“ಡಿಜಿಟಲ್‌ ಮಾಧ್ಯಮದಿಂದ ಸರ್ವ ಮಾಹಿತಿ’

ಅಂತಾರಾಷ್ಟ್ರೀಯ ಸಾಹಿತ್ಯ - ಕಲೆಗಳ ವೇದಿಕೆ "ಮಿಲಾಪ್‌-2019'

Team Udayavani, Nov 10, 2019, 5:19 AM IST

091119Astro01

ಉಡುಪಿ: ಸುಮಾರು 50 ಸಾವಿರಕ್ಕೂ ಅಧಿಕ ಸಾಹಿತ್ಯ ಪುಸ್ತಕಗಳು ಇಂದು ಏಕಕಾಲ ದಲ್ಲಿ ಲಭ್ಯವಾಗುವುದಕ್ಕೆ ಡಿಜಿಟಲ್‌ ಮಾಧ್ಯಮ ಕಾರಣ. ತಂತ್ರಜ್ಞಾನ ಬದಲಾದಂತೆ ನಾವು ಅದಕ್ಕೆ ಹೊಂದಿ ಕೊಳ್ಳಬೇಕು. ಕಾಲೇಜುಗಳಲ್ಲೂ ಸಾಹಿತ್ಯಕ್ಕೆ ಪ್ರೋತ್ಸಾಹ ಸಿಗಬೇಕು ಎಂದು ಮಾಹೆ ಕುಲಪತಿ ಡಾ| ಎಚ್‌. ವಿನೋದ ಭಟ್‌ ಹೇಳಿದರು.

ಮಣಿಪಾಲ ಮಾಹೆ ವಿ.ವಿ. ವತಿಯಿಂದ ಟಿಎಂಎ ಪೈ ಸಭಾಂಗಣ ದಲ್ಲಿ ಶನಿವಾರ ನಡೆದ ಮಣಿಪಾಲ ಅಂತಾರಾಷ್ಟ್ರೀಯ ಸಾಹಿತ್ಯ ಮತ್ತು ಕಲೆಗಳ ವೇದಿಕೆ
“ಮಿಲಾಪ್‌-2019′ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಓದುಗರಲ್ಲಿದ್ದ ಕಾಗದ, ಪೆನ್ನು, ಪುಸ್ತಕಗಳು ಇಂದು ಮಾಯವಾಗಿ ಆ ಜಾಗವನ್ನು ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌ಗಳು ಆವರಿಸಿವೆ. ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಹವ್ಯಾಸ ಈ ಹಿಂದೆ ಇತ್ತು. ಆದರೆ ಈಗ ವೆಬ್‌ಲಿಂಕ್‌ಗಳ ಮೂಲಕ ಎಲ್ಲೆಂದರಲ್ಲಿ ಸುಲಭವಾಗಿ ನೋಡಲು ಸಾಧ್ಯ ವಾಗುತ್ತದೆ. ಇದೆಲ್ಲವೂ ತಂತ್ರಜ್ಞಾನ ಆವಿಷ್ಕಾರಗಳಿಂದ ಸಾಧ್ಯವಾಗಿದೆ ಎಂದರು.

ಖ್ಯಾತ ನಾಟಕ ನಿರ್ದೇಶಕ ಮಹೇಶ್‌ ದತ್ತಾನಿ ಉದ್ಘಾಟಿಸಿದರು. ರವಿವರ್ಮ, ಪಿಕಾಸೋ, ಅವರ ಕಲಾಕೃತಿಗಳು ತಂತ್ರಜ್ಞಾನಕ್ಕಿಂತಲೂ ಮಿಗಿಲಾಗಿ ಕಥೆಗಳನ್ನು ತಿಳಿಸುತ್ತವೆ. ಇಂತಹ ಸೃಜನಶೀಲ ಕಲೆಯನ್ನು ಅವರು ಆ ಕಾಲದಲ್ಲಿ ಅರಗಿಸಿಕೊಂಡಿದ್ದರು. ಆದರೆ ಇಂದು ಅಂತಹ ಇತಿಹಾಸ, ಯಂತ್ರಗಳನ್ನು ಸೃಷ್ಟಿಸಲು ಕಲಾವಿದರ ಬದಲು ತಂತ್ರಜ್ಞಾನದ ಮೊರೆಹೋಗಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕಲಾವಿದ ಮಹೇಶ್‌ ಮಲ್ಪೆ ಅವರು ಪಿಕ್ಸೆಲ್‌ ಆರ್ಟ್‌ ಮೂಲಕ ಡಾ| ಗಿರೀಶ್‌ ಕಾರ್ನಾಡ್‌ ಅವರ ಚಿತ್ರ ರಚಿಸಿ ಗಮನಸೆಳೆದರು.

ಮಾಹೆ ಯುರೋಪಿಯನ್‌ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ| ನೀತಾ ಇನಾಂದಾರ್‌, ಕಮಲಾಕರ ಭಟ್‌ ಉಪಸ್ಥಿತರಿದ್ದರು.

ಸಂವಾದ
ಸಾಹಿತಿ ಅಮೃತ್‌ ಗಂಗಾಧರ್‌, ನಾಟಕ ನಿರ್ದೇಶಕ ಬಿ.ಆರ್‌. ವೆಂಕಟರಮಣ ಐತಾಳ, ಪ್ರಕಾಶ್‌ ಬೆಳವಾಡಿ, ಟಿ.ಪಿ. ಅಶೋಕ್‌ ಅವರು ಸಾಹಿತಿ ಗಿರೀಶ್‌ ಕಾರ್ನಾಡ್‌ ಅವರ ನೆನಪುಗಳು ಮತ್ತು ಆಧುನಿಕತೆ ಕುರಿತ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದೇ ಕಟ್ಟಡದ ವಿವಿಧೆಡೆ ನಡೆದವು.

ಪುಸ್ತಕ ಬಿಡುಗಡೆ
ಮಣಿಪಾಲ ಯುನಿವರ್ಸಲ್‌ ಪ್ರಸ್‌ ಪ್ರಕಾಶನದ ಪ್ರೊ| ಎಚ್‌.ಎಸ್‌. ಶಿವಪ್ರಕಾಶ ಅವರ “ದ ವರ್ಲ್ಡ್ ಇನ್‌ ದ ವರ್ಲ್ಡ್’, ಡಾ| ಸಯನ್‌ ಡೇ ಅವರ “ಡಿಕೊಲೊನಿಯಲ್‌ ಎಕ್ಸಿಸ್ಟೆನ್ಸ್‌ ಆ್ಯಂಡ್‌ ಅರ್ಬನ್‌ ಸೆನ್ಸಿಬಿಲಿಟಿ- ಅ ಸ್ಟಡಿ ಆನ್‌ ಮಹೇಶ್‌ ಎಲಕುಂಚವಾರ್‌’ ಮತ್ತು ಪ್ರೊ| ಎನ್‌. ಮನು ಚಕ್ರವರ್ತಿ ಅವರ “ಕಲ್ಚರ್‌ ಆ್ಯಂಡ್‌ ಕ್ರಿಯೇಟಿವಿಟಿ’ ಎಂಬ ಮೂರು ಪುಸಕ್ತಗಳು ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡವು.

ಟಾಪ್ ನ್ಯೂಸ್

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ ಅಡಿಗೆ ಸಿಲುಕಿದ ಬೈಕ್; ಯಕ್ಷಗಾನ ಕಲಾವಿದ ಸ್ಥಳದಲ್ಲೇ ಮೃತ್ಯು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.