ಗಣೇಶ-ಮಹಮ್ಮದರ ಅಪರೂಪದ ಅನುಬಂಧ


Team Udayavani, Sep 2, 2019, 5:58 AM IST

anubanda

ಮಲ್ಪೆ ಸಾರ್ವಜನಿಕ ಗಣೇಶೋತ್ಸವದ ಮೂಲ ರೂವಾರಿ ಮಲ್ಪೆಯ ಮಹಮ್ಮದ್‌ ಇಕ್ಬಾಲ್. ಇದು 1971ರಲ್ಲಿ ನಡೆದ ಘಟನೆ. ಮಹಮ್ಮದ್‌ ಇಕ್ಬಾಲ್ ಅವರು ಸಿಂಡಿಕೇಟ್ ಬ್ಯಾಂಕ್‌ನ ಮಲ್ಪೆ ಶಾಖೆಯಲ್ಲಿ ಉದ್ಯೋಗಿಯಾಗಿದ್ದರು. ಇವರ ಸ್ನೇಹಿತ ಶ್ಯಾಮ ಅಮೀನ್‌ ಅವರು ಕಿರಾಣಿ ಅಂಗಡಿ ನಡೆಸುತ್ತಿದ್ದರು. ಇಬ್ಬರೂ ಗಳಸ್ಯ ಕಂಠಸ್ಯ ಸ್ನೇಹಿತರು.

ಒಂದು ದಿನ ಅಂಗಡಿ ಎದುರು ಇಕ್ಬಾಲ್ ನಿಂತುಕೊಂಡಿರುವಾಗ ಕೈಗಾಡಿಯಲ್ಲಿ ವಿವಿಧ ರೀತಿಯ ಸಣ್ಣ ಗಾತ್ರದ ಗಣಪತಿ ವಿಗ್ರಹಗಳನ್ನು ಇರಿಸಿಕೊಂಡು ಮಾರಾಟ ಮಾಡುತ್ತಿದ್ದರು. ಅದನ್ನು ನೋಡಿ ಇಕ್ಬಾಲ್ ಆಕರ್ಷಿತರಾದರು. ಆಗ ಮಲ್ಪೆ ಮಧ್ವರಾಜರ ಹೆಂಚಿನ ಕಾರ್ಖಾನೆಯಲ್ಲಿ ಆವೆ ಮಣ್ಣು ಸಿಗುತ್ತಿತ್ತು. ಇಕ್ಬಾಲ್ ಅವರು ಶ್ಯಾಮ್‌ ಅವರಲ್ಲಿ ತಾವೂ ಒಂದು ಗಣೇಶೋತ್ಸವವನ್ನು ನಡೆಸುವ ಸಲಹೆ ನೀಡಿದರು. ಹೆಂಚಿನ ಕಾರ್ಖಾನೆಗೆ ಹೋಗಿ ಮಣ್ಣು ತಂದರು.

ಶ್ಯಾಮ್‌ ಅವರ ಅಂಗಡಿ ಎದುರು ಎಂ.ಕೆ.ಮಂಜಪ್ಪ ಅವರ ಮನೆ ಆವರಣದಲ್ಲಿ ಇಬ್ಬರೂ ಸೇರಿ ಗಣಪತಿ ವಿಗ್ರಹವನ್ನು ನಿರ್ಮಿಸಿದರು. ಇದು ನಡೆದದ್ದು ಗಣೇಶ ಚತುರ್ಥಿ ದಿನ ತರಾತುರಿಯಲ್ಲಿ. ಸಂಜೆ ಪೂಜೆ ಮಾಡಿ ಆಸುಪಾಸಿನವರು ಒಟ್ಟಾಗಿ ಮಲ್ಪೆಯ ಧಕ್ಕೆ ಪ್ರದೇಶದಲ್ಲಿ ವಿಸರ್ಜನೆ ಮಾಡಿದರು.

‘ಇದು ಒಂದು ವರ್ಷ ಮಾಡಿದರೆ ಸಾಕಾಗದು. ಪ್ರತಿ ವರ್ಷವೂ ಮಾಡಬೇಕು’ ಎಂದು ಪರಿಸರದವರು ಸಲಹೆ ನೀಡಿದಂತೆ ಮರುವರ್ಷದಿಂದ ಎಲ್ಲರೂ ಸೇರಿ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲು ಆರಂಭಿಸಿದರು. ಮರು ವರ್ಷದಿಂದ ವಿಗ್ರಹವನ್ನು ಕಲಾವಿದರಿಂದಲೇ ಮಾಡಿಸಿದರು.

ಇಕ್ಬಾಲ್ ಅವರು 1978ರಲ್ಲಿ ಮಡಿಕೇರಿ, ಅನಂತರ ಬೆಂಗಳೂರಿಗೆ ವರ್ಗವಾದರು. ಈಗ ನಿವೃತ್ತಿಗೊಂಡು 12 ವರ್ಷಗಳಾಗಿವೆ. ಗಣೇಶೋತ್ಸವಕ್ಕೆ ಈಗ 49ನೆಯ ವರ್ಷ ನಡೆಯುತ್ತಿದೆ. ಮುಂದಿನ ವರ್ಷ ಸುವರ್ಣ ಮಹೋತ್ಸವ ಆಚರಿಸಲು ಸಾರ್ವಜನಿಕರು ತುಂಬು ಉತ್ಸಾಹದಿಂದ ಇದ್ದಾರೆ. ಈ ಎಲ್ಲ ವರ್ಷಗಳಲ್ಲಿಯೂ ಎಲ್ಲೇ ಇದ್ದರೂ ಚೌತಿ ದಿನ ಇಕ್ಬಾಲ್ ಗಣೇಶೋತ್ಸವದಲ್ಲಿ ಹಾಜರಿರುತ್ತಿದ್ದರು, ಈಗಂತೂ ಮಲ್ಪೆಯಲ್ಲಿ ನೆಲೆಸಿರುವುದಿಂದ ಇದು ಸಹಜ.

‘ಸಾರ್ವಜನಿಕರು, ಸ್ನೇಹಿತರೆಲ್ಲ ಸೇರಿ ಪ್ರೋತ್ಸಾಹ ನೀಡಿದ್ದರಿಂದ ಇದೆಲ್ಲ ಸಾಧ್ಯವಾಯಿತು. ಅಂದಿನಿಂದ ಇಂದಿನವರೆಗೂ ಸಮಿತಿಯಲ್ಲಿ ಸಕ್ರಿಯನಾಗಿದ್ದೇನೆ. ಆರಂಭದಿಂದ ಇದುವರೆಗೆ ಉತ್ಸವವು ವಿಜೃಂಭಣೆಯಿಂದ ನಡೆಯುತ್ತಿರುವುದು ತುಂಬ ಖುಷಿ ಕೊಡುತ್ತಿದೆ’ ಎನ್ನುತ್ತಾರೆ ಮಹಮ್ಮದ್‌ ಇಕ್ಬಾಲ್ ಅವರು.

ನಿರೂಪಣೆ: ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.