ಬಜಗೋಳಿ ಪೇಟೆಗೆ ಬೇಕಿದೆ 108 ಆ್ಯಂಬುಲೆನ್ಸ್ ಸೌಲಭ್ಯ
ಇಲ್ಲಿರುವ ಆಸ್ಪತ್ರೆ ವೈದ್ಯಾಧಿಕಾರಿಗೆ ಎರಡು ಕಡೆ ಕರ್ತವ್ಯ ನಿರ್ವಹಿಸುವ ಅನಿವಾರ್ಯತೆ
Team Udayavani, Sep 8, 2019, 5:30 AM IST
ಪಳ್ಳಿ (ಬಜಗೋಳಿ): ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಚೆನ್ನಾಗಿದ್ದರೂ ಸಿಬಂದಿ ಕೊರತೆಯಿಂದ ಬಳಲುತ್ತಿದೆ.
ಬಜಗೋಳಿ, ನಲ್ಲೂರು, ಮುಡಾರು, ನೆಲ್ಲಿಕಾರು, ಮಿಯ್ಯರು, ಮಾಳ ಭಾಗದ ಕಡಾರಿ ಆಸುಪಾಸಿನ ಗ್ರಾಮಸ್ಥರು ಬಹುತೇಕವಾಗಿ ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ.
ಎರಡು ಕೇಂದ್ರಗಳಲ್ಲಿ ಕರ್ತವ್ಯ
ಬಜಗೋಳಿ ವೈದ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸು ತ್ತಿದ್ದು, ಜತೆಗೆ ಈದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಭಾರವಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಎರಡು ಕಡೆಗಳಲ್ಲಿ ಕರ್ತವ್ಯ ನಿರ್ವಹಿಸುವ ಅನಿವಾರ್ಯತೆಯಿಂದ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ.
ಅತಿ ಮುಖ್ಯವಾದ ಪ್ರಥಮ ದರ್ಜೆ ಸಹಾಯಕ ಹುದ್ದೆಯು 2014ರಿಂದ ತೆರವಾಗಿದ್ದು ಆನ್ಲೈನ್ ಅಪ್ಡೇಟ್ ಹಾಗೂ ಇನ್ನಿತರ ಕಾರ್ಯ ನಿರ್ವಹಿಸಲು ತೊಂದರೆಯುಂಟಾಗಿದೆ.
ಉಪಕೇಂದ್ರ
ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರವು 3 ಉಪಕೇಂದ್ರಗಳನ್ನು ಹೊಂದಿದ್ದು ಮುಡಾರು, ನಲ್ಲೂರು ಬಿರಾಲುಪೇಟೆ ಹಾಗೂ ಪುಚ್ಚಬೆಟ್ಟುವಿನಲ್ಲಿ ಹೊಂದಿದೆ. ಆದರೆ ಪುಚ್ಚಬೆಟ್ಟುವಿನಲ್ಲಿ ಉಪಕೇಂದ್ರವು ಕಟ್ಟಡವನ್ನು ಹೊಂದಿಲ್ಲ.
ಆ್ಯಂಬುಲೆನ್ಸ್ ಸೌಲಭ್ಯ
ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆ್ಯಂಬುಲೆನ್ಸ್ ವಾಹನವಿದ್ದು ಚಾಲಕ ಮಂಜೂರಾತಿಯಾಗಿಲ್ಲ. ಇದೀಗ ನಿಯೋಜಿತ ಸಿಬಂದಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರವು ಬಜಗೋಳಿ ಪೇಟೆಯ ಕೇಂದ್ರ ಭಾಗದಲ್ಲಿದ್ದು ತುರ್ತು ಸಂದರ್ಭಗಳಲ್ಲಿ ಮೀಟಿಂಗ್ ಹಾಲ್ ಅವಶ್ಯಕತೆ ಇದೆ.
ಆ್ಯಂಬುಲೆನ್ಸ್ ಆಗತ್ಯ
ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರವು ಬಜಗೋಳಿ, ನಲ್ಲೂರು, ಮುಡಾರು, ನೆಲ್ಲಿಕಾರು, ಮಾಳ ಭಾಗದ ಕಡಾರಿ ಹಾಗೂ ಇನ್ನಿತರ ಆಸುಪಾಸಿನ ಗ್ರಾಮಸ್ಥರು ತುರ್ತು ಸಂದರ್ಭಗಳಲ್ಲಿ ಕಾರ್ಕಳ ಅಥವಾ ಅಜೆಕಾರಿನ ಆ್ಯಂಬುಲೆನ್ಸ್ಗೆ ಕಾಯಬೇಕಾಗಿದೆ. ಹಾಗಾಗಿ ತುರ್ತು ಸಂದರ್ಭಗಳಲ್ಲಿ ವಿಳಂಬವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
– ಸಂದೇಶ್ ಕುಮಾರ್ ಪಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?