ಜನರಿಗೆ ಕಗ್ಗಂಟಾದ ಹೊಸ ಒಟಿಪಿ ವ್ಯವಸ್ಥೆ ನಿವೇಶನ ನೋಂದಣಿ ದುಸ್ತರ


Team Udayavani, Feb 14, 2020, 4:57 AM IST

Mobile

ಬೈಂದೂರು:ಆಡಳಿತ ಸುಧಾರಣೆಗಾಗಿ ಹೊಸ ಹೊಸ ತಂತ್ರಜ್ಞಾನಗಳನ್ನು, ವ್ಯವಸ್ಥೆಗಳನ್ನು ಜಾರಿಗೆ ತರಲಾಗುತ್ತದೆ. ಆದರೆ ಇಂತಹ ಹೊಸ ವ್ಯವಸ್ಥೆಗಳು ಉಪಕಾರಿಯಾದರೆ ಜನರಿಗೂ ಪ್ರಯೋಜನ. ಜನಸಾಮಾನ್ಯರಿಗೆ ಕಗ್ಗಂಟಾದಾಗ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತವೆ. ಅದೇ ರೀತಿ ನಿವೇಶನ ನೋಂದಣಿಗೆ ಜಾರಿಗೆ ತಂದಿರುವ ನಿಯಮ ಸಮಸ್ಯೆ ಸೃಷ್ಟಿಸಿದೆ.

ಹೊಸ ನಿಯಮವೇನು?
ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಭೂ ವ್ಯವಹಾರ ನೋಂದಣಿ ಪ್ರಕ್ರಿಯೆ ನಡೆಯುತ್ತದೆ. ಹಿಂದೆ ನೋಂದಣಿ ಅಧಿಕಾರಿ ಮುಂದೆ ಖರೀದಿದಾರರು ಮತ್ತು ಮಾರಾಟಗಾರರು ಎರಡೂ ಕಡೆಯವರನ್ನು ಕರೆಸಿ ಸೂಕ್ತ ದಾಖಲೆ ಪರಿಶೀಲನೆ ನಡೆಸಿ ಭಾವಚಿತ್ರ ತೆಗೆದು ನೋಂದಣಿ ಮಾಡಲಾಗುತ್ತಿತ್ತು. ಈಗ ಇದಕ್ಕಿಂತಲೂ ಹೊಸ ನಿಯಮ ಜಾರಿಗೆ ಬಂದಿದೆ. ಆ ಪ್ರಕಾರ ಒಂದು ಜಾಗದ ಪಹಣಿಯಲ್ಲಿ ಮನೆಯವರ ಎಷ್ಟು ಹೆಸರಿದೆ ಅಷ್ಟೂ ಮಂದಿ ಹಾಜರಾಗಬೇಕು ಮತ್ತು ಪ್ರತಿಯೊಬ್ಬರ ಮೊಬೈಲ್‌ ನಂಬರ್‌ ಕೂಡ ಕಡ್ಡಾಯ. ನೋಂದಣಿ ಸಂದರ್ಭ ಮೊಬೈಲಿಗೆ ಬರುವ ಒಟಿಪಿಯನ್ನು ಪರಿಶೀಲಿಸಿದಾಗ ಮಾತ್ರ ನೋಂದಣಿ ಸಾಧ್ಯ.

ನಕಲಿ ತಡೆಗೆ ಅಸ್ತ್ರ
ಯಾರಧ್ದೋ ಹೆಸರಿನಲ್ಲಿರುವ ನಿವೇಶನದ ದಾಖಲೆಗಳನ್ನು ನಕಲಿ ಮಾಡಿ ಜಾಗ ನೋಂದಣಿ ಮಾಡಿಸಿಕೊಳ್ಳುವ ಅಥವಾ ಇನ್ನೊಬ್ಬರಿಗೆ ಮಾರಾಟ ಮಾಡುವ ಪ್ರಕರಣಗಳನ್ನು ತಡೆಗಟ್ಟಲು, ಕಂದಾಯ ಭೂಮಿಗಳನ್ನು ಅಕ್ರಮವಾಗಿ ಮಾರಾಟ, ತಮ್ಮ ಹೆಸರಿಗೆ ನೋಂದಣಿ ಮಾಡದಂತೆ ತಡೆಯಲು ಈ ವ್ಯವಸ್ಥೆಯನ್ನು 2019 ಅಕ್ಟೋಬರ್‌ನಲ್ಲಿ ಸರಕಾರ ಜಾರಿಗೆ ತಂದಿದೆ. ಈ ವ್ಯವಸ್ಥೆ ಜಾರಿಗೊಳಿಸಿದಾಗ ನಿತ್ಯ 25 ಸಾವಿರದಿಂದ 30 ಸಾವಿರ ವರೆಗೆ ಒಟಿಪಿಗಳನ್ನು ಕಳಿಸಲಾಗಿದೆ. ಹಾಗೆಯೇ 10 ಸಾವಿರದಷ್ಟು ನಿವೇಶನ ನೋಂದಣಿಗಳು ನಡೆದಿವೆ. ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಅಕ್ರಮ ನಿವೇಶನ ನೋಂದಣಿ ಅವ್ಯಾಹತವಾಗಿದ್ದು ಇವುಗಳನ್ನು ತಡೆಗಟ್ಟಲು ಒಟಿಪಿ ವ್ಯವಸ್ಥೆ ಜಾರಿಗೆ ತರಲಾಗಿದೆ.

