ಕಾರ್ಕಳ: ಸಾಧಕ ಶಿಕ್ಷಕ, ವಿದ್ಯಾರ್ಥಿಗಳಿಗೆ ಸಮ್ಮಾನ
Team Udayavani, Oct 10, 2019, 5:56 AM IST
ಕಾರ್ಕಳ: ಕರ್ನಾಟಕ ರಾಜ್ಯ ಎಸ್.ಸಿ., ಎಸ್.ಟಿ. ಪ್ರಾಥಮಿಕ, ಮಾಧ್ಯ ಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಕಾರ್ಕಳ ಶಾಖೆ ಇದರ ವತಿಯಿಂದ ಬಂಡಿಮಠ ಸರಕಾರಿ ನೌಕರರ ಸಭಾ ಭವನ ದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನ ಕಾರ್ಯಕ್ರಮ ಅ. 5ರಂದು ನಡೆಯಿತು.
ಅಕ್ಷರದಾಸೋಹ ವಿಭಾಗದ ಸಹಾಯಕ ನಿರ್ದೇಶಕ ಭಾಸ್ಕರ್ ಟಿ. ಕಾರ್ಯಕ್ರಮ ಉದ್ಘಾಟಿಸಿದರು. ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ.ಜಾ., ಪ.ಪಂಗಡದ ವಿದ್ಯಾರ್ಥಿಗಳು ಮತ್ತು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆ ಗಳಲ್ಲಿ ವಿಶೇಷ ಸಾಧನೆ ಮಾಡಿದ ಶಿಕ್ಷಕರನ್ನು ಸಮ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ವಿಜಯ ಕುಮಾರ್ ಪಿ. ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿಗಳಾದ ಅಕ್ಷತಾ, ಗುರುರಾಜ್, ಶಿಕ್ಷಕರಾದ ಶಂಕರ್ ಪುನರ್ಕೆರೆ, ರಂಗಸ್ವಾಮಿ ಕೊಡಂಗೈ, ಕಮಲಾಕ್ಷಿ ಬೋರ್ಗಲ್ಗುಡ್ಡೆ, ಅಣ್ಣಿ ಎಂ. ಹೆರ್ಮುಂಡೆ, ಚಂಪಕಾ ಹೆಬ್ರಿ, ಶಿವಾನಂದ ನಿಟ್ಟೆ , ಪ್ರಜ್ಞಾ ಎಸ್. ಕೂಡಬೆಟ್ಟು, ಬಾಳಪ್ಪ ಶೇಕುಗೋಳ ಶಿರ್ಲಾಲು ಅವರನ್ನು ಸಮ್ಮಾನಿಸಲಾಯಿತು.
ಮೈಸೂರು ವಿಭಾಗೀಯ ಮಟ್ಟದ ಸಂ.ಸ. ಅಂಬೇಡ್ಕರ್ವಾದ ಸಂಘಟನ ಸಂಚಾಲಕ ಹೂಮಪ್ಪ ಮಾಸ್ಟರ್, ಎಸ್.ಸಿ., ಎಸ್.ಟಿ. ಸಂಘದ ಪದಾಧಿಕಾರಿಗಳಾದ ಫಕೀರಪ್ಪ, ಶಾಂತಪ್ಪ, ಬೇಬಿ, ಲತಾ, ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ಬಿ.ಬಿ., ಸರಕಾರಿ ಪ್ರಾ.ಶಾ. ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ಹೆಗ್ಡೆ ಉಪಸ್ಥಿತರಿದ್ದರು.
ಅಣ್ಣಿ ಎಂ. ಸ್ವಾಗತಿಸಿ, ಭುಜಂಗ ನಿರೂಪಿಸಿದರು. ಸಣ್ಣು ವಂದಿಸಿದರು.