ಅನಾಥ ಸ್ಥಿತಿಯಲ್ಲಿ ಅಂಬಾಸಿಡರ್ ಕಾರು
Team Udayavani, Aug 17, 2019, 5:13 AM IST
ಉಡುಪಿ: ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಹಳೆಯ ಅಂಬಾಸಿಡರ್ ಕಾರೊಂದು ಅನಾಥ ಸ್ಥಿತಿಯಲ್ಲಿದೆ. ಕೆಎ01ಜಿ3682 ನೋಂದಣಿಯ ಈ ಕಾರನ್ನು ಮುಖ್ಯ ನ್ಯಾಯಿಕ ದಂಡಾಧಿಕಾರಿ ವಿವೇಕಾನಂದ ಎಸ್.ಪಂಡಿತ್ ಅವರು ಉಪಯೋಗಿಸುತ್ತಿದ್ದರು. ಸದ್ಯಕ್ಕೆ ಕಾರಿನ ಅವಧಿಯೂ ಮುಕ್ತಾಯಗೊಂಡಿದೆ. ನ್ಯಾಯಿಕ ದಂಡಾಧಿಕಾರಿಯವರಿಗೆ ಹೊಸ ಕಾರು ಬರುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಈಗ ಸಾರ್ವಜನಿಕವಾಗಿ ಅಂಬಾಸಿಡರ್ ಕಾರಿಗೆ ಬೇಡಿಕೆಯೂ ಇಲ್ಲವಾಗಿದೆ.