ಜಿಲ್ಲೆಯಲ್ಲಿ ಪರವಾನಿಗೆ ಪಡೆದ 143 ಗಣಿ ಗುತ್ತಿಗೆ; ಕಟ್ಟಡ ಕಲ್ಲು ಕ್ವಾರಿಗಳೇ ಹೆಚ್ಚು
ಗುತ್ತಿಗೆ ಪಡೆಯುವವರು ರಾಜಕೀಯ ಪ್ರಭಾವ ಬಳಸಿ ತಮ್ಮದಾಗಿಸಿಕೊಳ್ಳುತ್ತಿದ್ದಾರೆ
Team Udayavani, Dec 31, 2022, 12:30 PM IST
ಉಡುಪಿ: ಜಿಲ್ಲೆಯಲ್ಲಿ ಕಟ್ಟಡ ಕಲ್ಲು, ಜೇಡಿ ಮಣ್ಣು, ಕೆಂಪುಕಲ್ಲು (ಮುರಕಲ್ಲು) ಸಾಮಾನ್ಯ ಮರಳು, ಸಿಲಿಕಾ ಮರಳು ಹಾಗೂ ಆಲಂಕಾರಿಕ ಶಿಲೆ ಗಣಿಗಾರಿಕೆಯಲ್ಲಿ 143 ಗುತ್ತಿಗೆಗಳು ಮಾತ್ರ ಪರವಾನಿಗೆ ಪಡೆದು ಕಾರ್ಯನಿರ್ವಹಿಸುತ್ತಿವೆ.
2020-21ರಲ್ಲಿ ಗುತ್ತಿಗೆ ಪಡೆದ ಕಲ್ಲುಗಣಿಗಳಲ್ಲಿ 94 ಕಾರ್ಯನಿರ್ವಹಿಸುತ್ತಿದ್ದರೆ, 30 ನಿಷ್ಕ್ರಿಯಗೊಂಡಿದೆ. 2021-22ರಲ್ಲಿ 105 ಕಲ್ಲುಗಣಿ ಕಾರ್ಯನಿರ್ವಹಿಸುತ್ತಿದ್ದು, 25 ನಿಷ್ಕ್ರಿಯ ಗೊಂಡಿವೆ. 2022-23ರಲ್ಲಿ 109 ಕಲ್ಲುಗಣಿ ಕಾರ್ಯನಿರ್ವಹಿಸುತ್ತಿದ್ದು, 24 ನಿಷ್ಕ್ರಿಯಗೊಂಡಿವೆ. ಹಾಗೆಯೇ 2020-21ರಲ್ಲಿ 34 ಕ್ರಷರ್, 2021-22 ಹಾಗೂ 2022-23ರಲ್ಲಿ ತಲಾ 40 ಕ್ರಷರ್ ಕಾರ್ಯನಿರ್ವಹಿಸುತ್ತಿದ್ದು, ಈ ಮೂರು ವರ್ಷಗಳಲ್ಲಿ ತಲಾ ಒಂದೊಂದು ನಿಷ್ಕ್ರಿಯಗೊಂಡಿವೆ.
ರಾಜ್ಯ ಸರಕಾರದ ನಿಯಮದಂತೆ ಸರಕಾರಿ ಜಮೀನು ಗಳಲ್ಲಿ ಲಭ್ಯವಿರುವ ಉಪಖನಿಜ ನಿಕ್ಷೇಪಗಳನ್ನು ಹರಾಜು ಮೂಲಕ ಮಂಜೂರು ಮಾಡಬೇಕಾಗುತ್ತದೆ. ಆದರೆ, ಕೆಲವೊಂದು ಕಡೆಗಳಲ್ಲಿ ಗುತ್ತಿಗೆ ಪಡೆಯುವವರು ರಾಜಕೀಯ ಪ್ರಭಾವ ಬಳಸಿ ತಮ್ಮದಾಗಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಇದೆ.
ಪಟ್ಟಾ ಜಮೀನುಗಳಲ್ಲಿ ಲಭ್ಯವಿರುವ ಖನಿಜವನ್ನು ತೆಗೆಯಲು ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು 1994ರ ನಿಯಮ 32ರಂತೆ ಪಟ್ಟಾದಾರರಿಗೆ ಅಥವಾ ಪಟ್ಟಾದಾರರು ಒಪ್ಪಿಗೆ ನೀಡುವ ವ್ಯಕ್ತಿಗೆ ಕಂದಾಯ ಮತ್ತು ಅರಣ್ಯ ಇಲಾಖೆಯ ನಿರಾಕ್ಷೇಪಣ ಪತ್ರ, ಭೂ ಪರಿವರ್ತನೆ ಆದೇಶ, ಪರಿಸರ ಅನುಮತಿ ಪತ್ರ ನೀಡಿದ ಅನಂತರದಲ್ಲಿ ಕಲ್ಲು ಗಣಿಗಾರಿಕೆಗೆ ಪರವಾನಿಗೆ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕರಾವಳಿ ಭಾಗದಲ್ಲಿ ಕೆಂಪು ಕಲ್ಲುಗಣಿಕಾರಿಗೆ (ಬಹು ತೇಕರು ಮನೆ ಕಟ್ಟಲು ಬಳಸುವ ಕಲ್ಲು) ಹೆಚ್ಚಿರುವು ದರಿಂದ ಇದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿ ಸಿದ್ಧಪಡಿ ಸುವ ಅಗತ್ಯವಿದೆ ಎಂಬ ಕೂಗು ಕೇಳಿಬಂದಿತ್ತು. ಆದರೆ, ಸರಕಾರ ಪ್ರತ್ಯೇಕ ಮಾರ್ಗಸೂಚಿ ಹೊರಡಿಸುವ ಪ್ರಸ್ತಾವನೆ ಹೊಂದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ.
ಕಟ್ಟಡ ಕಲ್ಲು ಕ್ವಾರಿಗಳೇ ಹೆಚ್ಚು
ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಟ್ಟಡಕ್ಕೆ ಬಳಸುವ ಕಟ್ಟಡ ಕಲ್ಲು ಕ್ವಾರಿ ಹೆಚ್ಚಿವೆ. ಗುತ್ತಿಗೆ ಪರವಾನಿಗೆ ಪಡೆದಿರುವ 124 ಕಟ್ಟಡ ಕಲ್ಲು ಕ್ವಾರಿಗಳಿವೆ. ಪರವಾನಿಗೆ ಪಡೆಯದೆ ಇರುವ ಕ್ರಷರ್ ಹಾಗೂ ಕಲ್ಲು ಕ್ವಾರಿ ಗಣಿಗಾರಿಕೆಯ ಸಂಖ್ಯೆ ಇದಕ್ಕಿಂತ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಆಲಂಕಾರಿಕ ಶಿಲೆಗಳ ಗಣಿಗಾರಿಕೆ 7 ಕಡೆಗಳಲ್ಲಿ ನಡೆದರೆ, ಸಿಲಿಕಾ ಮರಳುಗಾರಿಕೆ 6, ಸಾಮಾನ್ಯ ಮರಳುಗಾರಿಗೆ 3, ಕೆಂಪುಕಲ್ಲು ಕ್ವಾರಿ 2 ಹಾಗೂ ಜೇಡಿ ಮಣ್ಣಿನ ಕ್ವಾರಿ 1 ಪರವಾನಿಗೆ ಪಡೆದು ಕಾರ್ಯನಿರ್ವಹಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