ಅನ್ನ ವಿಟ್ಠಲ ನನ್ನವ; ಕೊಡದಿದ್ದರೆ ದಾವೆ : ಶೀರೂರು ಶ್ರೀ ಎಚ್ಚರಿಕೆ
Team Udayavani, Jul 17, 2018, 12:27 PM IST
ಉಡುಪಿ: ಶೀರೂರು ಮಠದ ಪಟ್ಟದ ದೇವರಾದ ಅನ್ನವಿಟ್ಠಲ ನನ್ನ ಸೊತ್ತು. ದೇವರ ಮೂರ್ತಿಯನ್ನು ಹಿಂದಿರುಗಿ ಕೊಡದೆ ಇದ್ದರೆ ನ್ಯಾಯಾಲಯದಲ್ಲಿ ಕ್ರಿಮಿನಲ್ ದಾವೆ ಹೂಡುವೆ ಎಂದು ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಎಚ್ಚರಿಸಿದ್ದಾರೆ.
ಶೀರೂರು ಮೂಲ ಮಠದಲ್ಲಿ ಸೋಮವಾರ ನಡೆದ 10 ಸಾವಿರ ಗಿಡ ನೆಡುವ ಕಾರ್ಯಕ್ರಮದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕೃಷ್ಣ ಮಠದ ಶ್ರೀಕೃಷ್ಣ ನನ್ನ ಸ್ವತ್ತಲ್ಲ, ಪಲಿಮಾರು ಮಠದ ರಾಮನೂ ನನ್ನ ಸ್ವತ್ತಲ್ಲ. ಆದರೆ ಶೀರೂರು ಮಠದ ಅನ್ನ ವಿಟ್ಠಲ ನನ್ನ ಸ್ವತ್ತು. ಅದನ್ನು ಹೇಗೆ ಪಡೆಯಬೇಕೆಂದು ನನಗೆ ಗೊತ್ತು ಎಂದರು.
ಅಷ್ಟಮಠದ ಯತಿಗಳು ಕಾರ್ಯ ನಿಮಿತ್ತ ಬೇರೆಡೆಗೆ ಹೋಗಬೇಕಾದ ಸಂದರ್ಭ ಅಥವಾ ಅನಾರೋಗ್ಯವಿರುವಾಗ ಪಟ್ಟದ ದೇವರನ್ನು ಕೃಷ್ಣಮಠದಲ್ಲಿ ಪೂಜೆಗೆ ಇಡುವುದು ಸಂಪ್ರದಾಯ. ನನಗೆ ಅನಾರೋಗ್ಯವಿದ್ದಾಗ ಪಟ್ಟದ ದೇವರನ್ನು ಕೃಷ್ಣ ಮಠದಲ್ಲಿ ಪೂಜೆಗೆಂದು ಇರಿಸಿದ್ದೇನೆ. ಕೃಷ್ಣ ಮಠದಿಂದ ಪಟ್ಟದ ದೇವರನ್ನು ಮರಳಿ ಕೊಡುವುದಿಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ. ಕೃಷ್ಣ ಮಠದ ಸುತ್ತ ಭದ್ರತಾ ಪಡೆ ಇರಿಸಿಕೊಂಡಿದ್ದೇಕೆ ಎಂದು ಪ್ರಶ್ನಿಸಿದರು.
ಶಿಷ್ಯ ಸ್ವೀಕಾರ- ಸಲಹೆ ಬೇಕಿಲ್ಲ
ಶಿಷ್ಯ ಸ್ವೀಕಾರದ ಬಗ್ಗೆ ಕೇಳಿದಾಗ, “ಇವರು ಯಾರು ನನ್ನ ಮಠದ ಶಿಷ್ಯ ಸ್ವೀಕಾರಕ್ಕೆ ಹೇಳುವವರು? ಎಲ್ಲ ಮಠಕ್ಕೂ ಶಿಷ್ಯ ಸ್ವೀಕರಿಸಬೇಕಾಗುತ್ತದೆ. ನಮಗೆ ಹೇಳುವುದು ಬೇಡ’ ಎಂದರು. ಈ ವಿಚಾರದ ಕುರಿತು ಕೃಷ್ಣ ಮಠದಲ್ಲಿ ನಡೆಯುವ ಯಾವುದೇ ಸಭೆಗೆ ನಾನು ಹೋಗುವುದಿಲ್ಲ. ನನ್ನ ನಿಲುವು ಅಚಲವಾಗಿದೆ ಎಂದು ಶ್ರೀಪಾದರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Theft; 13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!
MUST WATCH
ಹೊಸ ಸೇರ್ಪಡೆ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್ನಿಂದ ಸುಳ್ಳಿನ ರಾಜಕಾರಣ: BYR
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?