ಅದಮಾರು ಪರ್ಯಾಯ: ಪ್ಲಾಸ್ಟಿಕ್ಮುಕ್ತ ಅಭಿಯಾನ
ಬ್ಯಾನರ್ ವಸ್ತ್ರ, ಪೋಸ್ಟರ್ಗೆ ಕಾಗದ ಬಳಕೆ
Team Udayavani, Dec 10, 2019, 4:51 AM IST
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಜನವರಿಯಲ್ಲಿ ನಡೆಯಲಿರುವ ಅದಮಾರು ಮಠದ ಪರ್ಯಾಯೋತ್ಸವದಲ್ಲಿ ಪರಿಸರ ಜಾಗೃತಿಗೆ ಗಮನ ಹರಿಸಲಾಗುತ್ತಿದ್ದು, ಪ್ಲಾಸ್ಟಿಕ್ ನಿರ್ಮೂಲನಕ್ಕೆ ಸಾರ್ವಜನಿಕ ಜಾಗೃತಿ ಮೂಡಿಸಲಾಗುವುದು ಎಂದು ಶ್ರೀಕೃಷ್ಣ ಸೇವಾ ಬಳಗದ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪರ್ಯಾಯೋತ್ಸವ ಸಂದರ್ಭ ಪ್ಲಾಸ್ಟಿಕ್ ಅಥವಾ ಪ್ಲಾಸ್ಟಿಕ್ಮಿಶ್ರಿತ ಬ್ಯಾನರ್, ಫ್ಲೆಕ್ಸ್ ಹಾಕದೆ ಇರಲು ನಿರ್ಧರಿಸಲಾಗಿದೆ. ವಸ್ತ್ರದ ಬ್ಯಾನರ್ಗಳನ್ನೇ ಉಪಯೋಗಿಸಲಾಗುತ್ತಿದೆ. ಪೋಸ್ಟರ್ಗಳನ್ನು ಕಾಗದದಿಂದ ತಯಾರಿಸಲಾಗುವುದು. ಪ್ಲಾಸ್ಟಿಕ್ನಿಂದ ತಯಾರಾಗುವ ವಸ್ತುಗಳನ್ನು ಸಂಪೂರ್ಣ ನಿಷೇಧಿಸಲು ಪ್ರಯತ್ನಿಸಲಾಗುವುದು. ಈ ಮೂಲಕ “ಸ್ವಚ್ಛ ಉಡುಪಿ’ ಸಂದೇಶ ಸಾಕಾರಗೊಳ್ಳಬೇಕು ಎಂದು ಕಟೀಲಿನ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಸ್ವಾಮೀಜಿಯವರ ಪುರಪ್ರವೇಶ ಮತ್ತು ಪರ್ಯಾಯೋತ್ಸವದಲ್ಲಿ ಮೆರವಣಿಗೆ ಬರುವ ಇಕ್ಕೆಲಗಳನ್ನು ತಳಿರು ತೋರಣ, ದೀಪ, ರಂಗವಲ್ಲಿಗಳಿಂದ ಸಿಂಗರಿಸಬೇಕು. ಮೆರವಣಿಗೆ ಯಲ್ಲಿ ಕುಣಿತದ ಭಜನೆಗೆ ಅವಕಾಶವಿದ್ದು, ಆಸಕ್ತ ತಂಡಗಳು ಅದಮಾರು ಮಠದ ಶ್ರೀಕೃಷ್ಣ ಸೇವಾ ಬಳಗದ ಕಚೇರಿಯಲ್ಲಿ ಹೆಸರು ನೋಂದಾಯಿಸಬಹುದು ಎಂದರು.
ಪರ್ಯಾಯದ ಟ್ಯಾಬ್ಲೊ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ವಾಗತ ಕಮಾನು ಗಳನ್ನು ನೀಡಬಯಸುವವರು, ಆಸಕ್ತ ಸ್ವಯಂಸೇವಕರು, ಸಂಘ-ಸಂಸ್ಥೆಗಳು ಶ್ರೀಕೃಷ್ಣ ಸೇವಾ ಬಳಗದ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಯಶಪಾಲ್ ಸುವರ್ಣ ಅವರು ವಿನಂತಿಸಿದರು.
