಿಳಿದುಕೊಂಡು ಪ್ರಕೃತಿಮಡಿಲಲ್ಲಿ ಕಾರ್ಯಕ್ರಮ ಆಚರಿಸಿದ್ದುವಿಶೇಷವಾಗಿತ್ತು.
ಈ ವೇಳೆ ಶಾಲೆಯ ಹಿರಿಯ ಸಹ ಶಿಕ್ಷಕಿ ಕೆ.ಎಂ.ರುಕ್ಮಿಣಿ,ಇಕೋ ಕ್ಲಬ್ ಸಂಚಾಲಕ, ಎನ್ಎಸ್ ಎಸ್ ಕಾರ್ಯಕ್ರಮಾಧಿಕಾರಿ ಸ.ಚ. ಜಗದೀಶ್, ಐ.ಟಿ. ಸಂಪನ್ಮೂಲ ಶಿಕ್ಷಕ ಯಾದವ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ
Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು
ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತೆಯರು
2019 ರಲ್ಲಿ ಸೋತಿದ್ದಕ್ಕೆ ವ್ಯಥೆಯಿಲ್ಲ, ಈ ಬಾರಿ ಸೋಮಣ್ಣ ಗೆಲ್ಲಬೇಕು: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?