ಸರಕಾರಿ ಕೆಲಸಕ್ಕೂ ತಡೆ
ಕೇವಲ ಜಾಗ ಮಾರಾಟ ಪ್ರಕ್ರಿಯೆ ಮಾತ್ರವಲ್ಲದೆ ಗ್ರಾಮ ಪಂಚಾಯತ್‌ ಆಶ್ರಯ ಯೋಜನೆ, ಬ್ಯಾಂಕ್‌ ಸಾಲ, ಅಡಮಾನ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ನೋಂದಣಿ ಅಗತ್ಯ. ಸಾಮಾನ್ಯವಾಗಿ ಪಂಚಾಯತ್‌ ಅಭಿವೃದ್ದಿ ಅಧಿಕಾರಿಗಳು ವಿವಿಧ ಕೆಲಸದಲ್ಲಿದ್ದಾಗ ಸೌಲಭ್ಯ ಪಡೆಯಲು ಜನಸಾಮಾನ್ಯ ಅಭಿವೃದ್ಧಿ ಅಧಿಕಾರಿಯ ಮೊಬೈಲಿಗೆ ಬರುವ ಒಟಿಪಿಗಾಗಿ ಕಾಯಬೇಕಾಗುತ್ತದೆ. ಮಾತ್ರವಲ್ಲದೆ ವ್ಯಾಪ್ತಿ ಪ್ರದೇಶದ ಹೊರಗಡೆ ಇದ್ದಾಗ ಒಟಿಪಿ ದೊರೆಯದೆ ನೋಂದಣಿ ಸಾಧ್ಯವಾಗುವುದಿಲ್ಲ. ಗ್ರಾಮೀಣ ಜನರ ಪರಿಸ್ಥಿತಿ ಅಂತೂ ಹೇಳತೀರದಾಗಿದೆ. ಆರೇಳು ಜನರ ಮೊಬೈಲ್‌ಗ‌ಳಲ್ಲಿ ಕೆಲವು ಹಿರಿಯರು, ಅನಕ್ಷರಸ್ಥರು ಮೊಬೈಲ್‌ ಇಲ್ಲದವರು ಒಟಿಪಿ ಸಮಸ್ಯೆಯಿಂದ ಹೈರಾಣಾಗುವಂತೆ ಮಾಡಿದೆ. ಹೀಗಾಗಿ ಜಾಗ ನೋಂದಣಿ ಸಮಸ್ಯೆಯಾಗಿದೆ.

ವಿದೇಶದಲ್ಲಿದ್ದರೂ ಒಟಿಪಿ ಬೇಕು
ಪಹಣಿ ಪತ್ರದಲ್ಲಿ ಹೆಸರಿರುವ ವ್ಯಕ್ತಿ ಜಿಪಿಎ ಕೊಟ್ಟು ವಿದೇಶದಲ್ಲಿದ್ದರೂ ಆತನ ಮೊಬೈಲ್‌ಗೆ ಬಂದ ಒಟಿಪಿಯನ್ನು ನೀಡುವುದು ಕಡ್ಡಾಯವಾಗಿದೆ. ಕೆಲವೊಮ್ಮೆ ಸಂಪರ್ಕ ಮಾಡಲಾಗದೆ ಜಾಗ ನೋಂದಣಿ ಮುಂದೂಡಲಾಗುತ್ತದೆ. ಇದರಿಂದ ನೋಂದಣಿ ಪ್ರಕ್ರಿಯೆಗೆ ಹರಸಾಹಸ ಪಡುವಂತೆ ಮಾಡುತ್ತದೆ.