ಜ. 17ರ ರಾತ್ರಿ ಪರ್ಯಾಯೋತ್ಸವದ ಸಂದರ್ಭ ನಗರದ ವಿವಿಧೆಡೆಗಳಲ್ಲಿ ಆಯೋಜಿಸುವ ಮನೋರಂಜನ ಕಾರ್ಯಕ್ರಮಗಳು ಧಾರ್ಮಿಕ ಮತ್ತು ಭಾರತೀಯ ಸಂಸ್ಕೃತಿಯ ಚೌಕಟ್ಟಿನೊಳಗೆ ಇರಲಿ ಎಂದು ಆಶಿಸಿದರು.
ಯು.ಕೆ. ರಾಘವೇಂದ್ರ ರಾವ್, ವೈ.ಎನ್. ರಾಮಚಂದ್ರ ರಾವ್, ಅನಂತ ನಾಯಕ್, ಸಂತೋಷ್, ಶ್ರೀಪತಿ, ಪ್ರದೀಪ್ ರಾವ್, ರಾಮಚಂದ್ರ ಆಚಾರ್ಯ, ಅದಮಾರು ಮಠದ ವ್ಯವಸ್ಥಾಪಕ ರಾಘವೇಂದ್ರ ರಾವ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಜ. 8: ಅದಮಾರು ಸ್ವಾಮೀಜಿಗಳ ಪುರಪ್ರವೇಶ
ಅದಮಾರು ಸ್ವಾಮೀಜಿಯವರ ಪುರಪ್ರವೇಶದ ಮೆರವಣಿಗೆ ಜ. 8ರ ಅಪರಾಹ್ನ 3ಕ್ಕೆ ಜೋಡುಕಟ್ಟೆಯಿಂದ ಆರಂಭವಾಗಲಿದೆ. ಸಂಜೆ 5.45ಕ್ಕೆ ಅದಮಾರು ಮಠವನ್ನು ಪ್ರವೇಶಿಸುವರು. ಮೆರವಣಿಗೆ ತೆಂಕಪೇಟೆ ಮಾರ್ಗವಾಗಿ ಬರಲಿದೆ.
ಪ್ರತಿ 15 ದಿನಗಳಿಗೊಮ್ಮೆ ಹೊರೆಕಾಣಿಕೆ ಸ್ವೀಕಾರ
ಹೊರೆಕಾಣಿಕೆಯನ್ನು ಏಕಕಾಲದಲ್ಲಿ ಸ್ವೀಕರಿಸುವ ಬದಲು ಪ್ರತಿ 15 ದಿನಗಳಿಗೊಮ್ಮೆ ಸ್ವೀಕರಿಸಲು ನಿರ್ಧರಿಸಲಾಗಿದ್ದು ಜ. 15ರಂದು ಅದಮಾರು, ಮಲ್ಪೆ, ಕೊಡವೂರು, ಮಟ್ಟು ಗ್ರಾಮದ ಗ್ರಾಮಸ್ಥರಿಂದ ಮೊದಲ ಹೊರೆಕಾಣಿಕೆ ಸಮರ್ಪಣೆಯಾಗಲಿದೆ. ಪ್ರತಿ 15 ದಿನಗಳಿಗೊಮ್ಮೆ ಹೊರೆಕಾಣಿಕೆ ಸಮರ್ಪಣೆಯಾದರೆ ಗ್ರಾಮಸ್ಥರೊಂದಿಗೆ ಸ್ವಾಮೀಜಿಯವರಿಗೆ ಮಾತುಕತೆ ನಡೆಸಿ ಪ್ರಸಾದ ನೀಡಲು ಅವಕಾಶವಾಗುತ್ತದೆ ಎಂದು ಪುರಾಣಿಕ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು