ಸಂಗೀತೋಪಕರಣ ಅಪೂರ್ವ ಸಂಗ್ರಹ


Team Udayavani, Nov 24, 2017, 10:39 AM IST

24-21.jpg

ಉಡುಪಿ: ಧರ್ಮಸಂಸದ್‌ ಆವರಣದಲ್ಲಿ ನಡೆಯುವ ಅಪೂರ್ವ ಹಿಂದೂ ವೈಭವ ಪ್ರದರ್ಶಿನಿಯಲ್ಲಿ ವಿಶಿಷ್ಟ ಸಂಗೀತೋಪಕರಣಗಳ ಸಂಗ್ರಹ ಅನಾವರಣಗೊಂಡಿದೆ.

ಇವು ಹುಬ್ಬಳ್ಳಿಯ ಡಾ| ಗಂಗೂಬಾಯಿ ಹಾನಗಲ್‌ ಸಂಗೀತ ವಸ್ತು ಸಂಗ್ರಹಾಲಯದ ಸಂಗೀತೋಪಕರಣಗಳು. ಉಡುಪಿಗೆ ತಂದವರು ಗಂಗೂಬಾಯಿ ಅವರ ಮೊಮ್ಮಗ ಮನೋಜ ಬಾಬೂರಾವ್‌ ಹಾನಗಲ್‌. ಇದರಲ್ಲಿ ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ವಾದ್ಯಗಳು ಇವೆ. ತಂತಿವಾದ್ಯ, ಚರ್ಮವಾದ್ಯ, ಹವಾ ವಾದ್ಯ, ಮಣ್ಣಿನ ವಾದ್ಯ, ಗಾಜಿನ ವಾದ್ಯ, ಬಾಬೂ ವಾದ್ಯ, ಲೋಹ ವಾದ್ಯ ಹೀಗೆ 200 ವಾದ್ಯಗಳನ್ನು ನೋಡಬಹುದಾಗಿದೆ.

ತಾನಪುರ, ತಂಬೂರಿ, ವೀಣೆ, ಸಿತಾರ, ಸಾರಂಗಿ, ವಯಲಿನ್‌, ರುದ್ರ ವೀಣೆ, ಕಚುವಾ ಸಿತಾರ, ಸರೋದ್‌, ದಿಲ್‌ರುಬ, ಮೆಂಡೊಲಿನ್‌, ಸ್ವರಮಂಡಳ, ಬೀನ, ಬಲ್‌ಬುಲ್‌ ತರಂಗ, ಸುರ ಪೆಟ್ಟಿಗೆ, ಘಟಂ, ಭಜನ ತಾನಪುರ, ತಬಲ, ಡಗ್ಗಾ, ಹಾರ್ಮೋನಿಯಂ, ತಾವುಸ, ಸುರಸೋಟ, ಜಲತರಂಗ, ಏಕತಾರಾ, ಡೊಳ್ಳು, ನಗಾರಿ, ಕುಡಕಿ, ಚೆಂಡೆ, ಶಂಖ, ಸಾಂಬಾಳ, ಸುರಪೆಟ್ಟಿಗೆ, ಕಹಳೆ, ತುಂತುನಿ, ಪುಂಗಿ, ಶಹನಾಯಿ, ಟ್ರಂಪ್‌ಪ್ಯಾಡ್‌, ಬ್ಯಾಂಡ್‌ಸೆಟ್‌, ಬಿಗುಲು, ಗೆಜ್ಜೆ, ಘಂಟೆ, ಕೊಳಲು, ಬೆಂಗಾಲಿ, ಏಕತಾರಾ, ಹಲಗೆ, ಡುಕ್ಕಡ, ಗುಮ್ಮುಟಿ, ಸುರಸೋಟ, ಜಗ್ಗಲಗೆ ಹೀಗೆ ವಿವಿಧ ಚರ್ಮವಾದ್ಯ, ಬುಡಕಟ್ಟು ವಾದ್ಯಗಳಿವೆ.

ವಾದ್ಯ ಸಂಗ್ರಹ ಪ್ರದರ್ಶನಕ್ಕೆ ಸ್ಟೀಫಿನ್‌ ಲುಂಜಾಳ, ರಾಧಿಕಾ ಬನ್ಸೋಡೆ, ಭಾರತಿ ಪತ್ತಾರ, ಓಂಪ್ರಸಾದ ಪತ್ತಾರ, ಅಪೂರ್ವ ಪತ್ತಾರ ಮತ್ತಿತರರು ಶ್ರಮಿಸಿದ್ದಾರೆ. ನೂರಕ್ಕೂ ಹೆಚ್ಚು ವರ್ಷಗಳ ಹಿಂದಿನ ವಾದ್ಯಗಳೂ ಇವೆ. ಉ.ಪ್ರ., ಬಿಹಾರ ಮೊದಲಾದ ರಾಜ್ಯಗಳಿಂದ ಸಂಗ್ರಹಿಸಲಾಗಿದೆ. 2013ರಲ್ಲಿ ಹುಬ್ಬಳ್ಳಿಯಲ್ಲಿ ಆರೆಸ್ಸೆಸ್‌ ಯೋಜಿಸಿದ ಹಿಂದೂ ಸಂಗಮದಲ್ಲಿ 1.5 ಲಕ್ಷ ಜನರು ಸಂಗೀತ ಪರಿಕರಗಳನ್ನು ವೀಕ್ಷಿಸಿ ಸಂತಸ ಪಟ್ಟಿದ್ದರು. ಉಡುಪಿಗೆ ಇದೇ ಪ್ರಥಮ ಬಾರಿಗೆ ಬಂದಿದ್ದೇವೆ ಎಂದು ಮನೋಜ್‌ ಹಾನಗಲ್‌ ತಿಳಿಸಿದ್ದಾರೆ.

ಇದು ಕೇವಲ ಸಂಗೀತಾಸಕ್ತರಿಗೆ ಮಾತ್ರವಲ್ಲದೆ ಇತಿಹಾಸ, ಸಂಸ್ಕೃತಿಪ್ರಿಯರಿಗೂ ಜ್ಞಾನ ವೃದ್ಧಿಗೆ ಪೂರಕ. ನ. 24ರಿಂದ 26ರ ವರೆಗೆ ಈ ಅಪೂರ್ವ ಸಂಗ್ರಹವನ್ನು ವೀಕ್ಷಿಸಬಹುದಾಗಿದೆ.

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.