ಅಂಬಲಪಾಡಿ ಮಜ್ಜಿಗೆ ಪಾದೆ 10 ಎಕ್ರೆ ವಿಸ್ತೀರ್ಣದಲ್ಲಿ ಗದ್ದೆಗೆ ಬೆಂಕಿ
Team Udayavani, Jun 10, 2019, 6:08 AM IST
ಮಲ್ಪೆ: ಅಂಬಲಪಾಡಿಯ ಕಿದಿಯೂರು ಮಜ್ಜಿಗೆಪಾದೆ ಬಳಿ ರವಿವಾರ ಸಂಜೆ ವಿದ್ಯುತ್ ಶಾರ್ಟ್ ಸರ್ಕ್ನೂಟ್ನಿಂದಾಗಿ ಗದ್ದೆಗೆ ಬೆಂಕಿ ತಗಲಿ ಸುತ್ತಲೂ ಹರಡಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಸುಮಾರು 10 ಎಕ್ರೆಗಳಷ್ಟು ವಿಸೀ¤ರ್ಣದಲ್ಲಿ ಬೆಂಕಿ ಹರಡಿದ್ದು, ಈ ವೇಳೆ ವೇಗವಾಗಿ ಗಾಳಿ ಬೀಸುತ್ತಿದ್ದುದರಿಂದ ಹೊಗೆ ಎದ್ದು ಕೆಲವು ಕಿ. ಮೀ. ದೂರದವರೆಗೂ ಅವರಿಸಿದೆ. ಸ್ಥಳೀಯರು ಸೇರಿದಂತೆ ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಮಜ್ಜಿಗೆಪಾದೆ , ಕಿದಿಯೂರು ಉದಯ ಕುಮಾರ್ ಶೆಟ್ಟಿ ಅವರ ಮನೆ ಸಮೀಪದ ಗದ್ದೆಯಲ್ಲಿ ಹೆಚ್ಚು ಬೆಂಕಿ ಕಾಣಿಸಿಕೊಂಡಿದೆ. ಸಮೀಪದ ತೆಂಗಿನ ಮರಗಳಿಗೆ ಹೊರತುಪಡಿಸಿ ಇನ್ನಾವುದೇ ದೊಡ್ಡ ಹಾನಿಯಾಗಿಲ್ಲ.
ಜನ ಪ್ರತಿನಿಧಿಗಳಾದ ಉದಯ ಕುಮಾರ್ ಶೆಟ್ಟಿ, ರಾಜೇಂದ್ರ ಪಂದುಬೆಟ್ಟು ,
ವೆಂಕಟರಮಣ ಕಿದಿಯೂರು ಸೇರಿದಂತೆ ಅಂಬಲಪಾಡಿ ಗ್ರಾ.ಪಂ. ಸದಸ್ಯರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್