1.35 ಕೋ.ರೂ. ವೆಚ್ಚದಲ್ಲಿ ಭುಜಂಗ ಪಾರ್ಕ್ ಅಭಿವೃದ್ಧಿ
ಸಾರ್ವಜನಿಕರಿಗಾಗಿ ಹೊರಾಂಗಣ ಜಿಮ್, ಚಿಟ್ಟೆ ಪಾರ್ಕ್, ನೀರಿನ ಕೊಳ ನಿರ್ಮಾಣ
Team Udayavani, Aug 29, 2021, 6:53 AM IST
ಉಡುಪಿ: ಪ್ರವಾಸೋದ್ಯಮ ಇಲಾಖೆ ಹಾಗೂ ನಗರಸಭೆ ಜಂಟಿ ಸಹಯೋಗದಲ್ಲಿ 1.35 ಕೋ.ರೂ. ವೆಚ್ಚದಲ್ಲಿ ಅಜ್ಜರಕಾಡು ಭುಜಂಗ ಪಾರ್ಕ್ ಅಭಿವೃದ್ಧಿ ಕಾಮಗಾರಿ ಮುಂದಿನ ಎರಡು ತಿಂಗಳೊಳಗಾಗಿ ಪೂರ್ಣಗೊಳ್ಳಲಿದೆ.
ನಗರದ ಹೃದಯ ಭಾಗದಲ್ಲಿರುವ ಅಜ್ಜರಕಾಡು ಚಿಣ್ಣರ ಆಟದ ಉದ್ಯಾನವನಕ್ಕೆ ಹೈಟೆಕ್ ಸ್ಪರ್ಶ ನೀಡಲಾಗಿದ್ದು ಇದೀಗ ಇಡೀ ಭುಜಂಗ ಪಾರ್ಕ್ ಅನ್ನು ಆಧುನೀಕರಿಸಲು ಸಿದ್ಧತೆ ನಡೆಯುತ್ತಿದೆ. ಪ್ರವಾಸೋದ್ಯಮ ಇಲಾಖೆಯಿಂದ 1 ಕೋ.ರೂ. ಹಾಗೂ ನಗರ ಸಭೆ ಯಿಂದ 35 ಲ.ರೂ. ಅನುದಾನ ಮಂಜೂರಾಗಿದೆ. ಒಟ್ಟು 1.35 ಕೋ.ರೂ. ವೆಚ್ಚದಲ್ಲಿ ಪಾರ್ಕ್ ಅಭಿವೃದ್ಧಿಯಾಗಲಿದೆ.
ಹೊರಾಂಗಣ ಜಿಮ್
ಉಡುಪಿ ನಗರದಲ್ಲಿ ಹೊರಾಂ ಗಣ ಜಿಮ್ ಪ್ರಾರಂಭವಾಗಲಿದೆ. ಇದೀಗ ಭುಜಂಗ ಪಾರ್ಕ್ನಲ್ಲಿ ಹಿರಿಯರಿಗೆ, ಸಾರ್ವಜನಿಕರಿಗೆ ವ್ಯಾಯಾಮ ಹಾಗೂ ದೈಹಿಕ ಕಸರತ್ತು ಮಾಡಲು ಅನುಕೂಲವಾಗುವಂತೆ ವ್ಯವಸ್ಥಿತ ಹೊರಾಂಗಣ ಜಿಮ್ ನಿರ್ಮಾಣ ಕಾಮಗಾರಿ ಪ್ರಾರಂಭ ವಾಗಲಿದೆ. ಜತೆಗೆ ಮೂಲ ಸೌಕರ್ಯ ಒದಗಿಸಲಾಗುತ್ತದೆ.
ಚಿಟ್ಟೆ ಪಾರ್ಕ್- ಲೈಟಿಂಗ್
ಭುಜಂಗ ಪಾರ್ಕ್ನಲ್ಲಿ ಚಿಟ್ಟೆ ಪಾರ್ಕ್ ನಿರ್ಮಾಣ ವಾಗಲಿದೆ. ಈಗಾಗಲೇ ಚಿಟ್ಟೆ ತಜ್ಞರ ನೆರವಿನೊಂದಿಗೆ ಚಿಟ್ಟೆಗಳನ್ನು ಆಕರ್ಷಿಸುವ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಜತೆಗೆ ಚಿಟ್ಟೆಗಳ ಬಣ್ಣ ಬಣ್ಣದ ಕಲಾಕೃತಿಗಳ ಜತೆಗೆ ನೈಜ ಚಿಟ್ಟೆಗಳನ್ನು ಆಕರ್ಷಿಸಲು ಅಗತ್ಯವಿರುವ ವಾತಾವರಣ ಸೃಷ್ಟಿಯಾಗಲಿದೆ. ಜತೆಗೆ ನೀರಿನ ಕೊಳದಲ್ಲಿ ಬಣ್ಣ ಬಣ್ಣದ ದೀಪಗಳನ್ನು ಹಾಕಲಾಗುತ್ತದೆ.
