ಶುದ್ಧ ಹಸ್ತ ಸ್ವಚ್ಛ ಮನಸ್ಸ್ಸು ಪವಿತ್ರತೆಗೆ ಮಾರ್ಗ
Team Udayavani, Feb 1, 2019, 1:00 AM IST
ಕಾರ್ಕಳ: ಕಳೆದ 5 ದಿನಗಳಿಂದ ವಿಜೃಂಭಣೆಯಿಂದ ನಡೆದ ಅತ್ತೂರು ಸಾಂತ್ ಮಾರಿ ಜಾತ್ರೆ ಗುರುವಾರ ಸಮಾಪನ ಗೊಂಡಿತು.
ಉಡುಪಿ ಧರ್ಮಾಧ್ಯಕ್ಷ ಡಾ| ಜೆರಾಲ್ಡ್ ಐಸಾಕ್ ಲೋಬೋ ಅವರು ಗುರುವಾರದ ವಿಶೇಷ ಬಲಿಪೂಜೆ ನೆರವೇರಿಸಿ ಪ್ರವಚನ ನೀಡಿದರು. ನಾವು ದಿನನಿತ್ಯದ ಕಾಯಕದಲ್ಲಿ ಪ್ರಾಮಾಣಿಕತೆ ಮೆರೆಯಬೇಕು. ಸಮಾಜದ ಎಲ್ಲರಿಗೂ ಪವಿತ್ರರಾಗಲು ಸಮಾನ ಅವಕಾಶವಿದ್ದು, ಶುದ್ಧ ಹಸ್ತ, ಸ್ವಚ್ಛ ಮನಸ್ಸು, ಮಾನವೀಯ ಮೌಲ್ಯ, ಸೇವಾ ಮನೋಭಾವ, ತ್ಯಾಗವೇ ಇದಕ್ಕಿರುವ ಸುಲಭ ಮಾರ್ಗವೆಂದರು.
ಇತರರನ್ನೂ ಗೌರವಿಸಿ
ಇತರ ಸಮುದಾಯದ ಜನರನ್ನು ಪ್ರೀತಿ ಗೌರವಾದರಗಳಿಂದ ಕಾಣಬೇಕು. ನೆರೆಯವರೊಂದಿಗೆ ಆತ್ಮೀಯತೆಯಿಂದ ಬೆರೆಯಬೇಕು. ಇದರಿಂದ ಪವಿತ್ರ್ಯತೆ ಹೊಂದಲು ಸಾಧ್ಯವೆಂದ ಡಾ| ಜೆರಾಲ್ಡ್ ಲೋಬೋ ಪರಿಸರವನ್ನು ಕೇವಲ ನಮ್ಮ ಉಪಯೋಗಕ್ಕೆ ತಕ್ಕಂತೆ ಬಳಸಿಕೊಳ್ಳದೇ ಅದರ ಸಂರಕ್ಷಣೆಯ ಹೊಣೆಯು ನಮ್ಮ ಜವಾಬ್ದಾರಿ ಎಂದು ತಿಳಿಯಬೇಕೆಂದರು.
ಕಾರ್ಕಳ ವಲಯ ಪ್ರಧಾನ ಧರ್ಮಗುರು ವಂ| ಜೊಸ್ವಿ ಫೆರ್ನಾಂಡಿಸ್, ಅತ್ತೂರು ಸಂತ ಲಾರೆನ್ಸ್ ಬಸಿಲಲಿಕಾ ಚರ್ಚ್ ನಿರ್ದೇಶಕ ಫಾ. ಜಾರ್ಜ್ ಡಿಸೋಜಾ, ಸಹಾಯಕ ಧರ್ಮಗುರು ವಂ| ಜೆನ್ಸಿಲ್ ಆಳ್ವ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂ ಭಕ್ತರಿಗೆ ಪ್ರಸಾದ
ಹಿಂದೂ ಭಕ್ತರಿಗಾಗಿ ಪುಷ್ಪ ಪ್ರಸಾದ ಹಾಗೂ ತೀರ್ಥವನ್ನು ನೀಡುವ ಪ್ರತ್ಯೇಕ ವ್ಯವಸ್ಥೆಯಿತ್ತು. ಗುರುವಾರ ಊರಿನ ಜಾತ್ರೆಯೆಂಬಂತೆ ಅಪರಾಹ್ನದ ಅನಂತರ ಸ್ಥಳೀಯರೇ ಹೆಚ್ಚಾಗಿ ಕಂಡುಬರುತ್ತಿದ್ದರು.
ಜಾರ್ಜ್ಗೆ ಶ್ರದ್ಧಾಂಜಲಿ
ಬುಧವಾರ ಬಲಿ ಪೂಜೆಯ ಕೊನೆಯಲ್ಲಿ ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ, ಮೌನಪ್ರಾರ್ಥನೆ ಸಲ್ಲಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