ಸರ್ವೆ ಶುಲ್ಕ: ರೈತರ ಜೇಬಿಗೆ ಸರ್ಕಾರ ಕತ್ತರಿ


Team Udayavani, Feb 8, 2022, 1:43 PM IST

Untitled-1

ಮಧುಗಿರಿ: ಸದಾ ಒಂದಿಲ್ಲೊಂದು ಬೆಲೆ ಏರಿಕೆಮಾಡುವ ಸರ್ಕಾರ ಈಗ ರೈತರ ಜೇಬಿಗೆ ಕತ್ತರಿಹಾಕುವ ಮೂಲಕ ಸರ್ವೆ ಶುಲ್ಕವನ್ನು 35 ರೂ.ಗಳಿಂದಗರಿಷ್ಠ 5 ಸಾವಿರಕ್ಕೆ ಮಿತಿಗೊಳಿಸಿ, ಅನ್ನದಾತರ ಆರ್ಥಿಕತೆಯನ್ನು ಕಸಿಯುತ್ತಿದೆ.

ರಾಜ್ಯಾದ್ಯಂತ ಲಕ್ಷಾಂತರ ರೈತರು ತಮ್ಮ ಜಮೀನುಗಳು ಹದ್ದುಬಸ್ತಿಗೆ ಶುಲ್ಕಕಟ್ಟಿ ಕಾಯುತ್ತಿವೆ. ಹಲವಾರು ಕಡೆ ತಾತ ಮುತ್ತಾತನ ಹೆಸರಿಂದ ಭೂಮಿಮಕ್ಕಳ ಹೆಸರಿಗೆ ಬದಲಾಗಿಲ್ಲ. ಇಂತಹ ಸಮಯದಲ್ಲಿಭಾಗ ಮಾಡಿಕೊಳ್ಳಲು ಸರ್ವೆ ಅಗತ್ಯ. ಇಂತಹಮುಖ್ಯವಾದ ಕಾರ್ಯಕ್ಕೆ 2 ಎಕರೆಗೆ 35 ರೂ.ಗಳಿಂದ350 ರೂ.ಗಳವರೆಗೂ ಇದ್ದ ಶುಲ್ಕವನ್ನು ಸರ್ಕಾರಏಕಾಏಕಿ 2 ಸಾವಿರ ರೂ.ನಿಂದ 5 ಸಾವಿರ ರೂ.ವರೆಗೂ ಹೆಚ್ಚಿಸಿ, ರೈತರ ಬದುಕಿನ ಮೇಲೆ ಬರೆ ಎಳೆದಿದೆ.

ಪರಿಷ್ಕೃತ ನೂತನ ಶುಲ್ಕ ಜಾರಿ: ಫೆ.1ರಿಂದಲೇ ಈಪರಿಷ್ಕೃತ ನೂತನ ಶುಲ್ಕ ಜಾರಿಯಾಗಿದ್ದು, ಮುಂದೆರೈತರು ಸರ್ವೆ ಕಾರ್ಯಕ್ಕೆ ನೂತನ ದರದಂತೆಯೇಶುಲ್ಕ ಪಾವತಿಸಬೇಕಿದೆ. ಹಿಂದೆ 2 ಎಕರೆಯವರೆಗೂ35 ರೂ.ಗಳನ್ನು ಮಾತ್ರ ಪಾವತಿಸಬೇಕಿದ್ದು, ಬಾಜುದಾರರಿಗೆ ನೀಡುವ ನೋಟಿಸ್‌ ಶುಲ್ಕವಾಗಿ 25ರೂ.ಪಾಯಿ ಮಾತ್ರ ಪಡೆಯುತ್ತಿದ್ದರು.

