ಯೋಧರಿಗೆ ಗೌರವ ಸಲ್ಲಿಕೆ ಎಲ್ಲರ ಕರ್ತವ್ಯ

ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಭಾಜನರಾದ ಯೋಧ ಎಂ.ಜಯರಾಮ್‌ ನಾಯಕ್‌ಗೆ ಸನ್ಮಾನ

Team Udayavani, Oct 22, 2021, 4:06 PM IST

Warrior M Jayaram Nayak honored with Presidential Medal of Honor

ತಿಪಟೂರು: ದೇಶದಲ್ಲಿ ಶಾಂತಿ ನೆಲೆಸಿರುವುದರ ಜೊತೆಗೆ ನಾವೆಲ್ಲರೂ ನೆಮ್ಮದಿ ಮತ್ತು ಶಾಂತಿಯುತ ಜೀವನ ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ದೇಶದ ಗಡಿಯಲ್ಲಿ ಚಳಿ, ಬಿಸಿಲು, ಮಳೆ ಯಲ್ಲಿ ಜೀವದ ಹಂಗು ತೊರೆದು ಹೋರಾಡುವ ಯೋಧರು.

ಅವರ ಮಹಾನ್‌ ಕೆಲಸಕ್ಕೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ ವಾಗಿದೆ ಎಂದು ಜನಸ್ಪಂದನ ಟ್ರಸ್ಟ್‌ ಅಧ್ಯಕ್ಷ ಸಿ.ಬಿ. ಶಶಿಧರ್‌ ತಿಳಿಸಿದರು. ನಗರದ ಜನಸ್ಪಂದನ ಕಚೇರಿಯಲ್ಲಿ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಪಾತ್ರರಾಗಿರುವ ತಾಲೂಕಿನ ಕೊಬ್ಬರಿ ದೊಡ್ಡಯ್ಯನಪಾಳ್ಯದ ಯೋಧ ಹವಾ ಲ್ದಾರ್‌ ಜಯರಾಮ್‌ ನಾಯಕ್‌ ಅವರಿಗೆ ಸನ್ಮಾನಿಸಿ ಮಾತನಾಡಿ, ಯೋಧ ಜಯರಾಮ್‌ ನಾಯಕ್‌ 2020ರ ಜ.20ರಂದು ಕುಲ್ಗಂಮ್‌ ಜಿಲ್ಲೆಯ ಲಕ್ಕಡಿಪುರ್‌ ಗ್ರಾಮದಲ್ಲಿ 18ನೇ ಬೆಟಾಲಿಯನ್‌ನ 2ನೇ ಕಮಾಂಡಿಗ್‌ ಆಫೀಸರ್‌ ಮಾಯಾಂಕ್‌ ತಿವಾರಿಯ ಸಹಚರನಾಗಿ ಉಗ್ರರ ಮೇಲೆ ಗುಂಡಿನ ಮಳೆಗರೆದು ಉಗ್ರರನ್ನು ಸೆದೆಬಡೆದು ಅವರು ತೋರಿಸಿದ ಸಾಹಸಕ್ಕೆ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಭಾಜನರಾಗಿದ್ದು.

ಜ.26ರಂದು ನಡೆಯುವ ಗಣ ರಾಜ್ಯೋತ್ಸವದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಅದಲ್ಲದೆ, 2-3 ಬಾರಿ ಅವರು ಉಗ್ರರ ಸದೆಬಡಿ ಯುವ ಕೆಲಸದಲ್ಲಿ ಕೈಜೋಡಿಸಿದ್ದು ಸಾಹಸ ಮೆರೆದಿ ರು ವುದಕ್ಕೆ ಸೈನ್ಯದ ಅಧಿಕಾರಿಗಳು ಪ್ರಶಂಸಿದ್ದಾರೆ. ಅವರಲ್ಲಿರುವ ದೇಶದ ಬಗೆಗಿನ ತುಡಿತ ಯುವಕರಿಗೆ ಆದರ್ಶವಾಗಿದೆ ಎಂದರು.

ಇದನ್ನೂ ಓದಿ:- ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಮೇಲೆ ದಾಳಿ: ಬಿಜೆಪಿ ಕೈವಾಡದ ಆರೋಪ

