ಹೆಬ್ರಿಯಲ್ಲಿ ವೀರ ಯೋಧ ಉದಯ ಪೂಜಾರಿ ಸ್ಮಾರಕ ಪ್ರತಿಮೆ
ಪ್ರತಿಮೆ ನಿರ್ಮಾಣಕ್ಕೆ ಸೈನಿಕ ಸಚಿನ್ ಕುಮಾರ್ ಪಣ
Team Udayavani, Jul 13, 2019, 5:32 AM IST
ಉಡುಪಿಯಲ್ಲಿ ನಿರ್ಮಾಣವಾಗುತ್ತಿರುವ ಯೋಧ ದಿ| ಉದಯಪೂಜಾರಿ ಸ್ಮಾರಕ ಪ್ರತಿಮೆ.
ಹೆಬ್ರಿ: ಕಾರ್ಗಿಲ್ ಹುತಾತ್ಮ ಹೆಬ್ರಿ ಸಮೀಪದ ಸೋಮೇಶ್ವರ ಕಾಸನಮಕ್ಕಿ ಉದಯ ಪೂಜಾರಿ ಅವರ ಸ್ಮಾರಕ ಪ್ರತಿಮೆ ಶೀಘ್ರ ಹೆಬ್ರಿ ಪೇಟೆಯಲ್ಲಿ ಅನಾವರಣಗೊಳ್ಳಲಿದೆ.
ಹೆಬ್ರಿ ಬಸ್ಸ್ಟಾಂಡ್ ಸಮೀಪ ಹೆಬ್ರಿ-ತಾಣ ರಸ್ತೆಯ ಆರಂಭದಲ್ಲಿ ಈ ಪ್ರತಿಮೆ ನಿರ್ಮಾಣಗೊಳ್ಳಲಿದೆ. ಇದರ ಕೆಲಸಕ್ಕೆ ಮತ್ತೋರ್ವ ಸೈನಿಕ ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಹೆಬ್ರಿ ಬೀಡಿನ ಚಂದುಕುಂದು ಸಚಿನ್ಕುಮಾರ್ ಶೆಟ್ಟಿ ಟೊಂಕಕಟ್ಟಿದ್ದಾರೆ.
ತನ್ನ ಊರಿನ ಹೆಮ್ಮೆಯ ಯೋಧನ ಪ್ರತಿಮೆ ಸ್ಥಾಪನೆಗೆ ಯಾರೂ ಮುಂದಾಗದ್ದರಿಂದ ಈ ಕೆಲಸಕ್ಕೆ ಸಚಿನ್ಅವರು ಎಲ್ಲರನ್ನೂ ಸೇರಿಸಿಕೊಂಡು ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಪ್ರತಿಮೆ ನಿರ್ಮಾಣದ ಪಿಲ್ಲರ್ ಕಾರ್ಯ ಬೀಡಿನ ಯುವಕರ ತಂಡದ ಶ್ರಮದಾನದ ಮೂಲಕ ನಡೆದಿದೆ. ಉಡುಪಿಯಲ್ಲಿರುವ ಹೆಬ್ರಿ ಮೂಲದ ಚಿತ್ರಕಲಾವಿದ ವಸಂತ ಅವರು ಪ್ರತಿಮೆ ನಿರ್ಮಾಣ ಮಾಡುತ್ತಿದ್ದಾರೆ. 1.20 ಲಕ್ಷ ರೂ.ಗಳಷ್ಟು ವೆಚ್ಚವಿದ್ದು, ಇದನ್ನು ಸಚಿನ್ಅವರೇ ಭರಿಸುತ್ತಿದ್ದಾರೆ.
ವೀರ ಯೋಧ ಉದಯ ಪೂಜಾರಿ
ಯೋಧ ಉದಯಪೂಜಾರಿ ಹೆಬ್ರಿ ತಾಲೂಕಿಕ ನಾಡಾ³ಲು ಗ್ರಾ.ಪಂ.ನ ಕಾಸನಮಕ್ಕಿಯವರು. 2001 ಫೆ.26ರಂದು ಕಾರ್ಗಿಲ್ ಯುದ್ಧ ಭೂಮಿಯಲ್ಲಿ ತಾನು ಊಟ ಮಾಡಿದ ತಟ್ಟೆ ತೊಳೆಯುತ್ತಿರುವ ವೇಳೆ ಶತ್ರುಗಳ ದಾಳಿಗೆ ಬಲಿಯಾಗಿದ್ದರು. ಕೈಯಲ್ಲಿ ತಟ್ಟೆಯ ಬದಲು ಆಯುಧ ಇರುತ್ತಿದ್ದರೆ ಶತ್ರುಗಳನ್ನು ಸದೆಬಡಿಯುತ್ತಿದ್ದರು ಎಂದು ಸಚಿನ್ಹೇಳುತ್ತಾರೆ.
