ಮನೆ ಬಾಗಿಲಿಗೆ ಹೃದಯ ವೈದ್ಯರು ಯೋಜನೆ: ಗ್ರಾಮಪಂಚಾಯತ್ ಅಂಗನವಾಡಿಯಲ್ಲಿ ಇಸಿಜಿ ಉಪಕರಣ
ಉಳಿದ ಗ್ರಾಮಗಳಿಗೆ ಮುಂದಿನ ಹಂತದಲ್ಲಿ ಇಸಿಜಿ ಯಂತ್ರವನ್ನು ಪೂರೈಸಲಾಗುದು ಎಂದು ತಿಳಿಸಿದ್ದಾರೆ.
Team Udayavani, Jun 12, 2021, 12:13 PM IST
ಮಣಿಪಾಲ: ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಹೃದಯ ವಿಭಾಗದ ಮುಖ್ಯಸ್ಥರಾಗಿರುವ ಡಾ| ಪದ್ಮನಾಭ ಕಾಮತ್ ಅವರ ಮನೆಬಾಗಿಲಿಗೆ ಹೃದಯ ವೈದ್ಯರು (ಕಾರ್ಡಿಯೋಲಜಿಸ್ಟ್ ಎಟ್ ಡೋರ್ ಸ್ಟೆಪ್) ಯೋಜನೆಯ ಮತ್ತೊಂದು ಭಾಗವಾದ ಗ್ರಾಮ ಪಂಚಾಯತ್ ಅಂಗನವಾಡಿ ಯೋಜನೆಯಲ್ಲಿ ಇದೀಗ ಅಂಗನವಾಡಿ ಅಥವಾ ಗ್ರಾಮ ಪಂಚಾಯತ್ ಗೆ ಇಸಿಜಿ ಉಪಕರಣ ನೀಡಲಾಗುತ್ತಿದೆ.
ದೇಶದಲ್ಲೇ ಇದು ಮೊದಲ ಬಾರಿಗೆ ಗ್ರಾಮ ಪಂಚಾಯತ್ ಗಳು ಇಸಿಜಿ ಉಪಕರಣ ಹೊಂದಲಿದೆ. ಈ ವರ್ಷ 50 ಗ್ರಾಮಗಳಿಗೆ ಇಸಿಜಿ ಉಪಕರಣ ನೀಡಲು ಇವರು ಮುಂದಾಗಿದ್ದು, ಇದರ ಪ್ರಥಮ ಹಂತದ ಫಲಾನುಭವಿ ಗ್ರಾಮಗಳ ಪಟ್ಟಿ ಮಾಡಲಾಗಿದೆ.
ಜನಸಂಖ್ಯಾ ಆಧಾರದಲ್ಲಿ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಉಳಿದ ಗ್ರಾಮಗಳಿಗೆ ಮುಂದಿನ ಹಂತದಲ್ಲಿ ಇಸಿಜಿ ಯಂತ್ರವನ್ನು ಪೂರೈಸಲಾಗುದು ಎಂದು ತಿಳಿಸಿದ್ದಾರೆ.
ಪ್ರಥಮ ಹಂತದ ಫಲಾನುಭವಿ ಗ್ರಾಮಗಳು
1 ಮೆನ್ನಬೆಟ್ಟು ಗ್ರಾಮ – ಕಿನ್ನಿಗೋಳಿ ಪಟ್ಟಣ ಪಂಚಾಯತ್, ಮುಲ್ಕಿ ತಾಲೂಕು, ದ. ಕನ್ನಡ ಜಿಲ್ಲೆ ಇಸಿಜಿ ಉಸ್ತುವಾರಿ – ದಾಮೋದರ ಶೆಟ್ಟಿ.
