ವೋಟರ್ ಐಡಿಗೆ ಆಧಾರ್ ಲಿಂಕ್ ಯಾಕೆ ? ಹೇಗೆ ?
Team Udayavani, Aug 20, 2019, 5:16 AM IST
ಮಣಿಪಾಲ: ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವ ಕೇಂದ್ರ ಚುನಾವಣ ಆಯೋಗದ ಕನಸಿಗೆ ಮತ್ತೆ ಮರುಜೀವ ಬಂದಿದೆ. ವರ್ಷಗಳ ಹಿಂದೆಯೇ ಇಂತಹ ದೊಂದು ಪ್ರಸ್ತಾವನೆ ಆಯೋಗದ ಮುಂದೆ ಇತ್ತು. ಆದರೆ ಸುಪ್ರೀಂ ಕೋರ್ಟ್ ಇದಕ್ಕೆ ಬ್ರೇಕ್ ಹಾಕಿದ ಪರಿಣಾಮ ಸ್ವಲ್ಪ ಹಿನ್ನಡೆಯಾಗಿತ್ತು.ಇದೀಗ ಕಾನೂನಿನ ತೊಡಕು ನಿವಾರಿ ಸಲು ಕೇಂದ್ರದ ಮೊರೆ ಹೋಗಿದೆ.
ಆಯೋಗದ ಈ ಕ್ರಮಕ್ಕೆ ಕಳೆದ ವರ್ಷ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿತ್ತು. 1951ರ ಜನಪ್ರತಿನಿಧಿ ಕಾಯಿದೆಗೆ ಇದು ಅಡ್ಡಿಯಾಗುತ್ತದೆ.ಸರಕಾರಿ ಯೋಜನೆಗೆ ಮಾತ್ರ ಆಧಾರ್ ಕಡ್ಡಾಯ ಮಾಡಬೇಕು. ಬೇರೆ ಯೋಜನೆಗಳಿಗೆ ಕಡ್ಡಾಯ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಈಗ ಈ ಕಾಯಿ ದೆಗೆ ತಿದ್ದುಪಡಿ ತಂದು ಈ ಯೋಜನೆ ಜಾರಿಗೊಳಿಸಲು ಚುನಾವಣ ಆಯೋಗ ಕೇಂದ್ರಕ್ಕೆ ಈಗಾಗಲೇ ಮನವಿ ಸಲ್ಲಿಸಿದೆ.
ಆಯೋಗ ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್ ಜತೆ ಲಿಂಕ್ ಮಾಡುವ ಇರಾದೆ ಹೊಂದಿದೆ. ಈಗಾಗಲೇ ಆಧಾರ್ಗೆ ಪಾನ್ ಲಿಂಕ್ ಮಾಡಲಾಗಿದ್ದು, ಈ ಪ್ರಕ್ರಿಯೆಗೆ ವೋಟರ್ ಐಡಿಯನ್ನು ಒಳಪಡಿಸಲು ಆಯೋಗ ಆಸಕ್ತಿ ಹೊಂದಿದೆ. ಈಗಾಗಲೇ ಹೊಸ ಮತದಾರರ ಆಧಾರ್ ಸಂಖ್ಯೆ ಪಡೆಯಲಾಗುತ್ತದೆ.
ಚುನಾವಣ ಆಯೋಗವು 2015ರಲ್ಲಿ ವೋಟರ್ ಐಡಿ ಜತೆ ಆಧಾರ್ ಕಾರ್ಡ್ ಅನ್ನು ಸ್ವಯಂ ಪ್ರೇರಿತವಾಗಿ ಲಿಂಕ್ ಮಾಡಿಸುವವರಿಗೆ ಅವಕಾಶ ಕಲ್ಪಿಸಿತ್ತು. ಈ ವೇಳೆ 32 ಸಾವಿರ ಜನರು ಲಿಂಕ್ ಮಾಡಿಸಿಕೊಂಡಿದ್ದರು ಎಂಬ ಮಾಹಿತಿ ಇದೆ. ಆದರೆ ಸುಪ್ರೀಂ ಕೋಟ್ ಕಳೆದ ಅಕ್ಟೋಬರ್ನಲ್ಲಿ ಇದಕ್ಕೆ ತಡೆ ನೀಡಿತ್ತು. ಬಳಿಕ ಆಯೋಗ ಮುಂದುವರಿಯಲಿಲ್ಲ.ಆದರೆ ಆಧಾರ್ ಜತೆ ವೋಟರ್ ಐಡಿ ಲಿಂಕ್ ಆಗಲು ಈಗಿರುವ ಕಾನೂನಿನ ತೊಡಕು ನಿವಾರಣೆ ಆಗುವ ಸಾಧ್ಯತೆ ಇದೆ.
122 ಕೋಟಿ ಆಧಾರ್ ಕಾರ್ಡ್ ಹೊಂದಿರುವವರು
90 ಕೋಟಿ ವೋಟರ್ ಐಡಿ ಹೊಂದಿರುವವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್