ಪರ್ಕಳ-ಹೆರ್ಗ ವ್ಯಾಪ್ತಿಯಲ್ಲಿ ಏರಿಯಲ್‌ ಬಂಚಡ್‌ ಕೇಬಲ್‌ ಅಳವಡಿಕೆ


Team Udayavani, May 15, 2018, 6:50 AM IST

0405kdua1.jpg

ಪರ್ಕಳ:ಅನೇಕ ವರ್ಷಗಳಿಂದ  ವಿದ್ಯುತ್‌ ಪೂರೈಕೆಯಲ್ಲಿ  ಆಗುವ ತೊಂದರೆಗಳಿಂದ  ಅನಿಶ್ಚಿತತೆಯನ್ನು ಅನುಭವಿಸುತ್ತಿದ್ದ  ಉಡುಪಿ ನಗರಸಭಾ ವ್ಯಾಪ್ತಿಯ  ಗ್ರಾಮೀಣ ಪ್ರದೇಶವಾದ  ಪರ್ಕಳ-ಹೆರ್ಗ ವ್ಯಾಪ್ತಿಯ ಗ್ರಾಹಕರ ಸಮಸ್ಯೆಗೆ ಇನ್ನು ಮುಕ್ತಿ. 

ಕಾರಣ ವಿದ್ಯುತ್‌ ಪೂರೈಕೆಯಲ್ಲಿ ನಿರಂತರತೆ, ಸುರಕ್ಷತೆ, ಸೋರಿಕೆ ತಡೆಗಟ್ಟಲು ಮೆಸ್ಕಾಂ ಇಲ್ಲಿ ಏರಿಯಲ್‌ ಬಂಚಡ್‌ ಕೇಬಲ್‌ನ್ನು ಅಳವಡಿಸಲು ಮುಂದಾಗಿದೆ. ಈ ಮಳೆಗಾಲದ ಮುನ್ನ  ಈ ಕಾಮಗಾರಿಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಏನಿದು ಏರಿಯಲ್‌ ಬಂಚಡ್‌ ಕೇಬಲ್‌? 
ಈಗಿರುವ ವಿದ್ಯುತ್‌ ಕಂಬಗಳಿಗೆ ದಪ್ಪ ಫೈಬರ್‌ ಕೋಟಿಂಗ್‌ ಇರುವ ಕೇಬಲ್‌ಗ‌ಳ ಮೂಲಕ ವಿದ್ಯುತ್‌ ಸರಬರಾಜು ಮಾಡುವ ವಿಧಾನ ಇದಕ್ಕೆ ಏರಿಯಲ್‌ ಬಂಚಡ್‌ ಕೇಬಲ್‌ (ಎಬಿಸಿ ) ತಂತ್ರಜ್ಞಾನ ಎನ್ನುತ್ತಾರೆ. ಈಗಾಗಲೇ ಇದನ್ನು ಬೆಂಗಳೂರಿನಂತಹ ನಗರಗಳಲ್ಲಿ ಅಳವಡಿಸಿಕೊಳ್ಳಲಾಗಿದೆ.
 
ನಿರಂತರ ದೂರು
ಉಡುಪಿ ನಗರಸಭಾ ವ್ಯಾಪ್ತಿಯ ಪರ್ಕಳ, ಹೆರ್ಗ ಪರಿಸರದಲ್ಲಿ  ಮಳೆಗಾಲ, ಬೇಸಿಗೆಯನ್ನದೇ  ರಾತ್ರಿ ವೇಳೆ ವಿದ್ಯುತ್‌ಪೂರೈಕೆ  ಕಡಿತಗೊಂಡರೆ ಮತ್ತೆ  ಮರಳಿ ವಿದ್ಯುತ್‌ ಪೂರೈಕೆಯಾಗುವುದೇ ಬೆಳಗ್ಗೆಯ ಅನಂತರವೇ. ಮೆಸ್ಕಾಂ ಇಲಾಖೆಗೆ ಈ ಕುರಿತು ನಿರಂತರ ದೂರುಗಳು ಬಂದಿದ್ದರೂ  ಯಾವುದೇ ಪ್ರಯೋಜನ ವಾಗಿರಲಿಲ್ಲ. ಆದರೆ ಹಲವಾರು ಕಾರಣಗಳನ್ನು ಮುಂದಿಟ್ಟುಕೊಂಡು ಈ ತನಕ ತನ್ನ ನಿಲುವನ್ನು ಪ್ರಕಟಿಸುತ್ತಾ ಬಂದಿರುವ ಇಲಾಖೆ ಈ ತೊಂದರೆಗಳನ್ನು  ನಿವಾರಿಸುವಲ್ಲಿ  ಇಲಾಖೆ ಬೇರೆ ನಗರಗಳಲ್ಲಿ  ಅಳವಡಿಸಿದಂತೆ ಪರ್ಕಳ ವ್ಯಾಪ್ತಿಯ ಗ್ರಾಮೀಣ ಪ್ರದೇಶದ  ಮುಖ್ಯ ಲೈನ್‌ಗಳಲ್ಲಿ  ಎಬಿಸಿಯನ್ನು  ಅಳವಡಿಸಲು ಮುಂದಾಗಿದೆ.

