ಅಕ್ಷತಾ ಹೆಸರಿನಲ್ಲಿ ವಿದ್ಯಾರ್ಥಿ ವೇತನ ಕೊಡುತ್ತಿರುವ ಅಣ್ಣಾಮಲೈ
Team Udayavani, Jun 1, 2019, 6:00 AM IST
ಉಡುಪಿ: ನಾಲ್ಕು ವರ್ಷಗಳ ಹಿಂದೆ ಬೈಂದೂರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಅಕ್ಷತಾ ದೇವಾಡಿಗರ ಮೇಲೆ ನಡೆದ ಪೈಶಾಚಿಕ ಕೃತ್ಯ ನಡೆದು ಅಸುನೀಗಿದ್ದು ನೆನಪಿರಬಹುದು.
ಅಕ್ಷತಾ ದೇವಾಡಿಗ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ನ ಹೆಮ್ಮೆಯ ವಿದ್ಯಾರ್ಥಿನಿಯಾಗಿದ್ದಳು. ಆ ವರ್ಷ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಎಸ್ಪಿ ಅಣ್ಣಾಮಲೈ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಅಂದು ಅಕ್ಷತಾಳ ತಂದೆ, ತಾಯಿ, ತಂಗಿ ಪಾಲ್ಗೊಂಡಿದ್ದರು. ಅವರನ್ನು ಕಂಡ ಅಣ್ಣಾಮಲೈ ಪ್ರಕರಣದ ಬಗ್ಗೆ ಸಂತಾಪ ವ್ಯಕ್ತಪಡಿಸಿ ಅಕ್ಷತಾಳ ಹೆಸರನಲ್ಲಿ ತಾನು ಪ್ರತಿವರ್ಷ 10,000 ರೂ. ನೀಡುತ್ತೇನೆ. ಅದನ್ನು ಪ್ರತೀ ವರ್ಷ ಬೈಂದೂರು ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಸ್ಥಾನ ಗಳಿಸುವ ವಿದ್ಯಾರ್ಥಿನಿಗೆ ನೀಡಬೇಕೆಂದು ಸೂಚಿಸಿದರು. ತಾನು ಮುಂದೆ ವರ್ಗಾವಣೆಯಾದರೂ ಸಂಪರ್ಕಿಸಬೇಕೆಂದು ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ರಿಗೆ ನೀಡಿದರು.
ನಾಲ್ಕು ವರ್ಷಗಳಿಂದ ಅವರಿಗೆ ಫೋನ್ ಮಾಡಿ ನೆನಪಿಸುವ ಪ್ರಮೇಯವೇ ಬರಲಿಲ್ಲ. ಅವರೇ ಜುಲೈ ತಿಂಗಳಲ್ಲಿ ಪೋನ್ ಮಾಡಿ ಅಕ್ಷತಾಳ ಹೆಸರಿನ ವಿದ್ಯಾರ್ಥಿವೇತನದ ಹಣ ಕಳುಹಿಸಿಕೊಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?