ಉಡುಪಿ: ಡಿವೈಡರ್ಗೆ ಸ್ಕೂಟರ್ ಢಿಕ್ಕಿ ; ಸವಾರೆ ಸಾವು
Team Udayavani, Jun 16, 2022, 7:55 PM IST
ಉಡುಪಿ: ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಲಾಯಿಸಿ ಡಿವೈಡರ್ಗೆ ಢಿಕ್ಕಿ ಹೊಡೆದು ಸವಾರೆ ಸಾವನ್ನಪ್ಪಿದ್ದು, ಸಹ ಸವಾರೆ ಗಾಯಗೊಂಡಿದ್ದಾರೆ.
ಮಣಿಪಾಲದ ಎಂ.ವರ್ಷಿಣಿ ಹಾಗೂ ಸ್ನೇಹಿತೆ ಹಿಂದುಜಾ ಅವರೊಂದಿಗೆ ಮಣಿಪಾಲ ಟೈಗರ್ ಸರ್ಕಲ್ ಕಡೆಯಿಂದ ಸಿಂಡಿಕೇಟ್ ಸರ್ಕಲ್ ಕಡೆಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ತಲೆಗೆ ತೀವ್ರ ಏಟುಬಿದ್ದು ಹಿಂದುಜಾ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೆ, ವರ್ಷಿಣಿ ಅವರಿಗೆ ಗಾಯವಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.