 ಸೈನಿಕರ ಸಾವಿನ ಬಗ್ಗೆ ತಿಳಿಯಲ್ಲ: ಸನ್ಮಾನ ಸ್ವೀಕರಿಸಿದ ಯೋಧ ಹವಾಲ್ದಾರ್‌ ಜಯರಾಮ್‌ನಾಯಕ್‌ ಮಾತನಾಡಿ, ಬೆಟಾಲಿಯನ್‌ನಲ್ಲಿ ಉಗ್ರರ ಜೊತೆ ಹೋರಾಡುವಾಗ ನಮ್ಮ 10 ಸಹಚರರನ್ನು ಕಳೆದುಕೊಂಡೆವು. ಬೆಳಗ್ಗೆ ತಿಂಡಿ ತಿಂದು ಜೊತೆ ಜೊತೆಯಲ್ಲಿಯೇ ಹೋದ ನಾವುಗಳು ನಮ್ಮ ಸಹಚರರನ್ನು ಉಗ್ರರು ಬಲಿತೆಗೆದುಕೊಂಡರು. ಸೈನಿಕರಿಗೆ ಸಾವು ಹೇಗೆ, ಎಲ್ಲಿ ಸಂಭವಿಸುತ್ತದೆ ಎಂದು ಇಲ್ಲಿ ಯಾರಿಗೂ ತಿಳಿದಿರುವುದಿಲ್ಲ ಎಂದು ತಮ್ಮ ಕರ್ತವ್ಯದ ಬಗ್ಗೆ ತಿಳಿಸಿದರು.

ತಂದೆಯ ಕೆಲಸ ನನಗೆ ಹೆಮ್ಮೆ: ಜಯರಾಮ್‌ ನಾಯಕ್‌ ಪುತ್ರಿ ಧನುಷ್‌ ಮಾತನಾಡಿ, ನನ್ನ ತಂದೆಯ ಕೆಲಸ ನನಗೆ ಹೆಮ್ಮೆ ತಂದಿದೆ. ಅವರು ಪದಕ ಪಡೆದಿರುವ ಸಂತೋಷಕ್ಕೆ ಪಾರವೇ ಇಲ್ಲ. ಆದರೆ, ಅವರು ಇಲ್ಲಿಗೆ ಬಂದಾಗ ಖುಷಿ ಇರುತ್ತದೆ. ಮತ್ತೆ ಕರ್ತವ್ಯಕ್ಕೆ ಹೋದಾಗ ನೋವು, ಸಂತೋಷ ಎರಡೂ ಆಗುತ್ತಿದ್ದು, ದೇವರು ಯಾವಾಗಲೂ ಅವರ ಜೀವ ರಕ್ಷಿಸಲಿ ಎಂದರು.

 ಕಾಲೇಜಿಗೆ ಹೆಮ್ಮೆಯ ಸಂಗತಿ: ನಿವೃತ್ತ ಶಿಕ್ಷಕ ಷಣ್ಮು ಖಪ್ಪ ಮಾತನಾಡಿ, ಯೋಧ ಜಯರಾಮ್‌ನಾಯಕ್‌ ನಮ್ಮ ಶಿಷ್ಯನಾಗಿರುವುದು ನಾನು ಕೆಲಸ ಮಾಡಿದ ನಗರದ ಬಾಲಕರ ಪದವಿಪೂರ್ವ ಕಾಲೇಜಿಗೆ ಹಾಗೂ ನನಗೆ ಹೆಮ್ಮೆಯ ಸಂಗತಿ. ಯೋಧರಿಲ್ಲದೆ ನಾವಿಲ್ಲ, ಅವರ ಸೇವೆ ನಮಗೆ ನೇರವಾಗಿ ಕಾಣುವುದಿಲ್ಲ.

ಅವರಿಗೆ ನಾವು ಎಷ್ಟು ಕೃತಜ್ಞರಾಗಿದ್ದರೂ ಕಡಿಮೆಯೇ ಎಂದು ಯೋಧರ ಸೇವೆಯ ಬಗ್ಗೆ ಸ್ಮರಿಸಿದರು.ಹವಾಲ್ದಾರ್‌ ಜಯ ರಾಮ್‌ನಾಯಕ್‌ ಸಹಪಾಠಿಗಳಾದ ರೇಣುಕಯ್ಯ ಮತ್ತಿತರರು ಮಾತನಾಡಿದರು. ಯೋಧ ಜಯ ರಾಮ್‌ ನಾಯಕ್‌ ತಂದೆ ಮೂರ್ತಿನಾಯಕ್‌, ಸಹೋದರ ಸದಾಶಿವಯ್ಯ, ಸಹೋದರಿ ರುಕ್ಮಿಣಿ, ನಿವೃತ್ತ ಸೈನಿಕ ಪರಮಶಿವಯ್ಯ, ಮುಖಂಡರಾದ ನಾಗತೀಹಳ್ಳಿ ಕೃಷ್ಣಮೂರ್ತಿ, ಗಂಗಾನಾಯ್ಕ, ಬಾಬು ನಾಯಕ್‌, ಯುವ ಕಾಂಗ್ರೆಸ್‌ ಮುಖಂಡ ಶರತ್‌ ಕಲ್ಲೇಗೌಡನ ಪಾಳ್ಯ, ಗೌತಮ್‌, ಹರೀಶ್‌, ಖಲೀಲ್‌ ಇದ್ದರು.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.