2 ಸಾಣೂರು ಗ್ರಾಮ ಸಾಣೂರು ಗ್ರಾಮ ಪಂಚಾಯತ್, ಕಾರ್ಕಳ ತಾಲೂಕು, ದ.ಕ. ಇಸಿಜಿ ಉಸ್ತುವಾರಿ – ನರಸಿಂಹ ಕಾಮತ್ ಸಾಣೂರು.
3 ಮಿಯಾರು ಗ್ರಾಮ- ಮಿಯಾರು ಪಂಚಾಯತ್, ಕಾರ್ಕಳ ತಾಲೂಕು, ಉಡುಪಿ. ಇಸಿಜಿ ಉಸ್ತುವಾರಿ -ಬ್ರಿಯಾನ್ ಮತ್ತು ಡೇನಿಯಲ್.
4 ಪಡುಮಾರ್ನಾಡ್ – ಬೆಳ್ವಾಯಿ ಪಂಚಾಯತ್, ಮೂಡಬಿದ್ರಿ ತಾಲೂಕು, ದ. ಕ. ಇಸಿಜಿ ಉಸ್ತುವಾರಿ -ಅಭಿನಂದನ್ ಬಲ್ಲಾಳ್ ಮತ್ತು ಸತೀಶ್ ಚೌಟ.
5 ಪುತ್ತಿಗೆ ಗ್ರಾಮ – ಪುತ್ತಿಗೆ ಪಂಚಾಯತ್, ಮೂಡಬಿದ್ರಿ ತಾಲೂಕು, ದ. ಕ. ಇಸಿಜಿ ಉಸ್ತುವಾರಿ – ಗಾಯತ್ರಿ ಎಸ್. ಆಚಾರ್.
6 ಬಾಳೆಪುಣಿ ಗ್ರಾಮ – ಬಾಳೆಪುಣಿ ಪಂಚಾಯತ್, ಬಂಟ್ವಾಳ ತಾಲೂಕು, ದ. ಕ. ಇಸಿಜಿ ಉಸ್ತುವಾರಿ – ಯಾಕೂಬ್ ಮದಂಗಾರು.
7 ಸಾಲ್ಕೆರಿ ಮೊಗರು ಗ್ರಾಮ- ಅಳದಂಗಡಿ ಪಂಚಾಯತ್, ಬೆಳ್ತಂಗಡಿ ತಾಲೂಕು, ದ. ಕ. ಇಸಿಜಿ ಉಸ್ತುವಾರಿ -ಡಾ. ಚಿತ್ರ.
8 ಕೊಡಿಂಬಾಡಿ ಗ್ರಾಮ – ಕೊಡಿಂಬಾಡಿ ಪಂಚಾಯತ್ , ಪುತ್ತೂರು ತಾಲೂಕು,ದ. ಕ. ಇಸಿಜಿ ಉಸ್ತುವಾರಿ – ರಾಮಚಂದ್ರ.
9 ಸಜೀಪಮುನ್ನೂರು ಗ್ರಾಮ – ಸಜೀಪಮುನ್ನೂರು ಪಂಚಾಯತ್, ಬಂಟ್ವಾಳ ತಾಲೂಕು, ದ. ಕ. ಇಸಿಜಿ ಉಸ್ತುವಾರಿ – ಸುಮನ ಕ್ರಾಸ್ತ.
10 ನೂಜಿಬಾಳ್ತಿಲ ಗ್ರಾಮ- ನೂಜಿಬಾಳ್ತಿಲ – ಕಡಬ ತಾಲೂಕು, ದ. ಕ. ಇಸಿಜಿ ಉಸ್ತುವಾರಿ – ಚಂದ್ರಶೇಖರ/ ಗಂಗಮ್ಮ.
11 ಮುಚ್ಚೂರು ಗ್ರಾಮ- ಮುಚ್ಚೂರು ಪಂಚಾಯತ್,ಮಂಗಳೂರು ತಾಲೂಕು, ದ. ಕ. ಇಸಿಜಿ ಉಸ್ತುವಾರಿ – ಜನಾರ್ಧನ ಗೌಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