ತೋಟಗಳಿಗೆ ನುಗ್ಗಿದ ಮಳೆ ನೀರು: ಕಂಗಾಲಾದ ರೈತರು
Team Udayavani, Jun 7, 2021, 9:19 PM IST
ತುಮಕೂರು: ಜಿಲ್ಲೆಯಲ್ಲಿ ಮೂರು ದಿನಸುರಿದ ಮಳೆಯಿಂದ ರೈತರ ಹೊಲ, ಗದ್ದೆ,ತೋಟಗಳಿಗೆ ಮಳೆ ನೀರು ನುಗ್ಗಿದ್ದು, ಎತ್ತಿನಹೊಳೆ ನೀರಾವರಿ ಯೋಜನೆಯಡಿಯಲ್ಲಿಮಾಡುತ್ತಿರು ಕಾಮಗಾರಿ ಯಿಂದಚೇಳೂರು ಹೋಬಳಿಯ ಮಧು ಎನ್ನುವರೈತರ ತೋಟಕ್ಕೆ ಮಳೆ ನೀರು ನುಗ್ಗಿ ಅಪಾರಹಾನಿ ಯಾಗಿದೆ.
ಈ ಪ್ರದೇಶದಲ್ಲಿ ಹೇಮಾವತಿ ನೀರುಹರಿದು ಹೋಗುವ ಚಾನಲ್ ಕಾಮಗಾರಿಮಾಡುತ್ತಿದ್ದು, ಅದರ ಮಣ್ಣನ್ನು ರಾಶಿ ರಾಶಿಹಾಕಿರುವ ಪರಿಣಾಮ ಮಳೆಯ ನೀರುಸರಾಗವಾಗಿ ಹರಿದು ಹೋಗಲು ಅವಕಾಶವಿಲ್ಲದೇ ರೈತರ ತೋಟಕ್ಕೆ ನುಗ್ಗಿ ತೋಟದಲ್ಲಿಬೆಳೆಸಿರುವ ತೆಂಗು, ಅಡಿಕೆ ಬೆಳೆಗಳಿಗೆ ನೀರುಹೆಚ್ಚಾಗಿರುವುದರಿಂದ ಕೊಳೆಯುವ ಹಂತಕ್ಕೆತಲುಪಿವೆ ಎಂದು ಮಳೆಯಿಂದ ನೊಂದರೈತ ಮಧು ತಿಳಿಸಿದ್ದಾರೆ.
ಸಾವಿರಾರು ರೂ. ಖರ್ಚು ಮಾಡಿ ಅಡಿಕೆಬೆಳೆ ಇಟ್ಟಿದ್ದು ಮಳೆ ನೀರಿನಿಂದ ಅಡಿಕೆ ಬೆಳೆಗೆತೊಂದರೆ ಉಂಟಾಗಿದೆ. ನೀರು ತೋಟದಲ್ಲಿನಿಂತರೆ ಅಡಿಕೆ ಬೆಳೆ ಕೊಳೆತು ಹೋಗುತ್ತದೆ.ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಗಮನಕ್ಕೆ ತಂದರೂ ಈವರೆಗೂ ಮಣ್ಣುಸರಿಸಿ ನೀರು ಚಾನಲ್ಗೆ ಹರಿದು ಹೋಗುವಂತೆ ಮಾಡಿಲ್ಲ ಎಂದು ರೈತ ಮಧುಆಕ್ರೋಶ ವ್ಯಕ್ತಪಡಿಸಿದ್ದಾರೆ.