ಚಿಣ್ಣರ ಜಿಮ್!
ವರ್ಷದ ಹಿಂದೆ ಚಿಣ್ಣರ ಉದ್ಯಾನವನದಲ್ಲಿ ಮಕ್ಕಳ ಆಟಕ್ಕೆ ಹಾಗೂ ದೈಹಿಕ ವ್ಯಾಯಾಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಿದ್ದು, ಅಮೃತ್ ಯೋಜನೆ ಯಡಿ 15 ಲ.ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದೀಗ ಪಾರ್ಕ್ಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.
ಗಾಂಧೀಜಿ ಬಂದ ಪಾರ್ಕ್
ಭುಜಂಗ ಪಾರ್ಕ್ಗೆ ವಿಶೇಷವಾದ ಹೆಸರಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಾ ಗಾಂಧೀಜಿ ಈ ಪಾರ್ಕ್ಗೆ ಬಂದಿದ್ದರು. ಅವರು ಕುಳಿತುಕೊಂಡ ಬಂಡೆಕಲ್ಲೊಂದು ಇಂದಿಗೂ ಇದ್ದು, ಅದನ್ನು ಗಾಂಧಿಕಟ್ಟೆ ಎಂದು ಕರೆಯಲಾಗುತ್ತಿದೆ.
ಜಿಮ್ ನಲ್ಲಿ ಏನೇನಿರಲಿದೆ?
ಹೊರಾಂಗಣ ಜಿಮ್ ನಿರ್ಮಾಣಕ್ಕೆ ನಗರಸಭೆಯಿಂದ 35 ಲ.ರೂ. ವೆಚ್ಚದ ಅನುದಾನ ಬಳಕೆ ಮಾಡಲಾಗುತ್ತಿದೆ. ಲೆಗ್ ಪ್ರಸ್, ಸೈಕ್ಲಿಂಗ್, ಶೋಲ್ಡರ್ ಪ್ರಸ್, ಸ್ವೆಪ್ ಟ್ರೈನರ್, ಚೆಸ್ಟ್ ಪ್ರಸ್ ಸೇರಿದಂತೆ 10ಕ್ಕೂ ಅಧಿಕ ಪರಿಕರ ಆಳವಡಿಸಲಾಗುತ್ತದೆ. ವಾಕಿಂಗ್ ಹಾಗೂ ಸಮಯ ಕಳೆಯಲು ಪಾರ್ಕ್ಗೆ ಬರುವವರಿಗೆ ದೈಹಿಕ ಕಸರತ್ತು ಮಾಡಲು ಅನುಕೂಲವಾಗಲಿದೆ.
2 ತಿಂಗಳಲ್ಲಿ ಕಾಮಗಾರಿ ಪೂರ್ಣ
ನಗರದ ಮಧ್ಯ ಭಾಗದಲ್ಲಿರುವ ಭುಜಂಗ ಪಾರ್ಕ್ನಲ್ಲಿ ಚಿಟ್ಟೆ ಪಾರ್ಕ್ ಹಾಗೂ ವಾಟರ್ ಪೌಂಡ್ ನಿರ್ಮಿಸಲಾಗುತ್ತದೆ. ಇದಕ್ಕೆ ಅಗತ್ಯವಿರುವ ಅನುದಾನ ಮಂಜೂರು ಮಾಡಿಸಲಾಗಿದೆ. ಎರಡು ತಿಂಗಳುಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರ ಬಳಕೆಗೆ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ.
-ಕೆ. ರಘುಪತಿ ಭಟ್, ಶಾಸಕರು, ಉಡುಪಿ
ನಿರ್ವಹಣೆಗೂ ಗಮನಹರಿಸಿ
ನಗರದ ಹೃದಯ ಭಾಗದಲ್ಲಿರುವ ಅಜ್ಜರಕಾಡು ಪಾರ್ಕ್ ಅಭಿವೃದ್ಧಿಗೊಳ್ಳುತ್ತಿರುವುದು ಸಂತಸ ತಂದಿದೆ. ಶೀಘ್ರ ಕಾಮಗಾರಿ ಮುಗಿಸಿ, ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಕಲ್ಪಿಸ ಬೇಕು. ಜತೆಗೆ ಕಾಲ ಕಾಲಕ್ಕೆ ನಿರ್ವಹಣೆ ಕಡೆ ಗಮನ ಹರಿಸಬೇಕು.
-ವಿನಾಯಕ , ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!