ಭುವನೇಂದ್ರ ಕಿದಿಯೂರು ಅವರಿಗೆ ಅದ್ದೂರಿ ಅಭಿನಂದನೆ

75ರ ಹುಟ್ಟುಹಬ್ಬದ ಸಂಭ್ರಮ

Team Udayavani, Jul 22, 2019, 5:00 AM IST

210719ASTRO09

ಪೇಜಾವರ ಶ್ರೀಗಳು ಭುವನೇಂದ್ರ ಕಿದಿಯೂರು ದಂಪತಿಯನ್ನು ಸಮ್ಮಾನಿಸಿ ಆಶೀರ್ವದಿಸಿದರು.

ಉಡುಪಿ: ಹಿರಿಯ ಹೊಟೇಲ್‌ ಉದ್ಯಮಿ, ದಾನಿ, ಧಾರ್ಮಿಕ-ಸಾಮಾಜಿಕ ಮುಂದಾಳು ಭುವನೇಂದ್ರ ಕಿದಿಯೂರು ಅವರಿಗೆ 75 ವರ್ಷ ತುಂಬುವ ಸುಸಂದರ್ಭ ಅವರನ್ನು ಅಭಿಮಾನಿಗಳು ರವಿವಾರ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಅದ್ದೂರಿಯಾಗಿ ಅಭಿನಂದಿಸಿದರು.

ಕಾರ್ಯಕ್ರಮಕ್ಕೆ ಮುನ್ನ ಸ್ವಾಮೀಜಿ, ಧರ್ಮಗುರು, ಅತಿಥಿಗಣ್ಯರನ್ನು ವಾದ್ಯಘೋಷ, ಕೊಂಬು ಕಹಳೆ, ಚೆಂಡೆ, ಸ್ಯಾಕ್ಸೊಫೋನ್ ವಾದನದೊಂದಿಗೆ ಸ್ವಾಗತಿಸಲಾಯಿತು. ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಸಮಾರಂಭವನ್ನು ಉದ್ಘಾಟಿಸಿದರು.

ಪ್ರತಿಯೊಬ್ಬರೂ ಸಮಾಜದಿಂದಲೇ ಬದುಕು ನಡೆಸುತ್ತಿರುವುದು. ರೈತ ಅಕ್ಕಿಯನ್ನು ಉತ್ಪಾದನೆ ಮಾಡಿದರೆ ಮಾತ್ರ ಎಲ್ಲರಿಗೂ ಸುಗ್ರಾಸವಾದ ಊಟ ದೊರಕುತ್ತದೆ. ಹೀಗೆ ಸಮಾಜದಿಂದ ಬದುಕಿದ ನಾವು ಸಮಾಜಕ್ಕೆ ಏನಾದರೂ ಕೊಡುಗೆಗಳನ್ನು ಸಲ್ಲಿಸಬೇಕು. ಇಲ್ಲವಾದರೆ ಬದುಕು ವ್ಯರ್ಥವಾಗುತ್ತದೆ. ಭಗವಂತ ಕೊಟ್ಟ ಸಂಪತ್ತನ್ನು ಸಮಾಜಕ್ಕೆ ವಿನಿಯೋಗಿಸಬೇಕು. ಬಡವರು, ದೀನದಲಿತರಲ್ಲಿ ಭಗವಂತನ ವಿಶೇಷ ಸನ್ನಿಧಾನವಿರುವುದರಿಂದ ಅಂತಹವರ ಸೇವೆ ಮಾಡಿದಲ್ಲಿ ದೇವರು ಸುಪ್ರೀತನಾಗುತ್ತಾನೆ. ಭುವನೇಂದ್ರ ಕಿದಿಯೂರು ಅವರು ಪ್ರತಿಮಾ ಸೇವೆಯೊಂದಿಗೆ ಇಂತಹ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ ಎಂದು ಆಶೀರ್ವಚನದಲ್ಲಿ ಶ್ರೀಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ನುಡಿದರು.