ಗ್ರಾಮೀಣ ರೈತರಿಗೆ ಬರೆ : 11 ಇ ಅರ್ಜಿ ಮತ್ತುಅಲಿನೇಷನ್‌ ಪೂರ್ವ 11 ಇ ನಕ್ಷೆಗೆ ಮತ್ತು ತತ್ಕಾಲ್‌ಪೋಡಿಗೆ 1200 ಇದ್ದು, ನಗರ ಪ್ರದೇಶದ ರೈತರಿಗೆ 2ಸಾವಿರ ರೂ. ನಿಗದಿಗೊಳಿಸಿದ್ದಾರೆ. ಆದರೆ, ಗ್ರಾಮೀಣಭಾಗದಲ್ಲಿನ ಎಕರೆ ಭೂಮಿಯ ಬೆಲೆಗೂ ನಗರಪ್ರದೇಶದ ಭೂಮಿಯ ಬೆಲೆಗೂ ಸಾವಿರ ಪಟ್ಟು ವ್ಯತ್ಯಾಸವಿದೆ. ನಗರ ಪ್ರದೇಶದ ಭೂಮಿಗೆ ಕೋಟಿ ಗಟ್ಟಲೆ ಬೆಲೆ ಸಿಗುತ್ತದೆ. ಅಂತವರಿಗೆ 2 ಎಕರೆಯವರೆಗೂ 2500 ಸಾವಿರದಿಂದ 5 ಸಾವಿರ ರೂ.ವರೆಗೂ ಶುಲ್ಕ ವಿಧಿಸಿದೆ. ಆದರೆ, ಗ್ರಾಮೀಣ ಭಾಗದ 1 ಎಕರೆಭೂಮಿಗೆ 3ರಿಂದ ಕನಿಷ್ಠ 5 ಲಕ್ಷ ರೂ., ಬೆಲೆಯಿದ್ದು, 2 ಸಾವಿರದಿಂದ 4 ಸಾವಿರ ರೂ.ವರೆಗೂ ಶುಲ್ಕವಿಧಿಸಿರುವುದು ಯಾವ ನ್ಯಾಯ ಎಂಬುದು ರೈತ ಮುಖಂಡರ ಪ್ರಶ್ನೆಯಾಗಿದೆ.

ಸರ್ವೆ ಶುಲ್ಕ ಕಡಿತಗೊಳಿಸಲು ಆಗ್ರಹ: ನಗರ ಪ್ರದೇಶದ ಭೂಮಿಯು ಹೆಚ್ಚಾಗಿ ಭೂ ಪರಿವರ್ತನೆಯಾಗಿ ನಿವೇಶನದ ರೂಪ ತಾಳುತ್ತಿದ್ದು, ಕೋಟಿಗಟ್ಟಲೆಆದಾಯ ಬರುತ್ತದೆ. ಆದರೆ, ಗ್ರಾಮೀಣ ಭಾಗದಭೂಮಿಯು ಹಲವೆಡೆ ಬಂಜರು ಭೂಮಿಯಾಗಿದ್ದು, ರೈತರ ಬೇಸಾಯದೊಂದಿಗೆ ಜೂಜಾಟ ಆಡುವ ಈಮಳೆಯಿಂದಲೂ ನಷ್ಟ ಹೊಂದುವ ಗ್ರಾಮೀಣರೈತರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪರದಾಡು ವಂತಹ ಸ್ಥಿತಿಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಸರ್ಕಾರ ಏಕಾಏಕಿ ಶೇ.1500 ಪಟ್ಟು ಶುಲ್ಕವನ್ನುಏರಿಸಿರುವುದು ಅನ್ಯಾಯ ಎಂದು ರೈತರುಅಸಮಧಾನ ವ್ಯಕ್ತಪಡಿಸಿದ್ದು, ಈ ನೂತನ ಪರಿಷ್ಕೃತದರವನ್ನು ಮತ್ತೂಮ್ಮೆ ಪರಿಶೀಲಿಸಿ ಸರ್ವೆ ಶುಲ್ಕವನ್ನು ಕಡಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ನಿಜಕ್ಕೂ ಈ ಶುಲ್ಕ ಏರಿಕೆಸರಿಯಲ್ಲ. ಇದು ಜನವಿರೋಧಿ ನೀತಿಯಾಗಿದೆ. ರೈತರ ಉಳಿವಿಗೆ ಕುಮಾರಸ್ವಾಮಿ ಸರ್ಕಾರದಲ್ಲಿಸಾಲಮನ್ನಾ ಆಗಿತ್ತು. ಆದರೆ, ಈಗಿನಸರ್ಕಾರ ಸದಾ ರೈತರ ಜೇಬಿಗೆ ಕತ್ತರಿ ಹಾಕುತ್ತಿರುವುದು ದುರಂತ. -ಎಂ.ವಿ.ವೀರಭದ್ರಯ್ಯ, ಶಾಸಕ

