ಆ್ಯಂಬುಲೆನ್ಸ್‌,ವಿ.ಐ.ಪಿ.ವಾಹನಕ್ಕಿಲ್ಲ  ಪ್ರತ್ಯೇಕ ಪ್ರವೇಶ ದ್ವಾರ


Team Udayavani, Oct 23, 2018, 6:30 AM IST

2210kota1e.jpg

ಕೋಟ: ನ್ಯಾಯಾಧೀಶರು, ವಿ.ಐ.ಪಿ.ಗಳು ಸೇರಿದಂತೆ ಆ್ಯಂಬುಲೆನ್ಸ್‌ ಮುಂತಾದ ತುರ್ತು ಸೇವೆಯ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿಯ ಟೋಲ್‌ಗೇಟ್‌ನಲ್ಲಿ ಪ್ರತ್ಯೇಕ ಲೈನ್‌ನ ವ್ಯವಸ್ಥೆ ಮಾಡಬೇಕು. ಸಂಚಾರಕ್ಕೆ ಯಾವುದೇ ಅಡೆ-ತಡೆ ಇರಬಾರದು ಎನ್ನುವ ನ್ಯಾಯಾಲಯದ ಆದೇಶವಿದೆ. ಆದರೆ  ಸಾಸ್ತಾನದ ನವಯುಗ ಟೋಲ್‌ ಪ್ಲಾಜಾದಲ್ಲಿ ಈ ವ್ಯವಸ್ಥೆ ಇಲ್ಲ. ಹೀಗಾಗಿ ವಾಹನ ದಟ್ಟಣೆಯ ಸಂದರ್ಭ ಸಾಕಷ್ಟು ಸಮಸ್ಯೆಯಾಗುತ್ತಿದೆ.

ರೋಗಿಯ ಜೀವದ ಜತೆ ಚೆಲ್ಲಾಟ
ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುವಾಗ ರೋಗಿಯ ಜೀವ ಉಳಿಸುವ ನಿಟ್ಟಿನಲ್ಲಿ ಒಂದೊಂದು ನಿಮಿಷ  ಕೂಡ ಅಮೂಲ್ಯವಾಗಿರುತ್ತದೆ. ಆದರೆ ಸಾಸ್ತಾನದಲ್ಲಿ ವಾಹನ ದಟ್ಟನೆ ಸಂದರ್ಭ ಆ್ಯಂಬುಲೆನ್ಸ್‌ಗಳು ಇತರ ವಾಹನಗಳ ಹಿಂದೆ ದಾರಿ ಮಾಡಿಕೊಂಡು ಹೋಗಬೇಕು. ಇದರಿಂದ ನಿಮಿಷಗಟ್ಟಲೆ ಕಾಯ ಬೇಕಾದ ಪರಿಸ್ಥಿತಿ ಇದೆ ಹಾಗೂ ರೋಗಿಯ ಜೀವಕ್ಕೂ ಅಪಾಯವಿದೆ.

ನಿತ್ಯ ಪರದಾಟ
ವಾಹನ ದಟ್ಟನೆ ಹೆಚ್ಚಿದ್ದಾಗ ಆ್ಯಂಬುಲೆನ್ಸ್‌ಗಳು ಯಾವ ಲೈನ್‌ ಮೂಲಕ ಪ್ರವೇಶಿಸಬೇಕು ಎನ್ನುವ ಗೊಂದಲಕ್ಕೆ ಸಿಲುಕುತ್ತದೆ. ಕೆಲವೊಮ್ಮೆ  ಒಂದು ಮಾರ್ಗದಲ್ಲಿ  ಅರ್ಧ ದೂರಕ್ಕೆ ಸಾಗಿ ಟ್ರಾಫಿಕ್‌ ಜಾಮ್‌ ಆದಾಗ  ಪುನಃ ಹಿಂದಕ್ಕೆ ಬಂದು ಬೇರೆ ಮಾರ್ಗ ಅನುಸರಿಸುತ್ತವೆ. ಟೋಲ್‌ನ ಸಿಬಂದಿಗಳು ಇಂತಹ ಸಂದರ್ಭಗಳಲ್ಲಿ ದಾರಿ ಮಾಡಿಕೊಡಲು ಶ್ರಮಿಸುತ್ತಾರೆ.

