ರೋಗ ಮುಕ್ತ ಜೀವನಕ್ಕೆ ಯೋಗ ಸಹಕಾರಿ
Team Udayavani, Jun 26, 2021, 8:22 PM IST
ತಿಪಟೂರು: ರೋಗ ಮುಕ್ತ, ಚಿಂತೆಮುಕ್ತ ಜೀವನಕ್ಕೆ ಯೋಗ ಸಹಕಾರಿಯಾಗಿದ್ದು, ಪ್ರತಿಯೊಬ್ಬರೂ ಯೋಗ ಮಾಡುವ ಮೂಲಕ ಬದುಕಿನಲ್ಲಿ ಶಾಂತಿ,ನೆಮ್ಮದಿ ಪಡೆದುಕೊಳ್ಳಬಹುದು ಎಂದು ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಜಿ.ಡಿ. ಗುರುಮೂರ್ತಿ ತಿಳಿಸಿದರು.
ನಗರದ ಕಲ್ಪತರು ತಾಂತ್ರಿಕ ಮಹಾ ವಿದ್ಯಾಲಯಲ್ಲಿ ಮೂಲಭೂತ ವಿಜ್ಞಾನ, ಎನ್ಎಸ್ಎಸ್,ದೈಹಿಕ ಶಿಕ್ಷಣ ವಿಭಾಗದಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿಮಾತನಾಡಿದ ಅವರು, ಯೋಗ ನಮ್ಮೆಲ್ಲರ ಜೀವನ¨ ಅವಿಭಾಜ್ಯ ಅಂಗವಾಗಿದ್ದು, ಯೋಗ ವು ಆರೋಗ್ಯ ಕಾಪಾಡುವ ಜೊತೆಗೆ ಶಿಸ್ತು ಬದ್ದ ಜೀವನಕ್ಕೆ ಮುನ್ನಡಿ ಬರೆಯಲಿದೆ.