ಕಷ್ಟಕರ
ನೋಂದಣಿ ಸಂದರ್ಭ ವ್ಯಕ್ತಿಯ ಮೊಬೈಲ್‌ಗೆ ಬಂದ ಒಟಿಪಿಯನ್ನು ಹಾಕಿದಾಗ ಮಾತ್ರ ನೋಂದಣಿಯಾಗುತ್ತದೆ. ಒಂದಿಬ್ಬರಾದರೆ ಇದರಲ್ಲಿ ಸಮಸ್ಯೆ ಇರದು ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಕೂಡು ಕುಟುಂಬವಾಗಿದ್ದು ಸದಸ್ಯರ ಸಂಖ್ಯೆ 10ಕ್ಕಿಂತಲೂ ಹೆಚ್ಚಿದ್ದರೆ ಪ್ರತಿಯೊಬ್ಬರ ಮೊಬೈಲ್‌ ಒಟಿಪಿಯನ್ನೂ ಸಂಗ್ರಹಿಸಿ ನೀಡಬೇಕಾದ್ದು ಕಷ್ಟಕರವಾಗಿದೆ.

ಏನಿದು ಒಟಿಪಿ?
ಒಟಿಪಿ ಅರ್ಥಾತ್‌ ಒನ್‌ ಟೈಮ್‌ ಪಾಸ್‌ವರ್ಡ್‌ ಇದರ ಪೂರ್ಣ ಹೆಸರು. ಹಲವು ವ್ಯವಸ್ಥೆಯಲ್ಲಿ ಒಟಿಪಿಗಳನ್ನು ಬಳಸಲಾಗುತ್ತದೆ. ಇದು ವ್ಯಕ್ತಿಯನ್ನು ಖಚಿತಪಡಿಸಲು, ನಕಲಿ, ಗರಿಷ್ಠ ಭದ್ರತೆಗಾಗಿ ಇರುವಂತಹ ವ್ಯವಸ್ಥೆ. ನಿವೇಶನ ನೋಂದಣಿ ವೇಳೆ ಮಾರಾಟಗಾರರು, ಖರೀದಿದಾರರು ಮತ್ತು ಸಾಕ್ಷಿಗಳಿಗೆ ಒಟಿಪಿ ಬರುತ್ತದೆ. ಇದನ್ನು ನೀಡಿದ ಅನಂತರವೇ ನೋಂದಣಿ ಯಶಸ್ವಿಯಾಗುತ್ತದೆ. ಈ ಮೂಲಕ ಅಕ್ರಮ ತಡೆಯೊಂದಿಗೆ ದೂರುಗಳು ಬರುವುದನ್ನೂ ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ಸರಕಾರ ಹೇಳಿಕೊಂಡಿದೆ.

ನಿಧಾನ ವ್ಯವಸ್ಥೆ
ಒಟಿಪಿ ಕುರಿತ ಹೊಸ ನಿಯಮದಿಂದಾಗಿ ಹತ್ತು ನಿಮಿಷದಲ್ಲಿ ಮುಗಿಯುವ ಕೆಲಸ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಹೀಗಾಗಿ ಮಾನವ ಶ್ರಮ ವ್ಯರ್ಥವಾಗುವಂತೆ ಮಾಡುತ್ತಿದೆ.
-ಮಂಗೇಶ್‌ ಶ್ಯಾನುಭಾಗ್‌,
ವಕೀಲರು ಬೈಂದೂರು

ನಿಯಮ ಪಾಲನೆ
ಆಡಳಿತ ಸುಧಾರಣೆಗೆ ಹೊಸ ನಿಯಮಗಳು ಸಹಜವಾಗಿದೆ. ಆದರೆ ಈಗಿನ ನಿಯಮಗಳು ನೋಂದಣಿ ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಗುತ್ತಿದೆ. ಇದು ಸರಕಾರದ ನಿಯಮದ ಪ್ರಕಾರ ನಡೆಯುತ್ತಿದೆ. ಹೊಸ ನಿಯಮಗಳಿಗೆ ಜನರು ಹೊಂದಿಕೊಳ್ಳಬೇಕಾಗಿದೆ.
-ನಾಗರಾಜ ನಾಯರಿ, ನೋಂದಣಿ ಅಧಿಕಾರಿ, ಬೈಂದೂರು

-ಅರುಣ್‌ ಕುಮಾರ್‌ ಶಿರೂರು

ಟಾಪ್ ನ್ಯೂಸ್

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.