ಅಂಪಾರಿನಲ್ಲಿ ನಿರ್ಮಾಣವಾಗುತ್ತಿದೆ ಸುಂದರ ವೃತ್ತ
Team Udayavani, May 11, 2018, 6:15 AM IST
ಕುಂದಾಪುರ: ಬೈಂದೂರು – ವಿರಾಜಪೇಟೆ ಹಾಗೂ ಶಿವಮೊಗ್ಗ- ಕುಂದಾಪುರ ಎರಡು ರಾಜ್ಯ ಹೆದ್ದಾರಿಗಳನ್ನು ಸಂಪರ್ಕಿಸುವ ಅಂಪಾರಿನಲ್ಲಿ 1.30 ಕೋ. ರೂ. ವೆಚ್ಚದಲ್ಲಿ ಒಂದು ಚೆಂದದ ವೃತ್ತ ನಿರ್ಮಾಣವಾಗುತ್ತಿದೆ. ಅದರೊಂದಿಗೆ ಅಂಪಾರಿನಲ್ಲಿ 150 ಮೀಟರ್ ರಸ್ತೆಯು ದ್ವಿಪಥವಾಗಲಿದೆ.
ನಾಲ್ಕು ಊರುಗಳ ಸಂಧಿಸುವ ವೃತ್ತ
ಒಂದು ಕಡೆಯಿಂದ ಕುಂದಾಪುರ,ಮತ್ತೂಂದು ಕಡೆಯಿಂದ ಸಿದ್ದಾಪುರ,ಇನ್ನೊಂದು ಕಡೆಯಿಂದ ಶಂಕರ ನಾರಾಯಣ, ಕೊಲ್ಲೂರನ್ನು ಸಂಧಿಸುವ ಅಂಪಾರು ಪೇಟೆಯಲ್ಲಿ ವೃತ್ತ ನಿರ್ಮಾಣವಾಗುತ್ತಿರುವುದ ರಿಂದ ಬಹಳಷ್ಟು ಪ್ರಯೋಜನವಾಗಲಿದೆ. ಈ ಮೊದಲು ಇಲ್ಲಿ ಹೊಸದಾಗಿ ಬಂದವರಿಗೆ ಯಾವ ಕಡೆ ತೆರಳಬೇಕು ಎನ್ನುವ ಗೊಂದಲವಾಗುತ್ತಿತ್ತು. ಈಗ ವೃತ್ತ ನಿರ್ಮಾಣದೊಂದಿಗೆ ಮಾರ್ಗ ಸೂಚಿಗಳನ್ನು ಹಾಕಿದರೆ ಪ್ರಯಾಣಿಕರಿಗೆ ಸಹಾಯವಾಗಲಿದೆ.
10 ವರ್ಷಗಳ ಬೇಡಿಕೆ
ಅಂಪಾರಿನಲ್ಲಿ ಸರ್ಕಲ್ ನಿರ್ಮಾಣವಾಗಬೇಕು ಎನ್ನುವುದು ಇಂದು, ನಿನ್ನೆಯ ಬೇಡಿಕೆಯಲ್ಲ. ಕಳೆದ 10 ವರ್ಷಗಳಿಂದ ಈ ಕುರಿತ ಕೂಗು ಕೇಳಿ ಬಂದಿತ್ತು. ಕಡೆಗೂ ಸ್ಥಳೀಯಾಡಳಿತದ ಮುತುವರ್ಜಿಯಿಂದ ಅಂಪಾರು ಸರ್ಕಲ್ ನಿರ್ಮಾಣವಾಗುತ್ತಿದೆ.
150 ಮೀಟರ್ ರಸ್ತೆ ದ್ವಿಪಥ
ಸರ್ಕಲ್ನೊಂದಿಗೆ 150 ಮೀಟರ್ ರಸ್ತೆಯೂ ದ್ವಿಪಥವಾಗಲಿದೆ. ಮಧ್ಯದಲ್ಲಿ ರಸ್ತೆ ವಿಭಾಜಕಗಳ ನಿರ್ಮಾಣವಾಗಲಿದೆ. ಅಂಪಾರು ಭಜನ ಮಂದಿರದಿಂದ ಆರಂಭ ವಾಗಿ ಅಂಪಾರು ಪೇಟೆಯವರೆಗೆ ವಿಸ್ತರಣೆಗೊಳ್ಳಲಿದೆ. ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ.
ಪೇಟೆ ಬೆಳವಣಿಗೆಗೂ ಸಹಕಾರಿ
ಅಂಪಾರಿನಲ್ಲಿ ಸರ್ಕಲ್ ನಿರ್ಮಾಣವಾಗುತ್ತಿರುವುದರಿಂದ ಅಪಘಾತಗಳ ಸಂಖ್ಯೆಯೂ ನಿಯಂತ್ರಣವಾಗುವುದಲ್ಲದೆ, ಹೊಸದಾಗಿ ಬರುವ ವಾಹನ ಸವಾರರಿಗೂ ಅನುಕೂಲವಾಗಲಿದೆ. ಇದರೊಂದಿಗೆ ಶಿವಮೊಗ್ಗ, ವಿರಾಜಪೇಟೆಗಳಿಂದ ಬರುವಂತಹ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ವ್ಯಾಪಾರ, ವಹಿವಾಟುಗಳಿಗೂ ಅನುಕೂಲವಾಗಲಿದೆ. ಇದರಿಂದ ಅಂಪಾರಿನ ಅಭಿವೃದ್ಧಿ ದೃಷ್ಟಿಯಿಂದಲೂ ವೃತ್ತ ನಿರ್ಮಾಣ ಸಹಕಾರಿಯಾಗಲಿದೆ.
ಪೇಟೆ ಅಭಿವೃದ್ಧಿಗೆ ಯೋಜನೆ
ಅಂಪಾರಿನಲ್ಲಿ ವೃತ್ತ ನಿರ್ಮಾಣದೊಂದಿಗೆ ಹೈಮಾಸ್ಟ್ ದೀಪ, ಒಳಚರಂಡಿ ಕಾಮಗಾರಿಯೂ ನಡೆಯುತ್ತಿದೆ. ಬಸ್ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು.4 ಕಡೆಗಳಲ್ಲಿಯೂ ರಸ್ತೆ ವಿಸ್ತರಣೆ ಮಾಡಲಾಗುವುದು.
– ಕೆ. ಭಾಸ್ಕರ ಶೆಟ್ಟಿ,
ಅಂಪಾರು ಗ್ರಾ.ಪಂ. ಪಿಡಿಒ
– ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು