ಪದವಿ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ
Team Udayavani, Mar 22, 2019, 7:35 AM IST
ಹುಳಿಯಾರು: ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಕಡ್ಡಾಯ ಮತದಾನ ಜಾಗೃತಿ ಜಾಥಾ ಗುರುವಾರ ಆಯೋಜಿಸಲಾಗಿತ್ತು.
ಕಾಲೇಜಿನ ಬಳಿ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಮತದಾನ ಮಾಡುವುದು ಪವಿತ್ರ ಕಾರ್ಯ.ಯಾವುದೇ ಆಮಿಷಗಳಿಗೆ ಒಳಗಾಗಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಬದಲಾವಣೆ ತರಲು ನೀವು ಚಲಾಯಿಸುವ ಮತವೇ ಮುಖ್ಯ ಎಂದು ಹೇಳಿದರು.
ಹುಳಿಯಾರು ಬಸ್ ನಿಲ್ದಾಣದ ಆವರಣದಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾನ ಮಾಡುವುದರಿಂದ ಆಗುವ ಅನುಕೂಲ ಹಾಗೂ ಮಾಡದಿದ್ದರೆ ಆಗುವ ಅನಾನುಕೂಲಗಳ ಬಗ್ಗೆ ಘೋಷಣೆ ಕೂಗಲಾಯಿತು.
ನಂತರ ಸಂತೆ ಬೀದಿ, ರಾಮಗೋಪಾಲ್ ಸರ್ಕಲ್, ಆಸ್ಪತ್ರೆ ರಸ್ತೆ ಉಪನ್ಯಾಸಕರೊಂದಿಗೆ ವಿದ್ಯಾರ್ಥಿಗಳು “ಮತದಾನ ಮಾಡದೇ ಇದ್ದಲ್ಲಿ ಮುಂದೆ ಅನುಭವಿಸುವೆವು ಕಷ್ಟ’, “ಪ್ರತಿಯೊಂದು ಮತ ಪ್ರಜಾಪ್ರಭುತ್ವದ ಹಿತ’ ಎಂದು ಘೋಷಣೆ ಕೂಗುತ್ತಾ ಜಾಥಾ ನಡೆಸಿದರು.
ಚುನಾವಣಾ ಸಾಕ್ಷರತಾ ಕ್ಲಬ್ ಸಂಚಾಲಕರಾದ ಡಾ.ಲೋಕೇಶ್ ನಾಯ್ಕ ಉಪನ್ಯಾಸಕರಾದ ಪೊ›.ಎಂ.ಬಿ.ಮೋಹನ್ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಆರ್.ಶಿವಯ್ಯ ಮತ್ತಿತರರಿದ್ದರು.
ಈ ಚುನಾವಣೆಯಲ್ಲಿ ಭ್ರಷ್ಟಾಚಾರ ಯುವ ಜನತೆ ಕಿತ್ತೂಗೆಯುವ ನಿಟ್ಟಿನಲ್ಲಿ ನನ್ನ ಮತ ಮಾರಾಟಕ್ಕಿಲ್ಲ ಎಂದು ರಾಜಕಾರಣಿಗಳಿಗೆ ಖಡಕ್ಕಾಗಿ ಹೇಳಬೇಕಿದೆ. ಹಣ ಕೊಡಲು ಬಂದವರಿಗೆ ಗೆದ್ದ ಮೇಲೆ ನಮ್ಮ ಊರಿಗೆ ಒಂದಿಷ್ಟು ಕೆಲಸ ಮಾಡಿ ಎಂದು ಹೇಳಬೇಕು.
-ಬಿ.ಜಿ.ನಾಗರಾಜು, ಬಸ್ಸ್ಟಾಂಡ್ ಹೋಟೆಲ್, ಹುಳಿಯಾರು
ಬಜೆಟ್ನಲ್ಲಿ ಘೋಷಿಸಿದ ಅದೆಷ್ಟೋ ಯೋಜನೆಗಳು ಜನಸಾಮಾನ್ಯರ ಕೈಗೆಟುಕದಿರುವುದು ನನ್ನಂತ ಹೊಸ ಮತದಾರರಿಗೆ ಯಾವ ಪುರುಷಾರ್ಥಕ್ಕೆ ಮತ ಹಾಕಬೇಕಿದೆ ಎಂದು ಪ್ರಶ್ನೆ ಮೂಡುತ್ತಿದೆ. ಆದರೂ ಮುಂದಾದರೂ ಒಳ್ಳೆಯದಾಗಬಹುದೆಂದು ಭರವಸೆಯಿಂದ ಮತ ಹಾಕುತ್ತಿದ್ದೇನೆ.
-ಎಚ್.ಬಿ.ಬಾಲಾಜಿ, ಪದವಿ ವಿದ್ಯಾರ್ಥಿ, ಹುಳಿಯಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