ಡಾ| ಟಿಎಂಎ ಪೈ, ಟಿ.ಎ.ಪೈ, ಶ್ರೀನಿವಾಸ ಮಲ್ಯ, ಡಾ| ವಿ.ಎಸ್‌.ಆಚಾರ್ಯ, ಆಸ್ಕರ್‌ ಫೆರ್ನಾಂಡಿಸ್‌ ಮೊದಲಾದವರ ಕೊಡುಗೆಯಿಂದಾಗಿ ಕರಾವಳಿ ಜಿಲ್ಲೆಗಳು ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿವೆ. ಇಂಥ ಸಾಧಕರ ಸಾಲಿಗೆ ಭುವನೇಂದ್ರ ಕಿದಿಯೂರು ಕೂಡ ಸೇರಿದ್ದಾರೆ. ಅವರ ಬದುಕು ಇತರರಿಗೆ ಮಾರ್ಗದರ್ಶನ ನೀಡುವಂತಿದೆ ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿಯವರನ್ನು ಹರಸಿ ಬಂದಿರುವ ಸರ್ವಶ್ರೇಷ್ಠ ಜಗದ್ಗುರು ಪೇಜಾವರ ಶ್ರೀಗಳಿಂದ ಭುವನೇಂದ್ರ ಕಿದಿಯೂರು ಅವರು ಆಶೀರ್ವಾದ ಪಡೆಯುತ್ತಿರುವುದು ನಿಜಕ್ಕೂ ರೋಮಾಂಚನದ ಕ್ಷಣ. ಇದೊಂದು ಅರ್ಥಪೂರ್ಣ ಮತ್ತು ಹೃದಯ ತಟ್ಟುವ ಸಮಾರಂಭ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.

ದೇವರು ಕೊಟ್ಟ ವರ
ಶುಭಾಶಂಸನೆಗೈದ ಉಡುಪಿ ಮದರ್‌ ಆಫ್ ಸಾರೋಸ್‌ ಚರ್ಚ್‌ನ ಧರ್ಮಗುರು ರೆ| ಫಾ| ವಲೇರಿಯನ್‌ ಮೆಂಡೋನ್ಸ ಅವರು, “ಶ್ರದ್ಧೆಯಿಂದ ದುಡಿದು ಅದರಿಂದ ಗಳಿಸಿದ ಹಣವನ್ನು ಬಡ ಮಕ್ಕಳ ಶಿಕ್ಷಣ, ಬಡ ಕುಟುಂಬಗಳ ಆರೋಗ್ಯಕ್ಕಾಗಿ ನೀಡುತ್ತಿದ್ದಾರೆ. ಇವರು ಉಡುಪಿಗೆ ದೇವರು ಕೊಟ್ಟ ವರ. ಇವರು ಸಮಾಜದ ರತ್ನ. ಬಡವರ ಬಂಧು ಆಗಿರುವ ಇವರ ಬದುಕು ಸಾರ್ಥಕವಾಗಿ ಇತರರಿಗೆ ದಾರಿದೀಪವಾಗಲಿ’ ಎಂದು ಹೇಳಿದರು.

ಉತ್ತಮ ಸಂದೇಶ
ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ ಆಳ್ವ ಅವರು ಮಾತನಾಡಿ, “ಭುವನೇಂದ್ರ ಕಿದಿಯೂರು ಅವರು ತಮ್ಮ ಆದರ್ಶ ಜೀವನದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುತ್ತಿದ್ದಾರೆ. ಅವರೊಂದಿಗೆ ನಾವು ಇರುವುದೇ ಸಂತೋಷದ ಸಂಗತಿ’ ಎಂದರು ಹೇಳಿದರು.

ಫ‌ಲ ನೀಡುವ ಮರ
ಕೋಟ ಗೀತಾನಂದ ಫೌಂಡೇಶನ್‌ ಅಧ್ಯಕ್ಷ ಆನಂದ ಸಿ.ಕುಂದರ್‌ ಅವರು ಮಾತನಾಡಿ, “ಜೀವನದಲ್ಲಿ ಸಂತೃಪ್ತಿ ಸಿಗಬೇಕಾದರೆ ನಾವು ನೆರಳು ಮತ್ತು ಫ‌ಲ ನೀಡುವ ಮರದಂತಿರಬೇಕು. ಭುವನೇಂದ್ರ ಕಿದಿಯೂರು ಅವರು ಬೆಳೆದ ರೀತಿ, ಅವರ ಜನಪರ, ಧಾರ್ಮಿಕ ಕಾರ್ಯಕ್ರಮಗಳು ಸಮಾಜಕ್ಕೆ ಹೆಮ್ಮೆ’ ಎಂದರು.

