ಆಟವಾಡಲು ತೆರಳಿದ್ದ ಮಕ್ಕಳು ಕಟ್ಟೆಯಲ್ಲಿ ಮುಳುಗಿ ಸಾವು: ತುಮಕೂರಿನಲ್ಲೊಂದು ಮನಕಲಕುವ ಘಟನೆ
Team Udayavani, Oct 27, 2019, 12:45 PM IST
ತುಮಕೂರು: ಆಟವಾಡಲು ಹೋಗಿ ಕಟ್ಟೆಯಲ್ಲಿ ಮುಳುಗಿ ಬಾಲಕರಿಬ್ಬರು ಸಾವನ್ನಪ್ಪಿರುವ ಘಟನೆ ತುಮಕೂರು ಜೆಲ್ಲೆಯ ಶಿರಾ ತಾಲೂಕಿನ ಪಟ್ಟನಾಯಕಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನ್ನು ಕಾಮಗೊಂಡನ ಹಳ್ಳಿ ಗ್ರಾಮದ ಸಲ್ಮಾನ್ (10) ಮತ್ತು ಮಾರುತಿ (11) ಎಂದು ಗುರುತಿಸಲಾಗಿದೆ. ಇಬ್ಬರು ಕೂಡ ಪಟ್ಟನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿ ಇರುವ ಕಟ್ಟೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಆಸ್ಪತ್ರೆಯ ಹಿಂಭಾಗದಲ್ಲಿರುವ ಕಟ್ಟೆಯ ಬಳಿ ಇಬ್ಬರು ಆಟವಾಡಲು ಹೋಗಿದ್ದಾರೆ. ಕಟ್ಟೆಯ ದಡದ ನೀರಿನಲ್ಲಿ ಆಟವಾಡುತ್ತಿದ್ದ ಇಬ್ಬರೂ ಕಾಲುಜಾರಿ ಕಟ್ಟೆಯ ಒಳಗೆ ಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ಆ ಸಮಯದಲ್ಲಿ ಕಟ್ಟೆಯ ಬಳಿ ಯಾರೂ ಇಲ್ಲದ ಕಾರಣ ಬಾಲಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಪಟ್ಟನಾಯಕಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.