ಸಂಪೂರ್ಣ ಹದಗೆಟ್ಟ ಬೋಳ ಪಾಲಿಂಗೇರಿ ರಸ್ತೆ: ಸಂಚಾರ ದುಸ್ತರ
Team Udayavani, Sep 26, 2019, 5:09 AM IST
ಬೆಳ್ಮಣ್: ಬೆಳ್ಮಣ್ ಇಟ್ಟಮೇರಿಯಿಂದ ಬೋಳ ಮಾರ್ಗವಾಗಿ ಸಚ್ಚೇರಿಪೇಟೆಗೆ ಸಾಗುವ ರಸ್ತೆಯ ಡಾಮರು ಸಂಪೂರ್ಣ ಕಿತ್ತುಗೋಗಿದ್ದು, ಗುಂಡಿ ಗಳಿಂದ ತುಂಬಿರುವ ಕಾರಣ ವಾಹನ ಸಂಚಾರ ದುಸ್ತರವಾಗಿದೆ.
ಗುತ್ತಿಗೆದಾರರ ನಿರ್ಲಕ್ಷ್ಯ: ಆರೋಪ
ಕಳೆದ ನಾಲ್ಕು ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ರಸ್ತೆಯಲ್ಲಿ ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿದ್ದು ರಸ್ತೆ ನಿರ್ವಹಣೆಯ ಬಗ್ಗೆ ನಿರ್ಲಕ್ಷé ಮಾಡುತ್ತಿರುವ ಗುತ್ತಿದಾರರ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಬೋಳದಿಂದ ಸಚ್ಚೇರಿ ಪೇಟೆಯವರೆಗೂ ರಸ್ತೆಯ ಮಧ್ಯ ಭಾಗದಲ್ಲಿ ಅಲ್ಲಲ್ಲಿ ಹೊಂಡಗಳು ನಿರ್ಮಾಣಗೊಂಡ ಪರಿಣಾಮ ಇವುಗಳ ಅರಿವಿಲ್ಲದ ಸವಾರರು ನಿತ್ಯ ಎಡವಟ್ಟು ಮಾಡಿ ಕೊಳ್ಳುತ್ತಿದ್ದಾರೆ.
ಗ್ರಾಮಸ್ಥರ ದೂರು
ಬೋಳ ಪಾಲಿಂಗೇರಿ ಕಿರು ಸೇತುವೆಯ ಸಮೀಪದ ರಸ್ತೆಯೂ ಹದಗೆಟ್ಟಿದ್ದು, ತಿರುವಿನಲ್ಲಿ ವೇಗವಾಗಿ ಬರುವ ವಾಹನ ಸವಾರರು ಸೇತುವೆ ಸಮೀಪ ಆಯ ತಪ್ಪುವ ಎಲ್ಲ ಸಾಧ್ಯತೆಗಳಿವೆ ಎಂಬುದು ಗ್ರಾಮಸ್ಥರ ದೂರು.
ಕೂಡಲೇ ಈ ರಸ್ತೆ ದುರಸ್ತಿಯ ಜತೆ ನಿರ್ವ ಹಣೆಯನ್ನೂ ಸಂಬಂಧಪಟ್ಟ ಗುತ್ತಿಗೆದಾರರು ನಡೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕ್ರಮ ಕೈಗೊಳ್ಳಿ
ತೀರಾ ಹದಗೆಟ್ಟಿರುವ ಈ ರಸ್ತೆಯ ಬಗ್ಗೆ ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷéದ ಬಗ್ಗೆ ಆಕ್ರೋಶ ಇದೆ. ಜನರು ತಾಳ್ಮೆ ಕೆಟ್ಟು ಬೀದಿಗಿಳಿಯುವ ಮುನ್ನ ಈ ಬಗ್ಗೆ ಕ್ರಮ ಕೈಗೊಳ್ಳಿ.
-ವಿನೋದ್ ಕುಮಾರ್, ಗ್ರಾಮಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