ಪರಿಶ್ರಮದಿಂದ ಬಂದ ಯಶಸ್ಸು
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಮಾಹೆ ವಿ.ವಿ. ಸಹಕುಲಾಧಿಪತಿ ಡಾ|ಎಚ್‌.ಎಸ್‌.ಬಲ್ಲಾಳ್‌ ಅವರು, ಬಡಕುಟುಂಬದಿಂದ ಬಂದ ಭುವನೇಂದ್ರ ಕಿದಿಯೂರು ಅವರು ಸ್ವಂತ ಪರಿಶ್ರಮದಿಂದ ಯಶಸ್ಸನ್ನು ಗಳಿಸಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಪ್ರಶಂಸಿಸಿದರು. ಹೀರಾ ಭುವನೇಂದ್ರ ಕಿದಿಯೂರು, ದ.ಕ ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷ ಜಯ ಸಿ.ಕೋಟ್ಯಾನ್‌ ಉಪಸ್ಥಿತರಿದ್ದರು.

ಎರ್ಮಾಳಿನ ಚಂದ್ರಶೇಖರ್‌ ಮತ್ತು ಬಳಗದವರಿಂದ ವಾದ್ಯ ಸಂಗೀತ, ನೃತ್ಯನಿಕೇತನ ಕೊಡವೂರು ಕಲಾವಿದರಿಂದ ಪ್ರಾರ್ಥನ ನೃತ್ಯ ನಡೆಯಿತು.

ವಿಶಿಷ್ಟ ಅಭಿನಂದನೆ
ಶಿವಮೊಗ್ಗದಲ್ಲಿ ಮಾಡಿ ತರಿಸಲಾದ ರಕ್ತಚಂದನದ ಶ್ರೀಕೃಷ್ಣನ ಪ್ರತಿಮೆಯನ್ನು ಪರ್ಯಾಯ ಶ್ರೀ ಪಲಿಮಾರು ಶ್ರೀಪಾದರು ಶ್ರೀಕೃಷ್ಣಮಠದಲ್ಲಿಟ್ಟು ಪೂಜಿಸಿ ಅದನ್ನು ಸಭಾಂಗಣದಲ್ಲಿ ಬೆಳ್ಳಿಯ ಪಲ್ಲಕ್ಕಿಯಲ್ಲಿ ವೇದಿಕೆಗೆ ತಂದು ಭುವನೇಂದ್ರ ಕಿದಿಯೂರು ಅವರಿಗೆ ಸ್ಮರಣಿಕೆ ರೂಪದಲ್ಲಿ ನೀಡಿ ಅಭಿನಂದಿಸಲಾಯಿತು.

ಬದುಕು ಸುಗಂಧಮಯವಾಗಲಿ
“ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್‌.ಪೈ ಅವರು ಮಾತನಾಡಿ, “ಸಮಾಜದ ನೋವು-ನಲಿವುಗಳಿಗೆ ಸ್ಪಂದಿಸುವವರು ಧರ್ಮಾತ್ಮರು. ಕೆಲವರು ವಿಶೇಷ ಕೆಲಸಗಳಿಗಾಗಿಯೇ ಹುಟ್ಟಿ ಬರುತ್ತಾರೆ. ಅಂಥವರಲ್ಲಿ ಭುವನೇಂದ್ರ ಕಿದಿಯೂರು ಕೂಡ ಒಬ್ಬರು. ಹೂವು ತನ್ನ ಸುಗಂಧದಿಂದ ಸುತ್ತಲಿನವರಿಗೆ ಆಹ್ಲಾದ ನೀಡುವಂತೆ ನಮ್ಮ ಬದುಕು ಕೂಡ ಇರಬೇಕು. ಅದರಿಂದ ಬದುಕು ಅಮೃತತ್ವ ಪಡೆಯಬೇಕು ಎಂದು ಹೇಳಿದರು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.