ಉದಯ್ ಅವರೇ ಪ್ರೇರಣೆ
ಸಚಿನ್ಅವರು ಶಾಲೆಗೆ ಹೋಗುವ ವೇಳೆ ಉದಯ್ ಅವರ ಮೃತದೇಹ ಮೆರವಣಿಗೆಯಲ್ಲಿ ಆಗಮಿಸಿದ್ದು, ಇದನ್ನು ಕಂಡು ಅವರಿಗೂ ದೇಶಸೇವೆಯ ಪ್ರೇರಣೆಯಾಗಿತ್ತಂತೆ. ಅದರಂತೆ ಅವರು 2011ರಲ್ಲಿ ಸೇನೆಗೆ ಸೇರ್ಪಡೆಯಾಗಿದ್ದು, ಕಾಶ್ಮೀರದಲ್ಲಿದ್ದಾರೆ. 15 ದಿನದ ಹಿಂದೆ ಸಚಿನ್ಅವರು ಊರಿಗೆ ಬಂದಾಗ ಉದಯ ಪೂಜಾರಿ ಅವರ ಮನೆಗೆ ಭೇಟಿ ನೀಡಿ ಪ್ರತಿಮೆ ನಿರ್ಮಾಣ ಬಗ್ಗೆ ಅವರ ಹೆತ್ತವರಿಂದ ಸಮ್ಮತಿ ಪಡೆದಿದ್ದಾರೆ.
ಆಗಸ್ಟ್ 15ಕ್ಕೆ ಲೋಕಾರ್ಪಣೆ
ದೇಶಕ್ಕಾಗಿ ಪ್ರಾಣತೆತ್ತ ಉದಯ ಅವರ ಸ್ಮಾರಕ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ಆಗಸ್ಟ್ 15ರ ಸ್ವಾತಂತ್ರ್ಯದಿನದಂದು ನಡೆಯಲಿದೆ ಎಂದು ಸಚಿನ್ತಿಳಿಸಿದ್ದಾರೆ.
ಯುವ ಪೀಳಿಗೆಗೆ ತಿಳಿವಳಿಕೆ ಮೂಡಬೇಕು
ದೇಶಕ್ಕಾಗಿ ಪ್ರಾಣತೆತ್ತ ಪ್ರತಿಯೊಬ್ಬರ ಸ್ಮಾರಕ ನಿರ್ಮಾಣವಾಗಬೇಕು. ಆ ಮೂಲಕ ಯುವ ಪೀಳಿಗೆಗೆ ದೇಶ ಪ್ರೇಮದ ಬಗ್ಗೆ ತಿಳಿವಳಿಕೆ ಮೂಡಬೇಕು ಎಂಬ ನಿಟ್ಟಿನಲ್ಲಿ ಊರಿನ ವೀರ ಯೋಧ ಉದಯಪೂಜಾರಿ ಸ್ಮಾರಕ ನಿರ್ಮಾಣಕ್ಕೆ ಎಲ್ಲರ ಸಹಕಾರದೊಂದಿಗೆ ಮುಂದಾಗಿದ್ದೇನೆ.
–ಸಚಿನ್ಕುಮಾರ್ ಶೆಟ್ಟಿ,
ಸೈನಿಕ, ಚಂದುಕುಂದು ಬೀಡು
ಇತರರಿಗೆ ಮಾದರಿ
ದೇಶ ಸೇವೆ ಮಾಡುವುದರ ಜತೆಗೆ ದೇಶಕ್ಕಾಗಿ ಹೋರಾಡಿ ಮಡಿದ ಯೋಧನ ಪ್ರತಿಮೆಯನ್ನು ಹೆಬ್ರಿಯ ಹೃದಯ ಭಾಗದಲ್ಲಿ ನಿರ್ಮಾಣಕ್ಕೆ ಮುಂದಾದ ಸಚ್ಚಿನ್ ಇತರರಿಗೆ ಮಾದರಿಯಾಗಿದ್ದಾರೆ.
-ಮಿಥುನ್ ಶೆಟ್ಟಿ ಚಾರ,
ಸಾಮಾಜಿಕ ಕಾರ್ಯಕರ್ತ ಹೆಬ್ರಿ
-ಹೆಬ್ರಿ ಉದಯಕುಮಾರ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