ಉಳ್ಳಾಲ: ಮುಂದುವರಿದ ಕಡಲ್ಕೊರೆತ
5 ಮನೆ ಸಮುದ್ರ ಪಾಲು, 56 ಮನೆ ಅಪಾಯದಲ್ಲಿ
Team Udayavani, Jun 14, 2019, 10:10 AM IST
ಉಳ್ಳಾಲ: ಉಳ್ಳಾಲ ಮತ್ತು ಸೋಮೇಶ್ವರ ಉಚ್ಚಿಲದಲ್ಲಿ ಸಮುದ್ರ ಕೊರೆತ ಯಥಾಸ್ಥಿತಿಯಲ್ಲಿ ಮುಂದುವರಿದಿದ್ದು, ಕಿಲೇರಿಯಾ ನಗರದಲ್ಲಿ ಐದು ಮನೆಗಳು ಸಮುದ್ರ ಪಾಲಾದರೆ, 49 ಮನೆಗಳನ್ನು ಅಪಾಯದಂಚಿನಲ್ಲಿರುವವು ಎಂದು ಗುರುತಿಸಲಾಗಿದೆ. ಸೊಮೇಶ್ವರದಲ್ಲೂ 7 ಮನೆಗಳನ್ನು ಗುರುತಿಸಲಾಗಿದೆ.
ಉಳ್ಳಾಲ ಕಿಲೇರಿಯಾ ನಗರದಲ್ಲಿ ಹಮೀದ್, ಬದ್ರುನ್ನೀಸಾ, ಖತಿಜಮ್ಮ, ಸೆಬಿನಾ ಮತ್ತು ಜೈನಾಬ್ ಅವರ ಮನೆಗಳು ಸಂಪೂರ್ಣ ಹಾನಿಗೀಡಾಗಿವೆ. ಕೈಕೋ, ಕಿಲೇರಿಯಾ ನಗರ, ಮೊಗವೀರಪಟ್ನ, ಸಿಗ್ರೌಂಡ್ ಸೇರಿದಂತೆ 49 ಮನೆಗಳು ಮತ್ತು ಎರಡು ಮಸೀದಿಗಳು ಅಪಾಯದಂಚಿನಲ್ಲಿವೆ. ಸಮ್ಮರ್ ಸ್ಯಾಂಡ್ ಬೀಚ್ ರೆಸಾರ್ಟ್ಗೆ ಸೇರಿದ್ದ ಶೌಚಾಲಯ ಕಟ್ಟಡ ಸಮುದ್ರ ಪಾಲಾಗಿದೆ.
ಸೋಮೇಶ್ವರ ಉಚ್ಚಿಲದಲ್ಲಿ ಸಮುದ್ರದ ಕೊರೆತ ಹೆಚ್ಚಿದ್ದು, 7 ಮನೆಗಳು ಅಪಾಯದಂಚಿನಲ್ಲಿವೆ. ಉಚ್ಚಿಲ ಮತ್ತು ಸೋಮೇಶ್ವರದ ಉದ್ದಕ್ಕೂ ಸಮುದ್ರ ತಟದಲ್ಲಿದ್ದ ಮರಗಳು ಸಂಪೂರ್ಣ ಸಮುದ್ರಪಾಲಾಗಿವೆ. ಸಂಸದ ನಳಿನ್ ಕುಮಾರ್ ಕಟೀಲು, ಕಮಿಷನರ್ ಸಂದೀಪ್ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