ಸರ್ಕಾರ ಸದಾ ಕಾಲ ರೈತರನ್ನು ಕಡೆಗಣಿಸುತ್ತಿದೆ. ಸರ್ವೆ ಕಾರ್ಯಕ್ಕೆ 35 ರೂ.ಗಳಿಂದ ಗರಿಷ್ಠ5 ಸಾವಿರ ರೂ.ವರೆಗೂ ಶುಲ್ಕ ಹೆಚ್ಚಿಸಿರುವುದು ರೈತ ವಿರೋಧಿ ನೀತಿ. ಈ ಶುಲ್ಕದ ಮಿತಿಯನ್ನು ಯಥಾಸ್ಥಿತಿಯಲ್ಲಿ ಪಡೆಯಬೇಕು. ಸಾಧ್ಯವಾದರೆ ಕನಿಷ್ಠ 500 ರೂ.ಗೆನಿಗದಿಗೊಳಿಸಬೇಕು. ಇಲ್ಲವಾದರೆ ರೈತರು ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ. -ಆನಂದ ಪಟೇಲ್‌, ಜಿಲ್ಲಾ ರೈತಸಂಘದ ಅಧ್ಯಕ್ಷ, ತುಮಕೂರು

ಮಳೆಯಿಲ್ಲದೆ ಕಂಗಾಲಾಗಿದ್ದೇವೆ. ತಾತನ ಭೂಮಿ ಭಾಗ ಪಡೆಯಲುನ್ಯಾಯಾಲಯದಲ್ಲಿದ್ದು, 10 ವರ್ಷದಿಂದನೋವುಂಡಿದ್ದೇವೆ. ಸಾಲಮನ್ನಾಸಂಪೂರ್ಣ ವಾಗಲು ಬಿಡಲಿಲ್ಲ. ಈಗಸರ್ವೆ ಕೆಲಸಕ್ಕೆ ಇಷ್ಟು ಹಣ ಹೆಚ್ಚಿಸಿದರೆ ಹೇಗೆ. ನಮ್ಮ ಹೆಸರಿಗೆ ಪಹಣಿ ಬಂದರೆ ಮರುಜನ್ಮ ಪಡೆದಂತಾಗುತ್ತದೆ. ಇಂತಹ ಸಮಯದಲ್ಲಿ ಈ ಶುಲ್ಕ ಏರಿಸಿರುವುದು ಸರಿಯಲ್ಲ. -ಶ್ರೀನಿವಾಸ್‌, ರೈತ

ಇದು ಸರ್ಕಾರದ ಆದೇಶವಾಗಿದ್ದು, ಫೆ.1ರಿಂದಲೇ ಜಾರಿಯಾಗಿದೆ.ಹಿಂದಿನ ದಿನಾಂಕದಲ್ಲಿ ನೋಂದಣಿಯಾದಅರ್ಜಿಯನ್ನು ಹಳೆ ದರದಲ್ಲೇ ಸರ್ವೆಮಾಡಿ ಕೊಡಲಿದ್ದು, ಫೆ.1ರಿಂದ ಬಂದಅರ್ಜಿಗಳಿಗೆ ನೂತನ ದರಅನ್ವಯವಾಗಲಿದೆ. -ಏಕನಾಥ್‌, ಎಡಿಎಲ್‌ಆರ್‌, ಮಧುಗಿರಿ

-ಮಧುಗಿರಿ ಸತೀಶ್‌

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.