ವೈನ್ ರುಚಿ ಕಂಡ ಹಿರಿಯರು,ಮಹಿಳೆಯರು
Team Udayavani, Sep 29, 2018, 6:45 AM IST
ಮಲ್ಪೆ : ಸ್ಲೋ ಅಗಿ ಮತ್ತೇರಿಸುವ ಸಿಹಿಮದ್ಯವನ್ನು ಮಹಿಳೆಯರೂ ಸೇರಿದಂತೆ ಎಲ್ಲರೂ ಇಷ್ಟ ಪಡುತ್ತಾರೆ. ಅಂತವರಿಗೆ ಮಲ್ಪೆ ಬೀಚ್ನಲ್ಲಿ ವೈನ್ ಫೆಸ್ಟಿವಲ್ ಆಯೋಜಿಸಲಾಗಿದೆ.
ಮಲ್ಪೆ ಕಡಲ ಕಿನಾರೆಯಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸಹಿತ ವಿವಿಧ ಇಲಾಖೆಗಳು ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ 4 ದಿನಗಳ ವರೆಗೆ ನಡೆಯುವ ಪರ್ಯಟನ ಪರ್ವ, ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ದ್ರಾಕ್ಷರಸ ಮಂಡಳಿಯ ಸಹಯೋಗದಲ್ಲಿ ಪ್ರಥಮ ಬಾರಿಗೆ ವೈನ್ ಫೆಸ್ಟಿವಲ್ ಆಯೋಜಿಸಲಾಗಿದೆ. ವೈನ್ ಪ್ರದರ್ಶಿಸುವ ಮೂಲಕ ದೇಶೀಯ ವೈನ್ ಪರಂಪರೆಯನ್ನು ತೆರೆದಿಡಲಾಗಿದ್ದು, ಪ್ರಥಮ ದಿನದಲ್ಲೆ ವೈನ್ ಉತ್ಸವಕ್ಕೆ ಅಭೂತಪೂರ್ವ ಸ್ಪಂದನೆಯೂ ದೊರೆತ್ತಿದೆ.ವಿದ್ಯಾರ್ಥಿಗಳು, ಹಿರಿಯ ನಾಗರಿ ಕರು, ಮಹಿಳೆಯರೂ ಸೇರಿದಂತೆ ನೂರಾರು ವೈನ್ ಪ್ರಿಯರು ಭೇಟಿ ನೀಡಿ ರುಚಿ ಆಸ್ವಾದಿಸಿದರು. ವೈನ್ ಫೆಸ್ಟಿವಲ್ ಪ್ರವೇಶಕ್ಕೆ ಯಾವುದೇ ಪ್ರವೇಶ ಶುಲ್ಕ ಇರಲಿಲ್ಲ. ಬಂದವರಿಗೆ ಟೇಸ್ಟ್ ನೋಡಲು ಉಚಿತವಾಗಿ ವೈನ್ ಕೊಡುತ್ತಿದ್ದರು.
ಪ್ರಥಮ ದಿನವೇ ಉತ್ತಮ ಸ್ಪಂದನೆ ದೊರಕಿದೆ. ಇನ್ನುಳಿದ ಮೂರು ದಿನವೂ ಒಳ್ಳೆ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ಇದೆ. ಕಳೆದ ವರ್ಷ ಮಂಗಳೂರಿನಲ್ಲಿ ನಡೆದ ವೈನ್ ಮೇಳದಲ್ಲಿ ಸುಮಾರು 35 ಲಕ್ಷ ರೂ. ವ್ಯವಹಾರ ಆಗಿದೆ. ದ್ರಾಕ್ಷಿ ಬೆಳೆಗಾರರಿಗೆ ಇದೊಂದು ಒಳ್ಳೆಯ ವೇದಿಕೆಯಾಗಿದ್ದು, ಈ ಮೇಳ ರಾಜ್ಯಾದ್ಯಂತ ವಿಸ್ತರಣೆಯಾಗಬೇಕು ಎಂದು ಕರ್ನಾಟಕ ವೈನ್ಬೋರ್ಡ್ನ ಮ್ಯಾನೇಜರ್ ತಿಳಿಸಿದ್ದಾರೆ.
ಆಕರ್ಷಿಸಿದ ಬ್ರಾಂಡ್ಗಳು
ರೋಸ್, ಸೂಲ, ಕಾಡು, ಫÅಟೇಲ್ಲಿ, ಗ್ರೋವರ್, ಎಸ್ಡಿಯು, ಎಲೈಟ್, ಸೀಸನ್, ಕೃಷ್ಣವಲ್ಲಿ, ರಿಕೋ, ಬ್ಲಾಕ್ಬಕ್, ವೇಲ್ದಿ ಇಂಡೀಸ್ ಒಳಗೊಂಡ ಹೆಸರಾಂತ ಕಂಪೆನಿಯ ವೈನ್ಗಳ ಪ್ರದರ್ಶನ ಮತ್ತು ಮಾರಾಟದಲ್ಲಿ ಶೇ. 10 ರಿಂದ 20ರವರೆಗೆ ರಿಯಾಯಿತಿ ದರವೂ ಇದೆ. ಸೂಲ ಕಂಪೆನಿಯ ಮದಿರಾ, ಹಿಂಡೋಲಿ, ಬ್ರೂಟ್, ಸತೋರಿ, ದೇಶಿಯ ವೈನ್ಗಳಾದ ದಿಯಾ, ಮದಿ, ರಾಝಾ, ಕ್ಯಾಬಿನೆಟ್ ಶಿರಾಜ್ ಮೊದಲಾದವ ಬ್ರಾಂಡ್ಗಳು ಮೇಳದಲ್ಲಿ ಇದ್ದವು. 100ರಿಂದ ಹಿಡಿದು 1500 ರೂ. ವರೆಗಿನ ವೈನ್ಗಳು ಮಾರಾಟಕ್ಕೆ ಇದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