ಒಂದು ವಾರದೊಳಗೆ ಇಬ್ಬರು ಶಿಕ್ಷಣ ತಜ್ಞರು ಕೋವಿಡ್ ಗೆ ಬಲಿ
Team Udayavani, May 8, 2021, 6:42 PM IST
ತುಮಕೂರು : ಕೋವಿಡ್ ಮಹಾಮಾರಿ ಜಿಲ್ಲೆಯಲ್ಲಿ ವ್ಯಾಪಿಸಿದ್ದು ಕಳೆದ ಒಂದು ವಾರದಲ್ಲಿ ಶಿಕ್ಷಣ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಜಿಲ್ಲೆಯ ಇಬ್ಬರು ಅಧಿಕಾರಿಗಳು ಕೋವಿಡ್ ಸೋಂಕಿಗೆ ಮೃತಪಟ್ಟಿದ್ದಾರೆ
ಕಳೆದ ಮೂರುದಿನಗಳ ಹಿಂದೆ ತುಮಕೂರು ಜಿಲ್ಲೆಯ ಜಿಲ್ಲೆಯವರಾಗಿ ಇಲ್ಲಿಯೂ ಸೇವೆ ಸಲ್ಲಿಸಿದ್ದ ಶಿಕ್ಷಣ ಇಲಾಖೆಯ ನಿವೃತ್ತ ಆಯುಕ್ತರಾಗಿದ್ಧ ಎಸ್.ಜಯಕುಮಾರ್ ಕೋವಿಡ್ ನಿಂದ ಮೃತಪಟ್ಟಿದ್ದರು.
ಶನಿವಾರ ತುಮಕೂರಿನ ಶಿಕ್ಷಣ ಇಲಾಖೆಯಲ್ಲಿ ನಿಕಟ ಪೂರ್ವ ಉಪನಿರ್ದೇಶಕರಾಗಿ ಈಗ ಚಿತ್ರದುರ್ಗದ ಸಿ.ಟಿ.ಇ ರೀಡರ್ ಆಗಿದ್ದ ಆರ್. ಕಾಮಾಕ್ಷಿ ಅವರು ಕೋವಿಡ್ ನಿಂದ ಮೃತಪಟ್ಟಿದ್ದಾರೆ.
ಈ ಇಬ್ಬರು ಅಧಿಕಾರಿಗಳು ಶಿಕ್ಷಣ ಇಲಾಖೆಯಲ್ಲಿ ಒಳ್ಳೆಯ ಹೆಸರು ಪಡೆದಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ಶಿಕ್ಷಕರು ಕಂಬನಿ ಮಿಡಿದಿದ್ದಾರೆ