ಕೊರಟಗೆರೆ: ಬಸ್ ಢಿಕ್ಕಿ ಹೊಡೆದು ವೃದ್ದೆ ಸಾವು
Team Udayavani, Nov 6, 2021, 7:25 PM IST
ಕೊರಟಗೆರೆ: ವೃದ್ಧೆಯೊಬ್ಬರು ಬಸ್ಸಿನಡಿ ಬಿದ್ದು ಸಾವನ್ನಪ್ಪಿದ ದಾರುಣಾ ಘಟನೆ ಚನ್ನರಾಯನದುರ್ಗ ಹೋಬಳಿಯ ತುಮಕೂರು ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಮೃತರನ್ನು ಕೆಂಪಕ್ಕ (61) ಎಂದು ಗುರುತಿಸಲಾಗಿದೆ.
ಕೆಂಪಕ್ಕನವರು ಪಡಿತರ ದಿನಸಿ ತರಲು ಸ್ವಗ್ರಾಮ ಥರಟಿಯಿಂದ ಜೆಟ್ಟಿಅಗ್ರಹಾರ ಗ್ರಾಮಕ್ಕೆ ಬಂದು ಸೊಸೈಟಿಯಲ್ಲಿ ರೇಷನ್ ತೆಗೆದುಕೊಂಡು ವಾಪಸ್ಸು ಥರಟಿ ಗ್ರಾಮಕ್ಕೆ ಹೋಗಲು ಜೆಟ್ಟಿಅಗ್ರಹಾರದ ಗ್ರಾಮದ ಬಸ್ಸು ನಿಲ್ದಾಣದ ಹತ್ತಿರ ಬಂದಾಗ ಅತೀ ವೇಗವಾಗಿ ಬಂದ ಖಾಸಗಿ ಬಸ್ಸು ಕೆ.ಎ20 ಡಿ.728 ನ ಬಸ್ಸಿನ ಚಾಲಕ ತುಮಕೂರಿನ ಕಡೆಯಿಂದ ಕೊರಟಗೆರೆ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ವೃದ್ದೆ ಕೆಂಪಕ್ಕರಿಗೆ ಢಿಕ್ಕಿ ಹೊಡೆದಿದೆ.
ಪರಿಣಾಮ ರಸ್ತೆಗೆ ಬಿದ್ದ ಕೆಂಪಕ್ಕನ ಮೇಲೆ ಬಸ್ಸಿನ ಬಲಭಾಗದ ಚಕ್ರ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಸ್ಸಿನ ಚಾಲಕನ ಮೇಲೆ ಪೋಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ಈ ಸಂಬಂಧ ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪಿಎಸ್ಐ ನಾಗರಾಜು.ಬಿ ರವರು ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.