ಕಲಾವಿದ ಈಗ ಯಶಸ್ವಿ ಕೃಷಿಕ
Team Udayavani, Jun 24, 2018, 6:00 AM IST
ಬೆಳ್ಮಣ್: ಈಗಿನ ಯುವಕರು ಕೃಷಿಯಿಂದ ವಿಮುಖ ವಾಗುತ್ತಿರುವ ದಿನಗಳಲ್ಲಿ ರಂಗ ಕಲಾವಿದರೂ ಆಗಿರುವರೊಬ್ಬರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಹಡಿಲು ಬಿದ್ದ ಸುಮಾರು 15 ಎಕರೆ ಹಸಿರು ಮಾಡಲು ಪಣ ತೊಟ್ಟಿದ್ದಾರೆ.
ಕೃಷಿ ಕುಟುಂಬ
ಕಿನ್ನಿಗೋಳಿ ವಿಜಯಾ ಕಲಾವಿದರ ನಾಟಕ ತಂಡದ ಪ್ರಬುದ್ಧ ಹಾಸ್ಯ ಕಲಾವಿದನಾಗಿ, ತಂಡದ ನಿರ್ವಾಹಕ ರಾಗಿ ಗುರುತಿಸಿಕೊಂಡಿರುವ ಸುಧಾಕರ ಸಾಲ್ಯಾನ್ ಸಂಕಲಕರಿಯ ಅವರದ್ದು ಮೂಲತಃ ಕೃಷಿ ಕುಟುಂಬ. ಜೀವ ವಿಮಾ ನಿಗಮದ ಪ್ರತಿನಿಧಿಯೂ ಆಗಿದ್ದಾರೆ. ಕಳೆದ ವರ್ಷದಿಂದ ಇವರು ಕೃಷಿಯಲ್ಲಿ ತೊಡಗಿಕೊಂಡಿದ್ದು, ಭತ್ತ ಬೆಳೆಯುತ್ತಿದ್ದಾರೆ.
ಭರ್ಜರಿ ಆದಾಯ
ಸುಧಾಕರ್ ಅವರು ಹಡಿಲು ಬಿದ್ದ ಕೃಷಿ ಭೂಮಿಗಳನ್ನು ಸಿದ್ಧಗೊಳಿಸಿ, ಸುಡು ಮಣ್ಣು ತಯಾರಿಸಿ ಮಳೆ ಬಂದಾಗ ಗದ್ದೆ ಹದಗೊಳಿಸಿ ನಾಟಿ ಕಾರ್ಯ ನಡೆಸಿದ್ದಾರೆ. ಇದಕ್ಕಾಗಿ ಶಾಂತಿಪಲ್ಕೆಯ ಮಹಿಳಾ ಕಾರ್ಮಿಕರ ನೆರವು ಪಡೆದಿ ದ್ದಾರೆ. ಕಳೆದ ವರ್ಷವೂ ಸೀಸನ್ಗೆ ಅನುಗುಣವಾಗಿ ಕೃಷಿ ನಡೆಸಿ ಲಕ್ಷಾಂತರ ರೂ. ಆದಾಯ ಗಳಿಸಿದ್ದಾರೆ. ಇವರ ಕಾರ್ಯಕ್ಕೆ ಹೆತ್ತವರಾದ ವಾಸು ಸಾಲ್ಯಾನ್-ಜಾನಕಿ ದಂಪತಿ, ಮನೆಯವರು ಕೈ ಜೋಡಿಸಿದ್ದಾರೆ.
ಬಹುಮುಖ ಪ್ರತಿಭೆ
ಕಲಾವಿದರಾದ ಸುಧಾಕರ ಬಹುಮುಖ ಪ್ರತಿಭೆ. ಐಕಳ ಗ್ರಾ.ಪಂ. ಸದಸ್ಯರಾಗಿರುವ ಅವರು ಈ ಹಿಂದೆ ಸಂಕಲಕರಿಯದಲ್ಲಿ ಶಾಂಭವಿ ನದಿ ಬತ್ತಿ ಹೋಗುತ್ತಿರುವ ಕಾಲಕ್ಕೆ ಅಣೆಕಟ್ಟು ಕಟ್ಟಿ ಯಶಸ್ಸು ಕಂಡಿದ್ದರೆ. ಇದಕ್ಕಾಗಿ ಆಧುನಿಕ ಭಗೀರಥ ಎಂಬ ಗೌರವವನ್ನೂ ಪಡೆದಿದ್ದರು.
ಕೃಷಿ ಪರಂಪರೆ
ನಾವು ಕೃಷಿ ಪರಂಪರೆಯಿಂದಲೇ ಬಂದವರು. ಮುಂದಿನ ಪೀಳಿಗೆಗೆ ಕೃಷಿಯ ಮಹತ್ವ ತಿಳಿಸಬೇಕಾಗಿದೆ. ಕೃಷಿಯಿಂದಲೇ ಬದುಕು ಸಾಗಿಸುವ ಕೃಷಿಕರಿಗೆ ಸರಕಾರ ವೃದ್ಧಾಪ್ಯ ಕಾಲದಲ್ಲಿ ವಿಶೇಷ ಪಿಂಚಣಿ ನೀಡುವ ಬಗ್ಗೆ ಯೋಚಿಸಬೇಕಾಗಿದೆ.
– ಸುಧಾಕರ ಸಾಲ್ಯಾನ್ , ಸಾಧಕ ಕೃಷಿಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