ಏನು ಪ್ರಯೋಜನ? 
ಏರಿಯಲ್‌ ಬಂಚ್‌ಡ್‌ ಕೇಬಲ್‌ಗ‌ಳಿಂದ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಆರ್ಥಿಕವಾಗಿ ಬಹಳಷ್ಟು ಉಳಿತಾಯವಾಗಲಿದೆ, ವಿದ್ಯುತ್‌ ಹರಿವಿನ ಸಂದರ್ಭದಲ್ಲಿ ಆಗುವ ನಷ್ಟವನ್ನು ತಡೆಗಟ್ಟುತ್ತದೆ.  ಗ್ರಾಮೀಣ ಪ್ರದೇಶಗಳಿಗೆ ಮಾದರಿ ಯೋಜನೆಯಾಗಿದ್ದು ವಿಭಿನ್ನ ಭೌಗೋಳಿಕ ಪ್ರದೇಶದಲ್ಲಿಯೂ ಸುಲಭವಾಗಿ ಅಳವಡಿಸಬಹುದು. ಈ ಕೇಬಲ್‌ ಅಳವಡಿಸುವುದರಿಂದ ಗ್ರಾಮೀಣ ಪ್ರದೇಶದಲ್ಲಿ  ಜೋರಾದ ಗಾಳಿಯಿಂದಾಗಿ ಮರಗಳ ಉರುಳುವಿಕೆ ಮೊದಲಾದ ಅನಾಹುತಗಳು ನಡೆದರೂ ನಿರಾಂತಕ ವಿದ್ಯುತ್‌ ಸರಬರಾಜನ್ನು ಪಡೆಯಬಹುದಾಗಿದೆ.  ವಿದ್ಯುತ್‌ ತಂತಿಗಳಿಗೆ ಫೈಬರ್‌ ಕೋಟಿಂಗ್‌ ಇರುವುದರಿಂದ ವಿದ್ಯುತ್‌ ಸೋರುವಿಕೆಯನ್ನು ತಡೆಗಟ್ಟಬಹುದಾಗಿದೆ. ಅಲ್ಲದೇ ನಿರ್ವಹಣೆಯೂ ಸುಲಭವಾಗಿದೆ.

ಸುರಕ್ಷತೆಗೆ ಆಧ್ಯತೆ
ಮೆಸ್ಕಾಂ ವ್ಯಾಪ್ತಿಯಲ್ಲಿ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಲಾಗುತ್ತಿದೆ. ಸುರಕ್ಷತೆ ದೃಷ್ಠಿಯಿಂದ ವಿತರಣಾ ವ್ಯವಸ್ಥೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಉಡುಪಿ ನಗರಸಭಾ ವ್ಯಾಪ್ತಿಯ ಪರ್ಕಳ, ಹೆರ್ಗ ವ್ಯಾಪ್ತಿಯ ಮುಖ್ಯ ಲೈನ್‌ಗಳಲ್ಲಿ  ಏರಿಯಲ್‌ ಬಂಚ್‌ ಕೇಬಲ್‌ನ್ನು ಅಳವಡಿಸಲಾಗುತ್ತದೆ. ಮತ್ತು ನಿರಂತರ ವಿದ್ಯುತ್‌ ಪೂರೈಕೆಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ 
– ಸುಕೇಶ್‌, 
ಜ್ಯೂನಿಯರ್‌ ಇಂಜಿನಿಯರ್‌ ಮೆಸ್ಕಾಂ, ಪರ್ಕಳ.

ರಾತ್ರಿ ವಿದ್ಯುತ್‌ ಸಮಸ್ಯೆ
ಹಲವಾರು ವರ್ಷಗಳಿಂದ ನಮ್ಮ ಪರಿಸರದಲ್ಲಿ  ವಿದ್ಯುತ್‌ ಪೂರೈಕೆಯಲ್ಲಿ  ಸಾಕಷ್ಟು  ಅನಿಶ್ಚತತೆಯನ್ನು ಅನುಭವಿಸುತ್ತಿರುವ ನಾವು ಈಗಾಗಲೇ ಇಲಾಖೆಗೆ ಮನವಿ ನೀಡುತ್ತಾ ಬಂದಿದ್ದೇವೆ. ಈ ಪರಿಸರದಲ್ಲಿ ರಾತ್ರಿ ವೇಳೆ ವಿದ್ಯುತ್‌ ನಿಲುಗಡೆಯಾದರೆ ಮತ್ತೆ ಚಾಲನೆಯಾಗುವುದು ಮರುದಿನ ಬೆಳಗ್ಗೆಯ ನಂತರವೇ. ಈ ಸಮಸ್ಯೆಯನ್ನು ಪರಿಹರಿಸಲು  ಇಲಾಖೆ ಕ್ರಮ ತೆಗೆದುಕೊಳ್ಳಬೇಕು.
– ಸದಾನಂದ ಕೆ.ಸ್ಥಳೀಯರು

– ಉದಯ ಆಚಾರ್‌ ಸಾಸ್ತಾನ

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.