ಫಾಸ್ಟ್‌  ಟ್ಯಾಗ್‌ ಮುಚ್ಚಿದ 
ಮೇಲೆ ಬೇರೆ ವ್ಯವಸ್ಥೆ ಇಲ್ಲ

ಟೋಲ್‌ಗೇಟ್‌ ಆರಂಭಿಸುವಾಗ ಕಾನೂನು ಪಾಲಿಸಿ ಅನುಮತಿ ಪಡೆಯುವ ಸಲುವಾಗಿ ಫಾಸ್ಟ್‌ಟ್ಯಾಗ್‌ ಮಾರ್ಗವನ್ನು ವಿ.ಐ.ಪಿ. ಲೈನ್‌ ಎಂದು ತೋರಿಸಲಾಗಿತ್ತು ಹಾಗೂ ಅಲ್ಲಿಯೇ ಆ್ಯಂಬುಲೆನ್ಸ್‌ ಮುಂತಾದ ವಾಹನಗಳಿಗೆ ಅವಕಾಶ ನೀಡಲಾಗಿತ್ತು. ನಾಲ್ಕೈದು ತಿಂಗಳ ಅನಂತರ ಈ ಮಾರ್ಗದಲ್ಲಿ ಫಾಸ್ಟ್‌ ಟ್ಯಾಗ್‌  ಕಾರ್ಯಚರಣೆ ಆರಂಭಗೊಂಡಿತು ಮತ್ತು ಇತರ ವಾಹನಗಳ ಸಂಚಾರ ತಡೆಯಲಾಯಿತು.

ಹಂಪ್ಸ್‌ಗಳನ್ನು ತೆರವುಗೊಳಿಸಬೇಕು ಹಾಗೂ ವಿ.ಐ.ಪಿ. ವಾಹನಗಳಿಗೆ ಬೇರೆ ವ್ಯವಸ್ಥೆ ಮಾಡಬೇಕು ಎಂದು ಹೆದ್ದಾರಿ ಜಾಗೃತಿ ವೇದಿಕೆ ಸೆ.20ರಂದು ನವಯುಗ ಕಂಪನಿಗೆ ಮನವಿ ಮಾಡಿತ್ತು.ಆದರೆ ಇದುವರೆಗೆ ಕ್ರಮಕೈಗೊಂಡಿಲ್ಲ.

ಹಂಪ್ಸ್‌ಗಳಿಂದ ಅಪಾಯ
ಈ ಟೋಲ್‌ಗೇಟ್‌ನ ಎರಡು ಕಡೆಗಳಲ್ಲಿ ದೊಡ್ಡದಾದ ವೇಗ ನಿಯಂತ್ರಕ (ಹಂಪ್ಸ್‌)ಗಳನ್ನು ಹಾಕಲಾಗಿದೆ.  ಇದರಿಂದ ಆ್ಯಂಬುಲೆನ್ಸ್‌ನಲ್ಲಿರುವ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ ಹಾಗೂ  ಹೊರಗಡೆಯಿಂದ ಬರುವ  ಆ್ಯಂಬುಲೆನ್ಸ್‌  ವಾಹನಗಳು ಹಮ್ಸ್‌ಗಳನ್ನು ಗಮನಿಸದೆ  ಹೆಚ್ಚಿನ ಅಪಾಯ ಎದುರಾದ ಉದಾಹರಣೆ ಇದೆ.

