ಟ್ರಾಕ್ಟರ್ -ಕಂಟೈನರ್ ಢಿಕ್ಕಿ: ಚಾಲಕರಿಗೆ ಗಾಯ
Team Udayavani, Mar 13, 2019, 1:00 AM IST
ಬ್ರಹ್ಮಾವರ: ಆಕಾಶವಾಣಿ ಬಳಿ ಮಂಗಳವಾರ ಬೆಳಗ್ಗೆ ಕಂಟೈನರ್ ಲಾರಿ ಟ್ರಾಕ್ಟರ್ಗೆ ಢಿಕ್ಕಿ ಹೊಡೆಯಿತು. ಬ್ರಹ್ಮಾವರದಿಂದ ಕುಂದಾಪುರ ಕಡೆ ತೆರಳುತ್ತಿದ್ದ ಕಂಟೈನರ್ ರಾ.ಹೆ. ಡಿವೈಡರ್ನಲ್ಲಿರುವ ಹುಲ್ಲು ವಿಲೇವಾರಿ ಮಾಡುತ್ತಿದ್ದ ಟ್ರಾಕ್ಟರ್ಗೆ ಢಿಕ್ಕಿ ಹೊಡೆಯಿತು. ಘಟನೆಯಲ್ಲಿ ಟ್ರಾಕ್ಟರ್ ಚಾಲಕ ಮನೋಹರ, ಕಾರ್ಮಿಕ ನಿತಿಲೇಶ್ ಹಾಗೂ ಕಂಟೈನರ್ ಚಾಲಕ ಅಶೋಕ್ ಕುಮಾರ್ ಗಾಯಗೊಂಡರು.
8 ಕಾರ್ಮಿಕರು ಡಿವೈಡರ್ ಮೇಲಿನ ಹುಲ್ಲನ್ನು ಕಿತ್ತು ಟ್ರಾಕ್ಟರ್ಗೆ ತುಂಬಿಸುತ್ತಿದ್ದರು. ಈ ಸಂದರ್ಭ ಕಂಟೈನರ್ ಸುಮಾರು 15 ಅಡಿ ದೂರದಲ್ಲಿ ದುರಸ್ಥಿ ಕಾರ್ಯದ ಬಗ್ಗೆ ಇಟ್ಟಿದ್ದ ಬ್ಯಾರಿಕೇಡ್ಗೆ ಢಿಕ್ಕಿ ಹೊಡೆದು ಟ್ರಾಕ್ಟರ್ಗೆ ಢಿಕ್ಕಿ ಹೊಡೆ ಯಿತು. ಎರಡೂ ವಾಹನಗಳು ಜಖಂಗೊಂಡಿವೆ.ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.