ನ್ಯಾಯಾಲಯದ ಆದೇಶದ ಉಲ್ಲಂಘನೆ 
ಟೋಲ್‌ ಪ್ಲಾಜಾಗಳಲ್ಲಿ ನ್ಯಾಯಾ ಧೀಶರು ಮತ್ತು ವಿ.ಐ.ಪಿ.ಗಳು ಗಂಟೆಗಟ್ಟಲೆ ಕಾಯಬೇಕು ಹಾಗೂ ಗುರುತಿನ ದಾಖಲೆಗಳನ್ನು ತೋರಿಸಬೇಕಾಗಿರುವುದು ಮುಜುಗರಕ್ಕೀಡಾಗುವ ಸನ್ನಿವೇಶ ಎದುರಾಗುತ್ತದೆ. ಆದ್ದರಿಂದ ಹೆದ್ದಾರಿಗಳ ಟೋಲ್‌ ಪ್ಲಾಜಾಗಳಲ್ಲಿ ಇವರಿಗೆ ಪ್ರತ್ಯೇಕ ಲೈನ್‌ ವ್ಯವಸ್ಥೆ ಮಾಡಬೇಕು ಮತ್ತು  ಈ ಆದೇಶ ದೇಶದಾದ್ಯಂತ ಅನ್ಯಯವಾಗುತ್ತದೆ ಎಂದು  ಮದ್ರಾಸ್‌ ಹೆ„ಕೋರ್ಟ್‌ನ ಹುಲುವಾಡಿ ಜಿ.ರಮೇಶ್‌ ಮತ್ತು ಎಂ.ವಿ.ಮುರುಳಿಧರ್‌ ಅವರಿದ್ದ  ದ್ವಿಸದಸ್ಯ ಪೀಠ  2018 ಆಗಸ್ಟ್‌ನಲ್ಲಿ ಖಡಕ್‌ ಆದೇಶ ನೀಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ಗೆ  ಇದನ್ನು  ಪಾಲಿಸುವಂತೆ  ಸೂಚಿಸಿತ್ತು. ಆದ್ದರಿಂದ ಇದೀಗ ಸಾಸ್ತಾನದಲ್ಲಿ ಪ್ರತ್ಯೇಕ ವ್ಯವಸ್ಥೆ ಇಲ್ಲದಿರುವುದು ನ್ಯಾಯಾಲಯದ ಆದೇಶದ ಉÉಲಂಘನೆಯಾಗಿದೆ.

ಮುಕ್ತ ವ್ಯವಸ್ಥೆ ಮಾಡಿ 
ಸಾಸ್ತಾನ ಟೋಲ್‌ನಲ್ಲಿ ಆ್ಯಂಬುಲೆನ್ಸ್‌ಗಳಿಗೆ ಪ್ರತ್ಯೇಕ ಮುಕ್ತ ಪ್ರವೇಶದ ವ್ಯವಸ್ಥೆ ಇಲ್ಲ. ಹೀಗಾಗಿ ವಾಹನ ದಟ್ಟನೆ  ಸಂದರ್ಭ ಸಾಕಷ್ಟು ಸಮಸ್ಯೆಯಾಗುತ್ತಿದೆ. ಕೆಲೆವೊಮ್ಮೆ ನಾಲ್ಕೈದು ನಿಮಿಷಗಳ ಕಾಲ ಪರದಾಡಿದ ಉದಾಹರಣೆ ಇದೆ ಹಾಗೂ ಹಮ್ಸ್‌  ಇರುವುದರಿಂದ  ರೋಗಿಗಳಿಗೆ ಸಮಸ್ಯೆ ಆಗುತ್ತದೆ.ಸಂಬಂಧಪಟ್ಟವರು  ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು.
– ನಾಗರಾಜ್‌ ಪುತ್ರನ್‌ ಕೋಟ, 
ಜೀವನ್‌ಮಿತ್ರ ಆ್ಯಂಬುಲೆನ್ಸ್‌

ಸಮಸ್ಯೆಯ ಅರಿವಿದೆ
ಸಾಸ್ತಾನದಲ್ಲಿನ ಸಮಸ್ಯೆಯ ಕುರಿತು ನಮಗೆ ಅರಿವಿದೆ ಹಾಗೂ  ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಆ್ಯಂಬುಲೆನ್ಸ್‌ಗಳು ಮುಕ್ತವಾಗಿ ಸಂಚರಿಸುವಂತೆ ವ್ಯವಸ್ಥೆ ಮಾಡಲು ಶೀಘ್ರ ಕ್ರಮಕೈಗೊಳ್ಳಲಾಗುವುದು.
– ಶಿವು,ನವಯುಗ ಟೋಲ್‌ ಮ್ಯಾನೇಜರ್‌

– ರಾಜೇಶ್‌ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.